ಛತ್ರಪತಿ ಸಂಭಾಜಿನಗರದಲ್ಲಿ ಭಯೋತ್ಪಾದನಾ ನಿಗ್ರಹ ದಳದ (ATS) ಕಾರ್ಯಾಚರಣೆ!

ಛತ್ರಪತಿ ಸಂಭಾಜಿನಗರ – ಪ್ಯಾಲೆಸ್ಟೈನ್ ಮತ್ತು ಗಾಝಾದ ಜನರ ಹೆಸರಿನಲ್ಲಿ ಹಣ ಸಂಗ್ರಹಿಸಿ ವಿದೇಶಕ್ಕೆ ಹಣ ಕಳುಹಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ವಂಚನೆ ಮಾಡಿದ ವ್ಯಕ್ತಿಯ ಹೆಸರು ಸಯ್ಯದ್ ಬಾಬರ್ ಅಲಿ ಸಯ್ಯದ್ ಮಹಮೂದ್ ಅಲಿ ಎಂದು ಗುರುತಿಸಲಾಗಿದೆ. ಛತ್ರಪತಿ ಸಂಭಾಜಿನಗರದಲ್ಲಿ ಭಯೋತ್ಪಾದನಾ ನಿಗ್ರಹ ದಳವು ಈ ಕಾರ್ಯಾಚರಣೆಯನ್ನು ನಡೆಸಿದೆ. ಸಯ್ಯದ್ ಪ್ಯಾಲೆಸ್ಟೈನ್ ಮತ್ತು ಗಾಝಾದ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಜನರ ಬಳಿ ಹಣವನ್ನು ವಸೂಲಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. (ಈ ರೀತಿ ವಂಚನೆ ಮಾಡುವ ಮತಾಂಧರಿಂದ ಸಂಪೂರ್ಣ ಹಣವನ್ನು ಬಡ್ಡಿಯೊಂದಿಗೆ ವಸೂಲಿ ಮಾಡಬೇಕು! – ಸಂಪಾದಕರು)
೧. ನೋಂದಣಿಯಾಗದ ‘ಅಹ್ಮದ್ ರಾಜಾ ಫೌಂಡೇಶನ್ ಸಂಸ್ಥೆ’ಯ ಹೆಸರಿನಲ್ಲಿ ‘ಕ್ಯೂ.ಆರ್. ಕೋಡ್’ ಸಿದ್ಧಪಡಿಸಿ ಹಣ ಸಂಗ್ರಹಿಸಲಾಗುತ್ತಿತ್ತು. ನೋಂದಣಿಯಾಗಿರುವ ಆದರೆ ವಿದೇಶಕ್ಕೆ ಹಣ ಕಳುಹಿಸುವ ಅಧಿಕಾರವಿಲ್ಲದ ‘ರಾಜಾ ಎಂಪವರ್ಮೆಂಟ್ ಫೌಂಡೇಶನ್’ ಎಂಬ ಸಂಸ್ಥೆಯ ಹೆಸರಿನಲ್ಲಿ ಹಣ ಜಮಾ ಮಾಡಲಾಗಿದೆ. (ಇಂತಹ ಸಂಸ್ಥೆಗಳ ಮೇಲೆ ನಿಷೇಧ ಹೇರಬೇಕು! – ಸಂಪಾದಕರು)
೨. ಸಯ್ಯದ್ ಆರ್ಥಿಕ ಲಾಭಕ್ಕಾಗಿ ತನ್ನ ಬ್ಯಾಂಕ್ ಖಾತೆಗೆ ಮತ್ತು ಸಂಸ್ಥೆಯ ‘ಕ್ಯೂ.ಆರ್. ಕೋಡ್’ ಎಂದು ಬಿಂಬಿಸಿ ನಿಧಿ ಸಂಗ್ರಹಿಸಿ ಜನರಿಗೆ ವಂಚಿಸುತ್ತಿದ್ದ. ಇದಕ್ಕಾಗಿ, ಅವನು ‘ರಾಜಾ ಎಂಪವರ್ಮೆಂಟ್ ಫೌಂಡೇಶನ್’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದ.
೩. ಸಯ್ಯದ್ ತನ್ನ ಖಾತೆಯಿಂದ ಒಂದು ಪೋರ್ಟಲ್ಗೆ ೧೦ ಲಕ್ಷದ ೨೪ ಸಾವಿರದ ೨೨೦ ರೂಪಾಯಿಗಳನ್ನು ವಿದೇಶಕ್ಕೆ ಕಳುಹಿಸಿದ್ದಾನೆ. ಈ ಪ್ರಕರಣದಲ್ಲಿ ಭಯೋತ್ಪಾದನಾ ನಿಗ್ರಹ ದಳವು ಹೆಚ್ಚಿನ ತನಿಖೆ ನಡೆಸುತ್ತಿದೆ.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ