
ನವದೆಹಲಿ – ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತಳಾಗಿರುವ ಮಹಿಳಾ ವೈದ್ಯೆ ಡಾ. ಶಾಹೀನ್ ಶಾಹಿದ್ 14 ರಿಂದ 18 ವರ್ಷ ವಯಸ್ಸಿನ ಮುಸ್ಲಿಂ ಹುಡುಗಿಯರು ಮತ್ತು ವಿಚ್ಛೇದಿತ ಅಥವಾ ಕುಟುಂಬದಿಂದ ದೂರವಿರುವ ಮುಸ್ಲಿಂ ಮಹಿಳೆಯರನ್ನು ‘ಮಾನವ ಬಾಂಬ್’ ಆಗಿ ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದಳು. ಆಕೆಯ ಮೊಬೈಲ್ ಸಂದೇಶಗಳಿಂದ ಈ ವಿಷಯ ಬಹಿರಂಗವಾಗಿದೆ. ಮಾನವ ಬಾಂಬ್ ಅನ್ನು ‘ಮುಜಾಹಿದ್ ಜಂಗ್ಜೂ’ ಎಂಬ ಪದದಿಂದ ಉಲ್ಲೇಖಿಸಲಾಗುತ್ತಿತ್ತು. ನೇರವಾಗಿ ಆತ್ಮಹತ್ಯಾ ಅಥವಾ ಮಾನವ ಬಾಂಬ್ ಎಂಬ ಪದಗಳ ಬಳಕೆ ಮಾಡಲಿಲ್ಲ. ಶಾಹೀನ್ ಸ್ವತಃ ಸಂಪೂರ್ಣ ಕೆಲಸದ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಳು ಮತ್ತು ತನ್ನ ಹ್ಯಾಂಡ್ಲರ್ಗೆ (ಸಂಚಾಲಕನಿಗೆ) ನಿರಂತರವಾಗಿ ಮಾಹಿತಿ ಕಳುಹಿಸುತ್ತಿದ್ದಳು.
ಈ ಕುತಂತ್ರಕ್ಕೆ ‘ಮಿಷನ್ ಕಾಫಿರ್’ ಎಂದು ಹೆಸರಿಸಲಾಗಿತ್ತು!
ಈ ಕುತಂತ್ರಕ್ಕೆ ‘ಮಿಷನ್ ಕಾಫಿರ್’ ಎಂದು ಹೆಸರಿಸಲಾಗಿತ್ತು. ಮೊದಲು ಕಟ್ಟರ್ ವಿಚಾರಸರಣಿಗೆ ಒಲವು ತೋರುವ ಹುಡುಗಿಯರು ಮತ್ತು ಮಹಿಳೆಯರನ್ನು ಆಯ್ಕೆ ಮಾಡುವುದು, ನಂತರ ತರಬೇತಿ ನೀಡುವುದು ಮತ್ತು ಕೊನೆಯಲ್ಲಿ ಸ್ಫೋಟಕಗಳಿಂದ ತುಂಬಿದ ನಿಲುವಂಗಿಯನ್ನು ಧರಿಸಿ ಜನನಿಬಿಡ ಸ್ಥಳಗಳಿಗೆ ಕಳುಹಿಸುವುದು, ಇದು ಯೋಜನೆಯಾಗಿತ್ತು.
ಸ್ಫೋಟಕ ಸಾಮಗ್ರಿಗಳ ಬೇಡಿಕೆಯನ್ನೂ ಇಟ್ಟಿದ್ದ ಡಾ.ಶಾಹೀನ್!
ಡಾ. ಶಾಹೀನ್ ಪಾಕಿಸ್ತಾನದಲ್ಲಿರುವ ತನ್ನ ಸಂಚಾಲಕನ ಸೂಚನೆಯ ಮೇರೆಗೆ ದೊಡ್ಡ ಪ್ರಮಾಣದಲ್ಲಿ ಸ್ಫೋಟಕ ಸಾಮಗ್ರಿಗಳನ್ನು ತರಿಸಿಕೊಂಡಿದ್ದಳು. ಫರಿದಾಬಾದ್ ಮತ್ತು ಇತರ ಸ್ಥಳಗಳಿಂದ ಈ ಸ್ಫೋಟಕ ಸಾಮಗ್ರಿಗಳನ್ನು ಇದುವರೆಗೆ ಜಪ್ತಿ ಮಾಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ