
‘ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ೮೩ ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ೧೭ ರಿಂದ ೧೯ ಮೇ ೨೦೨೫ ರ ಅವಧಿಯಲ್ಲಿ ಗೋವಾದ ಫೋಂಡಾದಲ್ಲಿನ ಫಾರ್ಮಾಗುಡಿಯಲ್ಲಿನ ಇಂಜನಿಯರಿಂಗ್ ವಿಶ್ವವಿದ್ಯಾಲಯದ ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ನೇರವೇರಿತು. ಈ ಸಮಯದಲ್ಲಿ ಕರ್ನಾಟಕ ರಾಜ್ಯದಿಂದ ಬಂದ ಸಾಧಕರಿಗೆ ಅರಿವಾದ ಅಂಶಗಳು ಮತ್ತು ಬಂದ ಅನುಭೂತಿಗಳನ್ನು ಇಲ್ಲಿ ಕೊಡಲಾಗಿದೆ.
೧. ಶ್ರೀಮತಿ ಗೀತಾ ಮಹಾಲೆ, ಕುಮಟಾ, ಉತ್ತರ ಕನ್ನಡ.
೧ ಅ. ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಭಾಗವಹಿಸಿದ ನಂತರ ಜೀವನದಲ್ಲಿನ ಅನೇಕ ಸಂಕಟಗಳ ನಿವಾರಣೆಯಾಗುವುದು : ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಭಾಗವಹಿಸುವ ಅವಕಾಶ ಸಿಗುವುದು, ಇದು ನನ್ನ ಹಿಂದಿನ ಜನ್ಮಗಳಲ್ಲಿನ ಪುಣ್ಯದ ಫಲವೇ ಆಗಿದೆ. ಪ.ಪೂ. ಗುರುದೇವರ ಕೃಪೆಯಿಂದ ನನಗೆ ಧನ್ವಂತರಿ ಯಾಗವನ್ನು ನೋಡುವ ಭಾಗ್ಯ ಸಿಕ್ಕಿತು. ಈ ಯಾಗಕ್ಕಾಗಿ ಭಾರತದ ಅನೇಕ ತೀರ್ಥಕ್ಷೇತ್ರಗಳಿಂದ ಸಾಧುಸಂತರು ಉಪಸ್ಥಿತರಿದ್ದರು. ಘೋರ ಅಂಧಃಕಾರವು ಕೇವಲ ಒಂದು ದೀಪವನ್ನು ಹಚ್ಚಿ ಹೇಗೆ ದೂರವಾಗುತ್ತದೆಯೋ, ಹಾಗೆಯೇ ಗುರುದೇವರ ಅಪಾರ ಕೃಪೆಯಿಂದ ನಮ್ಮ ಜೀವನದಲ್ಲಿನ ಅನೇಕ ಸಂಕಟಗಳ ನಿವಾರಣೆಯಾಗಿ ನಮಗೆ ಗುರುದೇವರು ಶಾಂತಿಯ ಅನುಭೂತಿಯನ್ನು ನೀಡಿದರು.
೧ ಆ. ‘ಸನಾತನ ಧರ್ಮ’ವು ಮಹಾನವಾಗಿದ್ದು ಈ ಧರ್ಮದಲ್ಲಿ ಜನ್ಮ ಪಡೆಯುವುದು’, ಭಾಗ್ಯದ ವಿಷಯವಾಗಿದೆ : ನಾವು ಭವ್ಯ ಧ್ವಜಾರೋಹಣ ಸಮಾರಂಭದ ಸಾಕ್ಷಿದಾರರಾದೆವು. ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ನಾವು ಅನೇಕ ಸಂತರ ಮತ್ತು ಸದ್ಗುರುಗಳ ಮಾರ್ಗದರ್ಶನವನ್ನು ಕೇಳಿದೆವು. ಆಗ ‘ಸನಾತನ ಧರ್ಮ’ವು ಎಷ್ಟು ಶ್ರೇಷ್ಠವಾಗಿದೆ ಮತ್ತು ಈ ಧರ್ಮದಲ್ಲಿ ಜನ್ಮ ಪಡೆಯುವುದೆಂದರೆ ಎಷ್ಟು ಭಾಗ್ಯದ ವಿಷಯವಾಗಿದೆ !’, ಎಂಬುದು ನಮ್ಮ ಗಮನಕ್ಕೆ ಬಂದಿತು.’
೨. ಕು. ಚಿತ್ರ ತಾಂಡೆಳ, ಹೊನ್ನಾವರ, ಉತ್ತರ ಕನ್ನಡ
೨ ಅ. ‘ದುರ್ಗಾದೇವಿಯು ಧರ್ಮಯುದ್ಧ ಮಾಡಿ ಹಿಂದೂ ರಾಷ್ಟ್ರದ ರಕ್ಷಣೆ ಮಾಡಲು ಅವತರಿಸಿದ್ದಾಳೆ’, ಎಂದು ಅರಿವಾಗುವುದು ಮತ್ತು ‘ಹಿಂದೂ ರಾಷ್ಟ್ರ ಹಾಗೂ ಧರ್ಮದ ರಕ್ಷಣೆಗಾಗಿ ಮಾಡಲಾದ ಒಂದು ‘ದಿವ್ಯ ಮಹಾಯಾಗ’ವಾಗಿದೆ ಎಂದು ಅನಿಸುವುದು : ‘ಶತಚಂಡಿ ಯಾಗದ ಸ್ಥಳದಲ್ಲಿ ನನಗೆ ಶ್ರೀ ದುರ್ಗಾದೇವಿಯ ದರ್ಶನವಾಯಿತು. ಆ ಸಮಯದಲ್ಲಿ ನನಗೆ ದೇವಿಯ ಮಸ್ತಕದ ಮೇಲೆ ತ್ರಿಶೂಲ, ಕಮಲ ಮತ್ತು ಆಮೆ ಕಾಣಿಸಿತು. ಆಗ ‘ದುರ್ಗಾದೇವಿಯು ಧರ್ಮಯುದ್ಧವನ್ನು ಮಾಡಿ ಹಿಂದೂ ರಾಷ್ಟ್ರದ ರಕ್ಷಣೆಗಾಗಿ ಅವತರಿಸಿದ್ದಾಳೆ’, ಎಂದು ಅರಿವಾಯಿತು. ಈ ಅನಭೂತಿಯಿಂದ ‘ಈ ಶತಚಂಡಿಯಾಗವು ಕೇವಲ ಒಂದು ಸಾಮಾನ್ಯ ಯಾಗವಾಗಿರದೇ, ‘ಹಿಂದೂ ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಮಾಡಲಾದ ಒಂದು ‘ದಿವ್ಯ ಮಹಾಯಾಗ’ ವಾಗಿತ್ತು’, ಎಂಬುದು ನನ್ನ ಗಮನಕ್ಕೆ ಬಂದಿತು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !