
ತಂಜಾವೂರು (ತಮಿಳುನಾಡು) – ಇತ್ತೀಚೆಗೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲೊಬ್ಬರಾದ ಶ್ರೀಚಿತ್ ಶಕ್ತಿ ಸೌ. ಅಂಜಲಿ ಮುಕುಲ್ ಗಾಡಗೀಳ ಅವರು ತಂಜಾವೂರಿನ ಕಲಾಂಚೇರಿಯಲ್ಲಿರುವ ‘ಶ್ರೀ ವೇದವಿದ್ಯಾ ಗುರುಕುಲಂ’ಗೆ ಭೇಟಿ ನೀಡಿದರು. ಅಲ್ಲಿ ಅವರು ವೇದಪ್ರಚಾರರತ್ನಂ ಜ್ಯೋತಿಷ್ಯ ವಿದ್ಯಾರತ್ನಂ ಜಿ.ಕೆ. ಸೀತಾರಾಮನ್ ಶಾಸ್ತ್ರಿಗಳನ್ನು ಭೇಟಿ ಮಾಡಿ, ಡಿಸೆಂಬರ್ ೧೩ ಮತ್ತು ೧೪ ರಂದು ದೆಹಲಿಯಲ್ಲಿ ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಆಮಂತ್ರಣ ನೀಡಿದರು.
Ancient Somnath Shivlingam relics to be showcased at Delhi’s Sanatan Rashtra Shankhnad Mahotsav
ShriChitshakti (Mrs.) Anjali Mukul Gadgil visited Kalancheri in Thanjavur to meet Vedaprachararatnam Jyotish Vidyaratnam G. K. Seetharaman Sastry, whose lineage has long safeguarded… pic.twitter.com/sXno0AeW2q
— Sanatan Prabhat (@SanatanPrabhat) November 17, 2025

ಸೀತಾರಾಮನ್ ಶಾಸ್ತ್ರಿಗಳ ಪೂರ್ವಜರು ಪ್ರಾಚೀನ ಸೋಮನಾಥ ಶಿವಲಿಂಗದ ಅವಶೇಷಗಳ ಗೌರವಾನ್ವಿತ ಸಂರಕ್ಷಕರಾಗಿದ್ದರು. ಭೇಟಿಯ ಸಮಯದಲ್ಲಿ, ಶ್ರೀಚಿತ್ ಶಕ್ತಿ ಸೌ. ಅಂಜಲಿ ಮುಕುಲ್ ಗಾಡಗೀಳ ಅವರು ಪವಿತ್ರ ಶಿವಲಿಂಗಕ್ಕೆ ಅಭಿಷೇಕ ಮಾಡಿದರು ಮತ್ತು ಈ ದಿವ್ಯ ಪರಂಪರೆಯ ವಂಶಾವಳಿ ಹಾಗೂ ಮಹತ್ವದ ಬಗ್ಗೆ ಜಿ.ಕೆ. ಸೀತಾರಾಮನ್ ಜಿ ಅವರೊಂದಿಗೆ ಆಧ್ಯಾತ್ಮಿಕ ಸಂವಾದ ನಡೆಸಿದರು.

ವೇದಕುಲಪತಿ ಜಿ.ಕೆ. ಸೀತಾರಾಮನ್ ಜಿ ಅವರು ಮಹೋತ್ಸವದ ಆಮಂತ್ರಣವನ್ನು ಸ್ವೀಕರಿಸಿದ್ದು, ಪವಿತ್ರ ಸೋಮನಾಥ ಶಿವಲಿಂಗದ ಅವಶೇಷಗಳನ್ನು ಮಹೋತ್ಸವಕ್ಕಾಗಿ ತರಲಿದ್ದಾರೆ. ಇದರಿಂದ ಭಕ್ತಾದಿಗಳಿಗೆ ಈ ಪವಿತ್ರ ಪರಂಪರೆಗೆ ಸಾಕ್ಷಿಯಾಗಲು ಸಾಧ್ಯವಾಗುತ್ತದೆ.
ರಾಜಸ್ಥಾನದ ಪ್ರಸಿದ್ಧ ಮೆಹಂದೀಪುರ ಬಾಲಾಜಿ ಮಂದಿರದ ಸಿದ್ಧಪೀಠಾಧೀಶ್ವರ ಶ್ರೀನರೇಶಪುರಿ ಮಹಾರಾಜರಿಗೆ ಆಮಂತ್ರಣ!![]() ಶ್ರೀಚಿತ್ ಶಕ್ತಿ ಸೌ. ಅಂಜಲಿ ಮುಕುಲ್ ಗಾಡಗೀಳ ಅವರು ಜೈಪುರದ ಪ್ರಸಿದ್ಧ ಮೆಹಂದೀಪುರ ಬಾಲಾಜಿ ಮಂದಿರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಸಿದ್ಧಪೀಠಾಧೀಶ್ವರ ಶ್ರೀನರೇಶಪುರಿ ಮಹಾರಾಜರಿಗೂ ಮಹೋತ್ಸವದ ಆಮಂತ್ರಣ ನೀಡಿದರು.
|

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ