ಸಿಂಧ್ ಮತ್ತೆ ಭಾರತಕ್ಕೆ ಸೇರಬಹುದು’ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಹ ಅವರ ಹೇಳಿಕೆಗೆ ಪಾಕಿಸ್ತಾನದ ಪ್ರತಿಕ್ರಿಯೆ!

ನವದೆಹಲಿ / ಇಸ್ಲಾಮಾಬಾದ್ – ಇಂದು ನಾನು ಅವರ (ಲಾಲ್ ಕೃಷ್ಣ ಅಡ್ವಾಣಿ ಅವರ) ಒಂದು ಹೇಳಿಕೆಯನ್ನು ಹೇಳುತ್ತಿದ್ದೇನೆ. ಇಂದು ಸಿಂಧ್ನ ಭೂಮಿ ಭಾರತದ ಭಾಗವಾಗಿಲ್ಲದಿರಬಹುದು; ಆದರೆ ಸಂಸ್ಕೃತಿಯ ದೃಷ್ಟಿಯಿಂದ ಸಿಂಧ್ ಯಾವಾಗಲೂ ಭಾರತದ ಭಾಗವಾಗಿರುತ್ತದೆ. ಇನ್ನು ಭೂಮಿಯ ವಿಷಯಕ್ಕೆ ಬಂದರೆ, ‘ಗಡಿ ಯಾವಾಗ ಬದಲಾಗುತ್ತದೆ’ ಎಂದು ಯಾರೂ ಹೇಳಲು ಸಾಧ್ಯವಿಲ್ಲ; ಏಕೆಂದರೆ ನಾಳೆ ಸಿಂಧ್ ಮತ್ತೆ ಭಾರತಕ್ಕೆ ಮರಳಿ ಬರಬಹುದು. ಸಿಂಧೂ ನದಿಯನ್ನು ಪವಿತ್ರವೆಂದು ಭಾವಿಸುವ ನಮ್ಮ ಸಿಂಧ್ನ ಜನರು, ಅವರು ಎಲ್ಲೇ ಇದ್ದರೂ, ಯಾವಾಗಲೂ ನಮ್ಮವರೇ ಆಗಿರುತ್ತಾರೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನವೆಂಬರ್ 23 ರಂದು ಹೇಳಿಕೆ ನೀಡಿದ್ದರು. ಇದಕ್ಕೆ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರತಿಕ್ರಿಯೆ ನೀಡಿದೆ. ಇಂತಹ ಹೇಳಿಕೆಗಳು ಸ್ಥಾಪಿತ ವಾಸ್ತವಕ್ಕೆ ಸವಾಲು ಹಾಕಲು ಪ್ರಯತ್ನಿಸುವ ಹಿಂದುತ್ವದ ಮನಸ್ಥಿತಿಯನ್ನು ಬಯಲು ಮಾಡುತ್ತಿದೆ ಮತ್ತು ಅಂತರರಾಷ್ಟ್ರೀಯ ಕಾನೂನುಗಳು, ಮಾನ್ಯತೆ ಪಡೆದ ಗಡಿಗಳು ಮತ್ತು ದೇಶದ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪ್ರತಿಕ್ರಿಯಿಸಿದೆ.
ಸಮಸ್ತ ಭಾರತದ ಹಿಂದೂಗಳು ಸಿಂಧೂ ನದಿಯನ್ನು ಪವಿತ್ರವೆಂದು ಭಾವಿಸುತ್ತಾರೆ!
ಸಿಂಧಿ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಹ ಅವರು, ಭಾಜಪದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಪುಸ್ತಕವನ್ನು ಉಲ್ಲೇಖಿಸಿ, ಅಡ್ವಾಣಿ ಅವರ ಪೀಳಿಗೆಯ ಅನೇಕ ಸಿಂಧಿ ಹಿಂದೂಗಳಿಗೆ ‘ಸಿಂಧ್ ಭಾರತದಿಂದ ಬೇರ್ಪಟ್ಟಿದೆ’ ಎಂಬುದನ್ನು ಇಂದಿಗೂ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ ಎಂದು ಹೇಳಿದರು. 1947 ರ ವಿಭಜನೆಯಿಂದಾಗಿ ಪಾಕಿಸ್ತಾನದ ರಚನೆಯಾಯಿತು ಮತ್ತು ಸಿಂಧೂ ನದಿಯ ಪಕ್ಕದ ಸಿಂಧ್ ಪ್ರದೇಶವು ಅಂದಿನಿಂದ ಪಾಕಿಸ್ತಾನದ ಭಾಗವಾಗಿದೆ. ನಾನು ಇಂದು ಈ ಸಂದರ್ಭದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಉಲ್ಲೇಖಿಸಲು ಬಯಸುತ್ತೇನೆ. ಅವರು ತಮ್ಮ ಒಂದು ಪುಸ್ತಕದಲ್ಲಿ, ಸಿಂಧಿ ಹಿಂದೂಗಳು, ವಿಶೇಷವಾಗಿ ಅವರ ಪೀಳಿಗೆಯ ಜನರು, ಸಿಂಧ್ ಪ್ರಾಂತ್ಯ ಭಾರತದಿಂದ ಬೇರ್ಪಟ್ಟಿರುವುದನ್ನು ಇಂದಿಗೂ ಒಪ್ಪಿಕೊಂಡಿಲ್ಲ ಎಂದು ಬರೆದಿದ್ದಾರೆ. ಸಿಂಧ್ನಲ್ಲಿ ಮಾತ್ರವಲ್ಲ, ಸಮಸ್ತ ಭಾರತದಲ್ಲಿ ಹಿಂದೂಗಳು ಸಿಂಧೂ ನದಿಯನ್ನು ಪವಿತ್ರವೆಂದು ಭಾವಿಸುತ್ತಾರೆ ಮತ್ತು ಸಿಂಧ್ನ ಕೆಲವು ಮುಸಲ್ಮಾನರು ಕೂಡ ಸಿಂಧೂ ನದಿಯನ್ನು ಪವಿತ್ರವೆಂದು ಭಾವಿಸುತ್ತಿದ್ದರು. ಸಿಂಧೂ ನದಿಯ ನೀರು ಮೆಕ್ಕಾದ ‘ಆಬ್-ಎ-ಜಮ್ಜಮ್’ (ಮೆಕ್ಕಾದ ಜಮ್ಜಮ್ ಬಾವಿಯ ನೀರು) ಗಿಂತ ಕಡಿಮೆ ಪವಿತ್ರವಾಗಿಲ್ಲ. ಇದು ಅಡ್ವಾಣಿಯವರ ವಾಕ್ಯವಾಗಿದೆ,” ಎಂದು ರಾಜನಾಥ್ ಸಿಂಹ ಹೇಳಿದರು.
ಸಂಪಾದಕೀಯ ನಿಲುವುಸಿಂಧ್ ಮತ್ತು ಸಿಂಧೂ ನದಿಯನ್ನು ಮತ್ತೆ ಭಾರತಕ್ಕೆ ತರಲು ಹಿಂದುತ್ವದ ಮನಸ್ಥಿತಿಗೆ ಮಾತ್ರ ಸಾಧ್ಯ ಎಂಬುದು ಪಾಕಿಸ್ತಾನಕ್ಕೂ ತಿಳಿದಿದೆ. ಸ್ವಾತಂತ್ರ್ಯವೀರ ಸಾವರ್ಕರ್ ಹೇಳಿದಂತೆ, ‘ಸಿಂಧುವಿಲ್ಲದ ಹಿಂದೂ ಅಪೂರ್ಣ’ ಆಗಿರುವುದರಿಂದ ಈ ಘಟನೆ ಶೀಘ್ರದಲ್ಲೇ ನಡೆಯಲಿ ಎಂಬುದು ಹಿಂದುತ್ವನಿಷ್ಠರ ಬಯಕೆಯಾಗಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!