ಭಯೋತ್ಪಾದಕರನ್ನು ಪ್ರೋತ್ಸಾಹಿಸುವವರ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶೂನ್ಯ ಸಹಿಷ್ಣುತೆಯ ನಿಲುವು ತೆಗೆದುಕೊಳ್ಳಬೇಕು! : Long-fought Cross-border Terror

ಪಾಕಿಸ್ತಾನದ ಹೆಸರು ಹೇಳದೆ ಭಾರತದ ಕರೆ

ನ್ಯೂಯಾರ್ಕ್ (ಅಮೆರಿಕ) – ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು, ದೇಶವು ಹಲವು ವರ್ಷಗಳಿಂದ ಗಡಿಯಾಚೆಯಿಂದ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳು ಮತ್ತು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಯನ್ನು ಎದುರಿಸುತ್ತಿದೆ. ಭಾರತವು ಪಾಕಿಸ್ತಾನದ ಹೆಸರನ್ನು ತೆಗೆದುಕೊಳ್ಳದೆ ಟೀಕಿಸುತ್ತಾ, ಈಗ ಡ್ರೋನ್​ಗಳ ಮೂಲಕವೂ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದೆ. ಭಯೋತ್ಪಾದಕರನ್ನು ಪ್ರೋತ್ಸಾಹಿಸುವವರ ವಿರುದ್ಧ ಭದ್ರತಾ ಮಂಡಳಿಯು ಶೂನ್ಯ ಸಹಿಷ್ಣುತೆಯ ನಿಲುವನ್ನು ತೆಗೆದುಕೊಳ್ಳಬೇಕು ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು ಆಗ್ರಹಿಸಿದರು. ಅವರು ‘ಸಣ್ಣ ಶಸ್ತ್ರಾಸ್ತ್ರಗಳು’ ಎಂಬ ವಿಷಯದ ಕುರಿತು ನಡೆದ ಮುಕ್ತ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ಭಾರತವು ಹಲವು ವರ್ಷಗಳಿಂದ ಭಯೋತ್ಪಾದನೆಯ ಭೀಕರ ಸ್ವರೂಪವನ್ನು ಅನುಭವಿಸಿದೆ, ಎಂದು ಹರೀಶ ಹೇಳಿದರು.

ದೆಹಲಿಯ ಸ್ಫೋಟದ ಹಿನ್ನೆಲೆಯಲ್ಲಿ ಭಾರತವು ಮೇಲಿನ ಹೇಳಿಕೆಯನ್ನು ನೀಡಿದೆ. ಇಂತಹ ಆಕ್ರಮಣಗಳ ಹಿಂದೆ ಗಡಿಯಾಚೆಯಿಂದ ಕಳ್ಳಸಾಗಣೆ ಮಾಡಿದ ಶಸ್ತ್ರಾಸ್ತ್ರಗಳೇ ಕಾರಣವಾಗಿವೆ ಎಂದು ಹರೀಶ ಹೇಳಿದರು. ಈ ಭಯೋತ್ಪಾದಕ ಗುಂಪುಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲು ಒಂದೇ ಕಾರಣವೆಂದರೆ, ಅವರಿಗೆ ವಿದೇಶಗಳಿಂದ ಆರ್ಥಿಕ ಮತ್ತು ತಾಂತ್ರಿಕ ಸಹಾಯ ಸಿಗುತ್ತಿದೆ.

ಸಂಪಾದಕೀಯ ನಿಲುವು

ಭಾರತದಂತಹ ಪರಮಾಣು ಶಕ್ತಿಯುಳ್ಳ ದೊಡ್ಡ ದೇಶವು ಪಾಕಿಸ್ತಾನದ ಹೆಸರನ್ನು ತೆಗೆದುಕೊಂಡು ಮಾತನಾಡುವುದು ನಿರೀಕ್ಷಿತವಾಗಿದೆ, ಮತ್ತು ವಿಶ್ವಸಂಸ್ಥೆಯಂತಹ ಸಂಸ್ಥೆಗಳ ಮೇಲೆ ಅವಲಂಬಿತವಾಗುವ ಬದಲು, ಭಯೋತ್ಪಾದನೆಯ ಮೂಲವಾದ ಪಾಕಿಸ್ತಾನದ ಮೇಲೆ ನೇರವಾಗಿ ದಾಳಿ ಮಾಡಿ ಅದನ್ನು ವಿಶ್ವ ಭೂಪಟದಿಂದ ಅಳಿಸಿ ಹಾಕಬೇಕು, ಎಂಬುದು ರಾಷ್ಟ್ರಪ್ರೇಮಿಗಳ ನಿರೀಕ್ಷೆಯಾಗಿದೆ!