ಹೊನ್ನಾಳಿ ಯಲ್ಲಿ ಭಗವಾನ್ ಶಿವನ ಚಿತ್ರವಿದ್ದ ಫಲಕವನ್ನು ಸುಟ್ಟು ಹಾಕಿದ ಸಮಾಜ ಘಾತುಕರು !

ಸಂದೇಹದ ಮೇರೆಗೆ ಅನ್ಯ ಕೋಮಿನ ಯುವಕನನ್ನು ವಶಕ್ಕೆ ಪಡೆದ ಪೊಲೀಸರು

ಚಿತ್ರ ಹಾಕುವ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುಉವದಾಗಿದೆ ! – ಸಂಪಾದಕರು

ದಾವಣಗೆರೆ – ಭಗವಾನ್ ಶಿವನ ಚಿತ್ರವಿರುವ ಫಲಕವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟುಹಾಕಿದ ಕಾರಣ, ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ಸ್ವಲ್ಪ ಸಮಯದವರೆಗೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದರು. ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿಯವರ ಕಾರ್ತಿಕ ದೀಪೋತ್ಸವದ ನಿಮಿತ್ತ ಈ ಫಲಕವನ್ನು ಅಳವಡಿಸಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಸಂದೇಹದ ಮೇಲೆ ಅನ್ಯ ಪಂಥೀಯ ಯುವಕನೊಬ್ಬನನ್ನು ಬಂಧಿಸಿದ್ದಾರೆ. ಹಾಗೆಯೇ, ಗ್ರಾಮದ ಪ್ರವೇಶ ದ್ವಾರದ ಬಳಿ ಹಾಕಲಾಗಿದ್ದ ಅನ್ಯ ಪಂಥಕ್ಕೆ ಸೇರಿದ ಹಸಿರು ಧ್ವಜವನ್ನೂ ತೆಗೆದುಹಾಕಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.