ದೆಹಲಿ ಬಾಂಬ್ ಸ್ಫೋಟದಲ್ಲಿ ಟರ್ಕಿಯ ಹೆಸರು ಬಂದ ನಂತರ ಅದರ ಸ್ಪಷ್ಟೀಕರಣ

ಅಂಕಾರಾ (ಟರ್ಕಿ) – ದೆಹಲಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಭಯೋತ್ಪಾದಕರಾದ ಡಾ. ಉಮರ್ ಮತ್ತು ಡಾ. ಮುಜಮ್ಮಿಲ್ ಈ ಹಿಂದೆ ಟರ್ಕಿಗೆ ಭೇಟಿ ನೀಡಿದ್ದರು, ಎಂದು ಬಹಿರಂಗವಾದ ನಂತರ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಟರ್ಕಿ ಸ್ಪಷ್ಟೀಕರಣ ನೀಡಿ, ಭಾರತ ಅಥವಾ ಇತರೆ ಯಾವುದೇ ದೇಶವನ್ನು ಗುರಿಯಾಗಿಸುವ ಉಗ್ರಗಾಮಿ ಚಟುವಟಿಕೆಗಳಲ್ಲಿ ಯಾವುದೇ ರೀತಿಯ ಅಥವಾ ಸ್ವರೂಪದಲ್ಲಿ ಟರ್ಕಿ ಭಾಗಿಯಾಗಿಲ್ಲ. ಈ ಆರೋಪಗಳು ಸಂಪೂರ್ಣವಾಗಿ ದಾರಿ ತಪ್ಪಿಸುವಂತಿವೆ ಮತ್ತು ಅವುಗಳಿಗೆ ಯಾವುದೇ ವಾಸ್ತವಿಕ ಆಧಾರವಿಲ್ಲ, ಎಂದು ಹೇಳಿದೆ.
೧. ಡಾ. ಉಮರ್ ಮತ್ತು ಮುಜಮ್ಮಿಲ್ ಅವರಿಗೆ ಟರ್ಕಿಗೆ ಹೋಗಲು ಜೈಶ್-ಎ-ಮೊಹಮ್ಮದ್ನಿಂದ ನೆರವು ಸಿಕ್ಕಿದೆ ಎಂಬ ಅನುಮಾನವಿದೆ. ಅವರಿಬ್ಬರೂ ‘ಟೆಲಿಗ್ರಾಮ್’ ಮತ್ತು ‘ಸಿಗ್ನಲ್’ ನಂತಹ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರು. ಈ ಮೂಲಕ ಅವರಿಗೆ ಸೂಚನೆಗಳು ದೊರೆತ ನಂತರ ಅವರು ಟರ್ಕಿಗೆ ತೆರಳಿದರು.
೨. ಮೂಲಗಳ ಪ್ರಕಾರ, ಡಾ. ಮುಜಮ್ಮಿಲ್ ನೀಡಿದ ಮಾಹಿತಿಯ ಪ್ರಕಾರ, ಜೈಶ್-ಎ-ಮೊಹಮ್ಮದ್ನೊಂದಿಗಿನ ಆರಂಭಿಕ ಅವಧಿಯಲ್ಲಿ ಅವರು ಯಾವ ಹ್ಯಾಂಡ್ಲರ್ನೊಂದಿಗೆ (ಸಹಾಯಕನೊಂದಿಗೆ/ಸೂತ್ರದಾರನೊಂದಿಗೆ) ಸಂವಾದ ನಡೆಸಿದ್ದಾರೋ, ಅವನ ಹೆಸರು ‘ಅಬೂ ಉಕಾಸಾ’ ಎಂದಾಗಿತ್ತು. ದೇಶದ ಭದ್ರತಾ ಸಂಸ್ಥೆಗಳಿಗೆ ಸಂಶಯ ಬಾರದಿರಲಿ ಎಂಬ ಕಾರಣಕ್ಕಾಗಿ 2022 ರ ಸಭೆಗಾಗಿ ಟರ್ಕಿಯೆ ಸ್ಥಳವನ್ನು ಆಯ್ಕೆ ಮಾಡಲಾಗಿತ್ತು.
ಸಂಪಾದಕೀಯ ನಿಲುವು
|
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !