ಮಲೇಷಿಯಾದಿಂದ ಐ.ಎಸ್.ಐ. ಸೂಚನೆಗಳ ಮೇರೆಗೆ ಗ್ರೆನೇಡ್ ಗಳ ಮೂಲಕ ದಾಳಿ ನಡೆಸಲು ಯತ್ನ

ಲುಧಿಯಾನ (ಪಂಜಾಬ) – ಪಂಜಾಬ್ ಪೊಲೀಸರು ಮಲೇಷಿಯಾದಿಂದ ನಿರ್ವಹಿಸಲಾಗುತ್ತಿದ್ದ ಗ್ರೆನೇಡ್ ದಾಳಿಯ ಸಂಚನ್ನು ವಿಫಲಗೊಳಿಸಿದ್ದಾರೆ. ಈ ಸಂದರ್ಭದಲ್ಲಿ 10 ಜನರನ್ನು ಬಂಧಿಸಲಾಗಿದೆ. ಈ ಗುಂಪು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐ.ಎಸ್.ಐ. (‘ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್’) ನ ಸೂಚನೆಗಳ ಮೇರೆಗೆ ಮಲೇಷಿಯಾದಿಂದ ಕಾರ್ಯನಿರ್ವಹಿಸುತ್ತಿತ್ತು. ಭಯೋತ್ಪಾದಕರು ಪಂಜಾಬಿನ ಜನನಿಬಿಡ ಪ್ರದೇಶಗಳಲ್ಲಿ ಸ್ಫೋಟಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದರು. ನವೆಂಬರ್ 13 ರಂದು ಪೊಲೀಸರು ಈ ಜಾಲವನ್ನು ಭೇದಿಸಿದ್ದಾರೆ.
Terror plot foiled in Punjab – 10 arrested.
Punjab Police busted a grenade-attack module backed by Pakistan’s ISI.
The accused were coordinating with Pakistan-based handlers through operatives in Malaysia
A major attack has been prevented.
PC: @state_sentinel pic.twitter.com/P1fu02DTxi— Sanatan Prabhat (@SanatanPrabhat) November 14, 2025
1. ಪೊಲೀಸರ ಪ್ರಕಾರ, ಆರೋಪಿಗಳು ಪಾಕಿಸ್ತಾನದಲ್ಲಿರುವ ತಮ್ಮ ನಿರ್ವಾಹಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಮಲೇಷಿಯಾದಲ್ಲಿರುವ ಮೂವರು ವ್ಯಕ್ತಿಗಳು ‘ಅಜಯ್’ ಉರ್ಫ್ ‘ಅಜಯ್ ಮಲೇಷಿಯಾ’, ಜೈಸ್ ಬೆಹಬಾಲ್ ಮತ್ತು ಪವನದೀಪ್ ಸಂದೇಶಗಳು ಮತ್ತು ಸೂಚನೆಗಳನ್ನು ತಲುಪಿಸುತ್ತಿದ್ದರು. ಈ ಮೂವರ ವಿರುದ್ಧ ‘ರೆಡ್ ಕಾರ್ನರ್’ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಮೂವರು ಮೂಲತಃ ರಾಜಸ್ಥಾನದ ಶ್ರೀಗಂಗಾನಗರದವರಾಗಿದ್ದು, ಪ್ರಸ್ತುತ ಮಲೇಷಿಯಾದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಐ.ಎಸ್.ಐ. ಜೊತೆ ನೇರ ಸಂಪರ್ಕ ಇರುವುದು ಸ್ಪಷ್ಟವಾಗಿದೆ. (ಕೇಂದ್ರ ರಕ್ಷಣಾ ಏಜೆನ್ಸಿಗಳ ಸಹಾಯದಿಂದ ಪಂಜಾಬ್ ಪೊಲೀಸರು ಈ ದೇಶದ್ರೋಹಿಗಳನ್ನು ಭಾರತಕ್ಕೆ ಕರೆತಂದು ಗಲ್ಲು ಶಿಕ್ಷೆ ಕೊಡಿಸಲು ಪ್ರಯತ್ನಿಸಬೇಕು! – ಸಂಪಾದಕರು)
In a major breakthrough, Ludhiana Commissionerate Police busts an ISI-#Pakistan backed grenade attack module and arrests 10 key operatives of foreign-based handlers.
Preliminary investigation reveals that the accused were in contact with #Pak-based handlers through three… pic.twitter.com/lYsP0yXNCT
— DGP Punjab Police (@DGPPunjabPolice) November 13, 2025
2. ಮುಕ್ತಸರದಲ್ಲಿ ಕುಲದೀಪ ಸಿಂಗ್ ನನ್ನು ಬಂಧಿಸಿದ ನಂತರ ಈ ಸಂಚು ಬೆಳಕಿಗೆ ಬಂದಿದೆ. ಇದರ ನಂತರ ಪೊಲೀಸರು ಶೇಖರ ಮತ್ತು ಅಜಯ ಅವರನ್ನೂ ಬಂಧಿಸಿದರು.
ಮಾರಕಾಸ್ತ್ರಗಳನ್ನು ಪೂರೈಸಲು ಬಳಸಲಾಗುತ್ತಿದ್ದ ಮಾದಕವಸ್ತು ಜಾಲ!ಲೂಧಿಯಾನ ಪೊಲೀಸ್ ಆಯುಕ್ತ ಸ್ವಪನ್ ಶರ್ಮಾ ಹೇಳಿದ್ದಾರೆ.
ಮಲೇಷಿಯಾದ ಮಾಸ್ಟರ್ಮೈಂಡ್ ಆರಂಭದಲ್ಲಿ ಮಾದಕವಸ್ತು ಜಾಲವನ್ನು ಬಳಸುತ್ತಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ. ನಂತರ ಇದನ್ನು ಗ್ರೆನೇಡ್ಗಳು ಮತ್ತು ದಾಳಿಗೆ ಪೂರೈಕೆ ಸರಪಳಿಯನ್ನು ಸ್ಥಾಪಿಸಲು ಬಳಸಲಾಯಿತು. |
3. ಮೂವರ ವಿಚಾರಣೆಯಿಂದಾಗಿ ಅಮರಿಕಾ ಸಿಂಗ್, ಪರಮಿಂದರ್ ಉರ್ಫ್ ‘ಛೀರಿ’ ಮತ್ತು ವಿಜಯ ಅವರನ್ನೂ ವಶಕ್ಕೆ ಪಡೆಯಲಾಯಿತು. ಅವರೊಂದಿಗೆ ಫರೀದಕೋಟ್ ಮತ್ತು ಶ್ರೀಗಂಗಾನಗರದಿಂದ ಸುಖಜೀತ ಸಿಂಗ್ ಉರ್ಫ್ ಸುಖ್ ಬ್ರಾರ್, ಸುಖವಿಂದರ್ ಸಿಂಗ್, ಕರಣವೀರ್ ಸಿಂಗ್ ಉರ್ಫ್ ವಿಕ್ಕಿ ಮತ್ತು ಸಾಜನ ಕುಮಾರ ಉರ್ಫ್ ಸಂಜು ಅವರನ್ನೂ ಬಂಧಿಸಲಾಗಿದೆ. ಇವರೆಲ್ಲರೂ ಸ್ಥಳೀಯ ಮಟ್ಟದಲ್ಲಿ ಸರಬರಾಜುದಾರರು ಮತ್ತು ಸಾಗಣಿಕೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮಾದಕ ವಸ್ತುಗಳ ಜಾಲವನ್ನು ನಂತರ ಕೈಗ್ರೆನೇಡ್ಗಳ ಪೂರೈಕೆಗಾಗಿ ಬಳಕೆ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ