ರಾಜನಾಥ ಸಿಂಗ್ ಅವರ ‘ಸಿಂಧ್ ನಾಳೆ ಭಾರತಕ್ಕೆ ಮರಳಿ ಬರಬಹುದು’ ಎಂಬ ಹೇಳಿಕೆಗೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸಚಿವ ಸೈಯದ್ ಸರ್ದಾರ್ ಅಲಿ ಶಾ ಅವರ ಬಾಲಿಶ ಹೇಳಿಕೆ

ಕರಾಚಿ (ಪಾಕಿಸ್ತಾನ) – ಗುಜರಾತ್, ಹರಿಯಾಣ ಮತ್ತು ರಾಜಸ್ಥಾನ ನಮ್ಮವು. ನಾವು ಇದನ್ನು ಸಾಬೀತುಪಡಿಸುತ್ತೇವೆ, ಎಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸಚಿವ ಸೈಯದ್ ಸರ್ದಾರ್ ಅಲಿ ಶಾ ಅವರು ಬಾಲಿಶ ಹೇಳಿಕೆ ನೀಡಿದ್ದಾರೆ. ಸಿಂಧ್ ವಿಧಾನಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಿಂಧ್ಗೆ ಸಂಬಂಧಿಸಿದ ಹೇಳಿಕೆಗೆ ಅವರ ಪ್ರತಿಕ್ರಿಯೆ ಆಗಿದೆ. ಅಲಿ ಶಾ ಅವರು, ಭಾರತವು ಸಿಂಧ್ ಬಗ್ಗೆ ಟಿಪ್ಪಣಿ ಮಾಡಲು ಸಾಧ್ಯವಾದರೆ, ನಾನು ಕೂಡ ಭಾರತದ ರಾಜ್ಯಗಳ ಮೇಲೆ ಹಕ್ಕು ಸಾಧಿಸಬಹುದು, ಎಂದು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏನು ಹೇಳಿದ್ದರು?
ನವೆಂಬರ್ ೨೩ ರಂದು ದೆಹಲಿಯಲ್ಲಿ ಸಿಂಧಿ ಜನರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಇಂದು ಸಿಂಧ್ ಭೂಮಿ ಭಾರತದ ಭಾಗವಾಗಿಲ್ಲದಿದ್ದರೂ, ನಾಗರಿಕತೆಯ ಪ್ರಕಾರ ಸಿಂಧ್ ಯಾವಾಗಲೂ ಭಾರತದ ಭಾಗವಾಗಿರುತ್ತದೆ. ಭೂಮಿಯ ಬಗ್ಗೆ ಹೇಳುವುದಾದರೆ, ಗಡಿಗಳು ಯಾವಾಗ ಬೇಕಾದರೂ ಬದಲಾಗಬಹುದು. ನಾಳೆ ಬಹುಶಃ ಸಿಂಧ್ ಮತ್ತೆ ಭಾರತಕ್ಕೆ ಮರಳಿ ಬರಬಹುದು ಎಂದು ಹೇಳಿದ್ದರು.
ಸಿಂಗ್ ಅವರ ಹೇಳಿಕೆಯನ್ನು ‘ಜೇ ಸಿಂಧ್ ಮುತ್ತಾಹಿದಾ ಮಹಾಜ್’ ಸಂಸ್ಥೆ ಸ್ವಾಗತಿಸಿದೆ!
ಸಿಂಧ್ನ ನಾಯಕ ಶಫಿ ಬರ್ಫತ್ ಅವರ ‘ಜೇ ಸಿಂಧ್ ಮುತ್ತಾಹಿದಾ ಮಹಾಜ್’ ಸಂಸ್ಥೆಯು ಸಿಂಗ್ ಅವರ ಈ ಹೇಳಿಕೆಯನ್ನು ಬಲವಾಗಿ ಸ್ವಾಗತಿಸಿದೆ. ಈ ಹೇಳಿಕೆ ಸಿಂಧಿ ಜನರಿಗೆ ಐತಿಹಾಸಿಕ, ಉತ್ತೇಜಕ ಮತ್ತು ಪ್ರೇರಣಾದಾಯಕವಾಗಿದೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಸಿಂಧ್ನ ಸ್ವಾತಂತ್ರ್ಯ ಮತ್ತು ಭವಿಷ್ಯದಲ್ಲಿ ಭಾರತದೊಂದಿಗೆ ಬಲಿಷ್ಠ ಸಂಬಂಧಗಳ ಭರವಸೆಯನ್ನು ಸೃಷ್ಟಿಸುತ್ತದೆ. ಸಿಂಧ್ ಮತ್ತು ಭಾರತದ ನಡುವೆ ಆಳವಾದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಭಾವನಾತ್ಮಕ ಸಂಬಂಧಗಳಿವೆ ಎಂದು ನಾವು ಮೊದಲಿನಿಂದಲೂ ನಂಬಿದ್ದೇವೆ.
ಸಂಪಾದಕೀಯ ನಿಲುವುತನ್ನದೇ ದೇಶವನ್ನು ಒಗ್ಗಟ್ಟಾಗಿ ಇರಿಸಲು ಸಾಧ್ಯವಾಗದ ಪಾಕಿಸ್ತಾನದ ಸಚಿವರ ಈ ಹೇಳಿಕೆ ಹಾಸ್ಯಾಸ್ಪದ ಮತ್ತು ಅವರ ಬೌದ್ಧಿಕ ದಿವಾಳಿತನವನ್ನು ಬಯಲು ಮಾಡುತ್ತದೆ! ಇದು ‘ಎಲುಬಿಲ್ಲದ ನಾಲಿಗೆ ಹೇಗೆ ಬೇಕಾದರೂ ಹೊರಳಿಸಬಹುದು’ ಎಂಬ ರೀತಿಯಾಗಿದೆ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !