|

ನವದೆಹಲಿ – ದೆಹಲಿ ಪೊಲೀಸರು ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದಿದ್ದಾರೆ. ಪೊಲೀಸರು ನಾಲ್ವರು ಕಳ್ಳಸಾಗಣೆದಾರರನ್ನು ಬಂಧಿಸಿ ಅವರಿಂದ 10ವಿದೇಶಿ ಪಿಸ್ತೂಲ್ಗಳು ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
🚨 International Arms Racket Busted in Delhi!
Delhi Police have arrested 4 traffickers and seized 10 foreign-made pistols – smuggled into India via drones from Pakistan, after being sourced from Türkiye & China.
These weapons were being supplied to the gangs of Lawrence… pic.twitter.com/Mgqrm9cJhl
— Sanatan Prabhat (@SanatanPrabhat) November 22, 2025
1. ಪೊಲೀಸರು ಹೇಳಿರುವುದೇನೆಂದರೆ, ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಗುಣಮಟ್ಟ ಮತ್ತು ಜಾಲದ ವ್ಯಾಪ್ತಿಯನ್ನು ಗಮನಿಸಿದರೆ, ಇದು ಸಂಘಟಿತ ಮತ್ತು ಹೆಚ್ಚಿನ ಹಣಕಾಸಿನ ನೆರವು ಹೊಂದಿರುವ ಕಳ್ಳಸಾಗಣೆ ಗುಂಪು ಎಂಬುದು ಸ್ಪಷ್ಟವಾಗುತ್ತದೆ. ಈ ಜಾಲವು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿತ್ತು. ಶಸ್ತ್ರಾಸ್ತ್ರಗಳನ್ನು ಮೊದಲು ಟರ್ಕಿ ಮತ್ತು ಚೀನಾದಿಂದ ಪಾಕಿಸ್ತಾನಕ್ಕೆ ಸಾಗಿಸಲಾಗುತ್ತಿತ್ತು. ನಂತರ ಈ ಶಸ್ತ್ರಾಸ್ತ್ರಗಳನ್ನು ಡ್ರೋನ್ ಗಳ ಮೂಲಕ ಪಂಜಾಬಿನಲ್ಲಿ ಬಿಡಲಾಗುತ್ತಿತ್ತು.ಬಳಿಕ, ಈ ಶಸ್ತ್ರಾಸ್ತ್ರಗಳನ್ನು ಉತ್ತರ ಪ್ರದೇಶ ಮತ್ತು ಪಂಜಾಬಿನ ಕಳ್ಳಸಾಗಣೆದಾರರ ಸಹಾಯದಿಂದ ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಿಗೆ ಸಾಗಿಸಲಾಗುತ್ತಿತ್ತು.ಅಲ್ಲಿಂದ ಈ ಶಸ್ತ್ರಾಸ್ತ್ರಗಳನ್ನು ಲಾರೆನ್ಸ್ ಬಿಷ್ಣೋಯ್, ಬಂಬಿಹಾ, ಗೋಗಿ ಮತ್ತು ಹಿಮಾಂಶು ಮುಂತಾದ ಪ್ರಮುಖ ಗೂಂಡಾ ಗುಂಪುಗಳಿಗೆ ತಲುಪಿಸಲಾಗುತ್ತಿತ್ತು.
2. ಬಂಧಿತ ಆರೋಪಿಗಳು ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಸೇರಿದವರಾಗಿದ್ದು, ಅವರ ಹೆಸರುಗಳು ಮನದೀಪ್, ಅಜಯ್, ದಲ್ವಿಂದರ್ ಮತ್ತು ರೋಹನ ಎಂದು ತಿಳಿದುಬಂದಿದೆ. ಇಲ್ಲಿಯ ವರೆಗೆ ಭಾರತಕ್ಕೆ ಎಷ್ಟು ಬಾರಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾಗಿದೆ ಮತ್ತು ಯಾವ ಗುಂಪುಗಳಿಗೆ ಅವುಗಳನ್ನು ಮಾರಾಟ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ
ಸಂಪಾದಕೀಯ ನಿಲುವುಜಪ್ತಿ ಮಾಡಲಾದ ಪಿಸ್ತೂಲ್ ಗಳೇ ಇಷ್ಟೊಂದು ಇದ್ದರೆ, ಜಪ್ತಿ ಮಾಡದೇ ಇರುವವು ಎಷ್ಟು ಇರಬಹುದು? ಮತ್ತು ಮುಂದೆ ಅವು ಭಾರತಕ್ಕೆ ಬರುವುದಿಲ್ಲ ಎಂದು ಪೊಲೀಸರು ಖಾತರಿ ನೀಡಬಲ್ಲರೇ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!