ಗೋಹತ್ಯಾ ನಿಷೇಧ ಕಾನೂನಿನ ಬಗ್ಗೆ ಮಸೀದಿಗಳಲ್ಲಿ ಪೊಲೀಸರು ಜಾಗೃತಿ ಮೂಡಿಸುವುದಕ್ಕೆ ಕಾಂಗ್ರೆಸ್ ನಾಯಕರ ವಿರೋಧ

ಕಾಂಗ್ರೆಸ್ಸಿನ ಬೇಡಿಕೆಯ ನಂತರ ಮಸೀದಿಗಳಿಗೆ ಭೇಟಿ ನೀಡದಿರುವ ಬಗ್ಗೆ ಪೊಲೀಸರ ಭರವಸೆ

ಸೌಜನ್ಯ – Vtvvittla.com

ವಿಟ್ಲ – ಗೋಹತ್ಯಾ ನಿಷೇಧ ಕಾನೂನಿನ ಜಾಗೃತಿ ಕಾರ್ಯಕ್ರಮಕ್ಕಾಗಿ ಮಸೀದಿಯನ್ನು ಆಯ್ಕೆ ಮಾಡಿರುವುದಕ್ಕೆ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಸಮುದಾಯದ ನಾಯಕರು ಪೊಲೀಸ್ ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಅಲ್ಪಸಂಖ್ಯಾತ ನಾಯಕ ಎಂ.ಎಸ್. ಮಹಮ್ಮದ್ ಅವರ ನೇತೃತ್ವದಲ್ಲಿ ನಿಯೋಗವೊಂದು ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಈ ನಿಯೋಗವು ಪೊಲೀಸರೊಂದಿಗೆ ಚರ್ಚಿಸಿ, ಕಾನೂನುಬಾಹಿರ ಅಥವಾ ಅನೈತಿಕ ಕೃತ್ಯಗಳಲ್ಲಿ ಭಾಗಿಯಾಗುವ ಯಾರ ವಿರುದ್ಧವಾದರೂ ನಿಸ್ಸಂದೇಹವಾಗಿ ಕ್ರಮ ತೆಗೆದುಕೊಳ್ಳಿ; ಆದರೆ ಒಂದು ಸಮುದಾಯವನ್ನು ಗುರಿಯಾಗಿಸಿ ಮಸೀದಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಸರಿಯಲ್ಲ. ಗೋಹತ್ಯೆ ಮತ್ತು ಮಾದಕ ವಸ್ತುಗಳ ವ್ಯಸನದ ಕುರಿತು ಪೊಲೀಸರು ಸಾರ್ವಜನಿಕ ಮಟ್ಟದಲ್ಲಿ ಜಾಗೃತಿ ಮೂಡಿಸಿದರೆ ನಮ್ಮ ಯಾವುದೇ ವಿರೋಧವಿಲ್ಲ; ಆದರೆ ಒಂದು ಸಮುದಾಯವನ್ನು ಗುರಿಯಾಗಿಸಿ ಕಾನೂನಿಗೆ ಸವಾಲು ಹಾಕುವ ಸಮಾಜಘಾತಕರಲ್ಲಿ ಧರ್ಮವನ್ನು ಹುಡುಕುವುದು ನ್ಯಾಯೋಚಿತವಲ್ಲ. ನಮ್ಮ ಧಾರ್ಮಿಕ ನಾಯಕರು ಪ್ರತಿ ಶುಕ್ರವಾರ ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. (ಹಾಗಿದ್ದರೆ, ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋಹತ್ಯೆ ಹೇಗೆ ನಡೆಯುತ್ತಿದೆ? – ಸಂಪಾದಕರು)

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರು, ‘ವಿಟ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮಸೀದಿಗಳಿಗೆ ಪೊಲೀಸರು ಭೇಟಿ ನೀಡುವುದಿಲ್ಲ’ ಎಂದು ಭರವಸೆ ನೀಡಿದರು.

ಸಂಪಾದಕೀಯ ನಿಲುವು

  • ಮುಸಲ್ಮಾನರು ಹಸುವನ್ನು ತಾಯಿ ಎಂದು ಪರಿಗಣಿಸುವುದಿಲ್ಲ, ಆದ್ದರಿಂದ ಅವರು ಸಹವಾಗಿ ಗೋಹತ್ಯೆ ಮಾಡುತ್ತಾರೆ. ಯಾರಿಂದ ಗೋಹತ್ಯೆ ಆಗುತ್ತದೆಯೋ ಅವರ ಸ್ಥಳದಲ್ಲಿಯೇ ಗೋಹತ್ಯಾ ನಿಷೇಧ ಕಾನೂನಿನ ಬಗ್ಗೆ ಜಾಗೃತಿ ಮೂಡಿಸದಿದ್ದರೆ ಬೇರೆಲ್ಲಿ ಮಾಡಬೇಕು?
  • ಮುಸಲ್ಮಾನರ ವಿರೋಧದಿಂದಾಗಿ ಪೊಲೀಸರು ಮಸೀದಿಗಳಲ್ಲಿ ಜಾಗೃತಿ ಮೂಡಿಸದಿದ್ದರೆ, ಅವರು ‘ಕಾನೂನಿನ ರಕ್ಷಕರು’ ಹೇಗಾಗುತ್ತಾರೆ?
  • ರಾಜ್ಯದಲ್ಲಿ ಕಾಂಗ್ರೆಸ್‌ನದೇ ಸರಕಾರ ಇರುವಾಗಲೂ ಪೊಲೀಸರು ಇಂತಹ ಧೈರ್ಯವನ್ನು ಮಾಡುವ ಪ್ರಯತ್ನ ಮಾಡಿರುವುದು ದೊಡ್ಡ ವಿಷಯ ಎಂದು ಹೇಳಬೇಕಾಗುತ್ತದೆ!