ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ’ ಆಯೋಜಿಸಿದ ಸಭೆ!

ಮುಂಬಯಿ – ಕೌರವರು ಪಾಂಡವರಿಗೆ 5 ಹಳ್ಳಿಗಳನ್ನೂ ನೀಡದ ಕಾರಣ ಮಹಾಭಾರತ ನಡೆಯಿತು. ಹಿಂದೂಗಳು ಸಂಧಾನ ಮಾಡುತ್ತಿದ್ದರೂ, ಮತಾಂಧರು ಮಂದಿರಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಆದ್ದರಿಂದ, ಕೇವಲ ಶ್ರೀಕೃಷ್ಣ ಜನ್ಮಭೂಮಿ ಮಾತ್ರವಲ್ಲ, ಅತಿಕ್ರಮಣಕ್ಕೊಳಗಾದ ದೇಶದ ಲಕ್ಷಾಂತರ ಮಂದಿರಗಳನ್ನು ಹಿಂದೂಗಳು ಮತ್ತೆ ಹಿಂಪಡೆಯಬೇಕು. ಅದಕ್ಕಾಗಿ ಹಿಂದೂಗಳು ಸಿದ್ಧರಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಪ್ರವಕ್ತರಾದ ಶ್ರೀ. ಸತೀಶ ಕೋಚರೇಕರ ಅವರು ಕರೆ ನೀಡಿದರು. ‘ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ’ದ ವತಿಯಿಂದ ವರಳಿಯ ಜಾಂಬೋರಿ ಮೈದಾನದಲ್ಲಿ ಆಯೋಜಿಸಲಾದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ವೇದಿಕೆಯ ಮೇಲೆ ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸದ ರಾಷ್ಟ್ರೀಯ ಅಧ್ಯಕ್ಷರಾದ ಪಂ. ದಿನೇಶ ಫಲಾಹಾರಿ ಮಹಾರಾಜರು. ಅಂತರರಾಷ್ಟ್ರೀಯ ಪ್ರಚಾರಕ ಪ್ರಿಯಾಕಿಶೋರಿ ಭಾರದ್ವಾಜ, ರಾಷ್ಟ್ರೀಯ ಸಹಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ. ಉಪೇಂದ್ರ ಡಹಾಕೆ ಮತ್ತು ‘ರಾಯಗಡ ಸಂವರ್ಧನ ಪ್ರತಿಷ್ಠಾನ’ದ ಅಧ್ಯಕ್ಷರಾದ ಶ್ರೀ. ರಾಜೇಂದ್ರ ಸಾವಂತ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಶ್ರೀ. ಸತೀಶ ಕೋಚರೇಕರ ಅವರು ಮಾತನಾಡುತ್ತಾ, ”ಮದನ ಮೋಹನ ಮಾಳವೀಯ ಅವರು ಶ್ರೀಕೃಷ್ಣ ಜನ್ಮಭೂಮಿ ಸ್ಥಳದಲ್ಲಿ ಮಂದಿರ ನಿರ್ಮಿಸಲು ಪ್ರಯತ್ನಿಸುತ್ತಿದ್ದರು; ಆದರೆ ಅಂದಿನ ಕಾಂಗ್ರೆಸ್ ಸರಕಾರವು ಅದನ್ನು ಮಾಡಲು ಬಿಡಲಿಲ್ಲ. ಈ ಇತಿಹಾಸ ಹಿಂದೂಗಳಿಗೆ ತಿಳಿದಿರಬೇಕು. ಶ್ರೀರಾಮಜನ್ಮಭೂಮಿಗಾಗಿ 500 ವರ್ಷಗಳ ಕಾಲ ಹೋರಾಟ ಮಾಡಬೇಕಾಯಿತು. ಅದೇ ರೀತಿ, ಇತರ ಮಂದಿರಗಳಿಗಾಗಿಯೂ ಹಿಂದೂಗಳು ಹೋರಾಟ ಮಾಡಬೇಕಾಗುತ್ತದೆ,” ಎಂದು ಹೇಳಿದರು.
ಹಿಂದೂಗಳು ಜಾತಿಭೇದ ಮತ್ತು ಪ್ರಾಂತಭೇದವನ್ನು ಬದಿಗಿಟ್ಟು ಸಂಘಟಿತರಾಗಬೇಕು! – ರಾಜೇಂದ್ರ ಸಾವಂತ, ಅಧ್ಯಕ್ಷರು, ರಾಯಗಡ ಸಂವರ್ಧನ ಪ್ರತಿಷ್ಠಾನ
ಶ್ರೀಕೃಷ್ಣ ಜನ್ಮಭೂಮಿಯನ್ನು ಅತಿಕ್ರಮಣ ಮುಕ್ತಗೊಳಿಸಲು ಹಿಂದೂಗಳು ಜಾತಿಭೇದ ಮತ್ತು ಪ್ರಾಂತಭೇದವನ್ನು ಬದಿಗಿಟ್ಟು ಸಂಘಟಿತರಾಗಬೇಕು. ಈ ಮಹಾನ್ ಕಾರ್ಯಕ್ಕಾಗಿ ಪರಮಾತ್ಮನು ನಮಗೆ ಶಕ್ತಿಯನ್ನು ನೀಡುತ್ತಾನೆ. ಅದಕ್ಕಾಗಿಯೇ ಶ್ರೀ ನಾರಾಯಣ ಮಹಾಯಜ್ಞವನ್ನು ಆಯೋಜಿಸಲಾಗಿತ್ತು. ಶ್ರೀಕೃಷ್ಣ ಜನ್ಮಭೂಮಿಯನ್ನು ಪಡೆಯಲು ಹಿಂದೂಗಳು ಸಿದ್ಧರಾಗಬೇಕು, ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸದ ರಾಷ್ಟ್ರೀಯ ಸಹಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ. ಉಪೇಂದ್ರ ಡಹಾಕೆ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ. ಶಂಕರ ವರಾಡಕರ ಅವರೂ ಸಹ ಉಪಸ್ಥಿತರಿಗೆ ಮಾರ್ಗದರ್ಶನ ಮಾಡಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ