‘ನಾವು ಯಾವುದೇ ರೀತಿಯ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲವಂತೆ!’ Delhi Blast Turkey Involvement

ದೆಹಲಿ ಬಾಂಬ್‌ ಸ್ಫೋಟದಲ್ಲಿ ಟರ್ಕಿಯ ಹೆಸರು ಬಂದ ನಂತರ ಅದರ ಸ್ಪಷ್ಟೀಕರಣ

ಅಂಕಾರಾ (ಟರ್ಕಿ) – ದೆಹಲಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಭಯೋತ್ಪಾದಕರಾದ ಡಾ. ಉಮರ್ ಮತ್ತು ಡಾ. ಮುಜಮ್ಮಿಲ್ ಈ ಹಿಂದೆ ಟರ್ಕಿಗೆ ಭೇಟಿ ನೀಡಿದ್ದರು, ಎಂದು ಬಹಿರಂಗವಾದ ನಂತರ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಟರ್ಕಿ ಸ್ಪಷ್ಟೀಕರಣ ನೀಡಿ, ಭಾರತ ಅಥವಾ ಇತರೆ ಯಾವುದೇ ದೇಶವನ್ನು ಗುರಿಯಾಗಿಸುವ ಉಗ್ರಗಾಮಿ ಚಟುವಟಿಕೆಗಳಲ್ಲಿ ಯಾವುದೇ ರೀತಿಯ ಅಥವಾ ಸ್ವರೂಪದಲ್ಲಿ ಟರ್ಕಿ ಭಾಗಿಯಾಗಿಲ್ಲ. ಈ ಆರೋಪಗಳು ಸಂಪೂರ್ಣವಾಗಿ ದಾರಿ ತಪ್ಪಿಸುವಂತಿವೆ ಮತ್ತು ಅವುಗಳಿಗೆ ಯಾವುದೇ ವಾಸ್ತವಿಕ ಆಧಾರವಿಲ್ಲ, ಎಂದು ಹೇಳಿದೆ.

೧. ಡಾ. ಉಮರ್ ಮತ್ತು ಮುಜಮ್ಮಿಲ್ ಅವರಿಗೆ ಟರ್ಕಿಗೆ ಹೋಗಲು ಜೈಶ್-ಎ-ಮೊಹಮ್ಮದ್‌ನಿಂದ ನೆರವು ಸಿಕ್ಕಿದೆ ಎಂಬ ಅನುಮಾನವಿದೆ. ಅವರಿಬ್ಬರೂ ‘ಟೆಲಿಗ್ರಾಮ್’ ಮತ್ತು ‘ಸಿಗ್ನಲ್’ ನಂತಹ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರು. ಈ ಮೂಲಕ ಅವರಿಗೆ ಸೂಚನೆಗಳು ದೊರೆತ ನಂತರ ಅವರು ಟರ್ಕಿಗೆ ತೆರಳಿದರು.

೨. ಮೂಲಗಳ ಪ್ರಕಾರ, ಡಾ. ಮುಜಮ್ಮಿಲ್ ನೀಡಿದ ಮಾಹಿತಿಯ ಪ್ರಕಾರ, ಜೈಶ್-ಎ-ಮೊಹಮ್ಮದ್‌ನೊಂದಿಗಿನ ಆರಂಭಿಕ ಅವಧಿಯಲ್ಲಿ ಅವರು ಯಾವ ಹ್ಯಾಂಡ್ಲರ್‌ನೊಂದಿಗೆ (ಸಹಾಯಕನೊಂದಿಗೆ/ಸೂತ್ರದಾರನೊಂದಿಗೆ) ಸಂವಾದ ನಡೆಸಿದ್ದಾರೋ, ಅವನ ಹೆಸರು ‘ಅಬೂ ಉಕಾಸಾ’ ಎಂದಾಗಿತ್ತು. ದೇಶದ ಭದ್ರತಾ ಸಂಸ್ಥೆಗಳಿಗೆ ಸಂಶಯ ಬಾರದಿರಲಿ ಎಂಬ ಕಾರಣಕ್ಕಾಗಿ 2022 ರ ಸಭೆಗಾಗಿ ಟರ್ಕಿಯೆ ಸ್ಥಳವನ್ನು ಆಯ್ಕೆ ಮಾಡಲಾಗಿತ್ತು.

ಸಂಪಾದಕೀಯ ನಿಲುವು

  • ‘ಹೌದು, ನಾವು ಭಾರತದಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿದ್ದೇವೆ,’ ಎಂದು ಟರ್ಕಿಯು ಎಂದಾದರೂ ಹೇಳುತ್ತದೆಯೇ? ಆದ್ದರಿಂದ, ಅದು ಪಾಕಿಸ್ತಾನದಂತೆಯೇ ಸುಳ್ಳು ಹೇಳುತ್ತಿದೆ!
  • ಪಾಕಿಸ್ತಾನದ ನಂತರ ಈಗ ಟರ್ಕಿಯು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವ  ಪಾಕಿಸ್ತಾನಕ್ಕೆ ಮಿಲಿಟರಿ ನೆರವು ನೀಡಲು ಆರಂಭಿಸಿದೆ. ಆದ್ದರಿಂದ ಭಾರತವು ಈಗಲೇ ಅದರ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡು ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ!