‘ಸನಾತನ ಪಂಚಾಂಗ’ವನ್ನು ನಿಯಮಿತವಾಗಿ ಬಳಸುವ ದೆಹಲಿ ಸಚಿವರಾದ ರವೀಂದ್ರ ಇಂದ್ರರಾಜ್ ಸಿಂಹ

‘ಸನಾತನ ಪಂಚಾಂಗ’ ಅವರ ನಿತ್ಯ ಜೀವನದ ಭಾಗ

ಮಂತ್ರಿ ಶ್ರೀ. ರವೀಂದ್ರ ಇಂದ್ರರಾಜ್ ಸಿಂಗ್ ಅವರಿಗೆ ಹಿಂದಿ ಭಾಷೆಯ ‘ಸನಾತನ ಪಂಚಾಂಗ ೨೦೨೬’ ನೀಡುತ್ತಿರುವ ಶ್ರೀ. ಕಾರ್ತಿಕ್ ಸಾಳುಂಕೆ ಮತ್ತು ಎಡಗಡೆ ಶ್ರೀ. ಶ್ರೀರಾಮ್ ಲುಕ್ತುಕೆ

ನವದೆಹಲಿ – ದೆಹಲಿ ಕ್ಯಾಬಿನೆಟ್ ಸಚಿವ ಶ್ರೀ. ರವೀಂದ್ರ ಇಂದ್ರರಾಜ್ ಸಿಂಹ ಅವರು ಹಲವು ವರ್ಷಗಳಿಂದ ‘ಸನಾತನ ಪಂಚಾಂಗ ಆ್ಯಪ್‌’ ಅನ್ನು ನಿಯಮಿತವಾಗಿ ಬಳಸುತ್ತಿದ್ದಾರೆ. ‘ಸನಾತನ ಪಂಚಾಂಗ ಆ್ಯಪ್‌’ ತಮ್ಮ ದಿನನಿತ್ಯದ ಜೀವನದ ಒಂದು ಭಾಗವೆಂದು ಅವರು ತಿಳಿಸಿದರು. ಭೇಟಿಯ ಸಂದರ್ಭದಲ್ಲಿ ಅವರು ಶ್ರೀ. ಕಾರ್ತಿಕ್ ಸಾಳುಂಕೆ ಮತ್ತು ಶ್ರೀ. ಶ್ರೀರಾಮ್ ಲುಕಕತುಕೆ ಅವರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು.

‘ಸನಾತನ ಪಂಚಾಂಗ ಆ್ಯಪ್‌’ ಕುರಿತು ಸಚಿವ ಶ್ರೀ. ರವೀಂದ್ರ ಇಂದ್ರರಾಜ್ ಸಿಂಹ ಅವರ ಈ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯಿಂದ ನಾವು ಅತ್ಯಂತ ಕೃತಜ್ಞರಾಗಿದ್ದೇವೆ ಎಂದು ಸನಾತನ ಸಂಸ್ಥೆ ಹೇಳಿದೆ. ಈ ಸಂದರ್ಭದಲ್ಲಿ ಶ್ರೀ. ಕಾರ್ತಿಕ್ ಸಾಳುಂಕೆ ಮತ್ತು ಶ್ರೀ. ಶ್ರೀರಾಮ್ ಲುಕತುಕೆ ಅವರು ಸಚಿವ ಶ್ರೀ. ರವೀಂದ್ರ ಅವರಿಗೆ ಹಿಂದಿ ಭಾಷೆಯ ‘ಸನಾತನ ಪಂಚಾಂಗ ೨೦೨೬’ ಅನ್ನು ಉಡುಗೊರೆಯಾಗಿ ನೀಡಿದರು ಮತ್ತು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳ ಕುರಿತು ಚರ್ಚಿಸಿದರು.