ದೆಹಲಿಯ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಸೋಮನಾಥದ ಪ್ರಾಚೀನ ಶಿವಲಿಂಗದ ಅವಶೇಷಗಳ ದರ್ಶನವಾಗಲಿದೆ! – Sanatan Rashtra Shankhanad Mahotsav Delhi

ಜಿ.ಕೆ. ಸೀತಾರಾಮನ್ ಶಾಸ್ತ್ರಿಗಳಿಗೆ ಆಮಂತ್ರಣ ನೀಡುತ್ತಿರುವ ಶ್ರೀಚಿತ್ ಶಕ್ತಿ ಸೌ. ಅಂಜಲಿ ಮುಕುಲ್ ಗಾಡಗೀಳ

ತಂಜಾವೂರು (ತಮಿಳುನಾಡು) – ಇತ್ತೀಚೆಗೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲೊಬ್ಬರಾದ ಶ್ರೀಚಿತ್ ಶಕ್ತಿ ಸೌ. ಅಂಜಲಿ ಮುಕುಲ್ ಗಾಡಗೀಳ ಅವರು ತಂಜಾವೂರಿನ ಕಲಾಂಚೇರಿಯಲ್ಲಿರುವ ‘ಶ್ರೀ ವೇದವಿದ್ಯಾ ಗುರುಕುಲಂ’ಗೆ ಭೇಟಿ ನೀಡಿದರು. ಅಲ್ಲಿ ಅವರು ವೇದಪ್ರಚಾರರತ್ನಂ ಜ್ಯೋತಿಷ್ಯ ವಿದ್ಯಾರತ್ನಂ ಜಿ.ಕೆ. ಸೀತಾರಾಮನ್ ಶಾಸ್ತ್ರಿಗಳನ್ನು ಭೇಟಿ ಮಾಡಿ, ಡಿಸೆಂಬರ್ ೧೩ ಮತ್ತು ೧೪ ರಂದು ದೆಹಲಿಯಲ್ಲಿ ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಆಮಂತ್ರಣ ನೀಡಿದರು.

ಸೋಮನಾಥದಲ್ಲಿರುವ ಪ್ರಾಚೀನ ಶಿವಲಿಂಗ

ಸೀತಾರಾಮನ್ ಶಾಸ್ತ್ರಿಗಳ ಪೂರ್ವಜರು ಪ್ರಾಚೀನ ಸೋಮನಾಥ ಶಿವಲಿಂಗದ ಅವಶೇಷಗಳ ಗೌರವಾನ್ವಿತ ಸಂರಕ್ಷಕರಾಗಿದ್ದರು. ಭೇಟಿಯ ಸಮಯದಲ್ಲಿ, ಶ್ರೀಚಿತ್ ಶಕ್ತಿ ಸೌ. ಅಂಜಲಿ ಮುಕುಲ್ ಗಾಡಗೀಳ ಅವರು ಪವಿತ್ರ ಶಿವಲಿಂಗಕ್ಕೆ ಅಭಿಷೇಕ ಮಾಡಿದರು ಮತ್ತು ಈ ದಿವ್ಯ ಪರಂಪರೆಯ ವಂಶಾವಳಿ ಹಾಗೂ ಮಹತ್ವದ ಬಗ್ಗೆ ಜಿ.ಕೆ. ಸೀತಾರಾಮನ್ ಜಿ ಅವರೊಂದಿಗೆ ಆಧ್ಯಾತ್ಮಿಕ ಸಂವಾದ ನಡೆಸಿದರು.

ವೇದಕುಲಪತಿ ಜಿ.ಕೆ. ಸೀತಾರಾಮನ್ ಜಿ ಅವರು ಮಹೋತ್ಸವದ ಆಮಂತ್ರಣವನ್ನು ಸ್ವೀಕರಿಸಿದ್ದು, ಪವಿತ್ರ ಸೋಮನಾಥ ಶಿವಲಿಂಗದ ಅವಶೇಷಗಳನ್ನು ಮಹೋತ್ಸವಕ್ಕಾಗಿ ತರಲಿದ್ದಾರೆ. ಇದರಿಂದ ಭಕ್ತಾದಿಗಳಿಗೆ ಈ ಪವಿತ್ರ ಪರಂಪರೆಗೆ ಸಾಕ್ಷಿಯಾಗಲು ಸಾಧ್ಯವಾಗುತ್ತದೆ.

ರಾಜಸ್ಥಾನದ ಪ್ರಸಿದ್ಧ ಮೆಹಂದೀಪುರ ಬಾಲಾಜಿ ಮಂದಿರದ ಸಿದ್ಧಪೀಠಾಧೀಶ್ವರ ಶ್ರೀನರೇಶಪುರಿ ಮಹಾರಾಜರಿಗೆ ಆಮಂತ್ರಣ!

ಎಡದಿಂದ ಶ್ರೀ. ಆನಂದ್ ಜಾಖೋಟಿಯಾ, ಶ್ರೀಚಿತ್ ಶಕ್ತಿ  ಸೌ. ಅಂಜಲಿ ಮುಕುಲ್ ಗಾಡಗೀಳ ಮತ್ತು ಆಮಂತ್ರಣ ಸ್ವೀಕರಿಸುತ್ತಿರುವ ಶ್ರೀನರೇಶಪುರಿ ಮಹಾರಾಜರು.

ಶ್ರೀಚಿತ್ ಶಕ್ತಿ ಸೌ. ಅಂಜಲಿ ಮುಕುಲ್ ಗಾಡಗೀಳ ಅವರು ಜೈಪುರದ ಪ್ರಸಿದ್ಧ ಮೆಹಂದೀಪುರ ಬಾಲಾಜಿ ಮಂದಿರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಸಿದ್ಧಪೀಠಾಧೀಶ್ವರ ಶ್ರೀನರೇಶಪುರಿ ಮಹಾರಾಜರಿಗೂ ಮಹೋತ್ಸವದ ಆಮಂತ್ರಣ ನೀಡಿದರು.