ಪೊಲೀಸರು ಅಪರಾಧದ ಆರೋಪಿಗಳ ಮೇಲೆ ನಿರೀಕ್ಷಿತ ಸೆಕ್ಷನ್ಗಳನ್ನು (ಕಲಮುಗಳನ್ನು) ಹಾಕಿಲ್ಲ ಎಂದು ಬಾಂಗ್ಲಾದೇಶ ಮೈನಾರಿಟಿ ವಾಚ್ ಸಂಘಟನೆಯಿಂದ ಅಸಮಾಧಾನ ವ್ಯಕ್ತ

ಢಾಕಾ (ಬಾಂಗ್ಲಾದೇಶ) – ಹಿಂದೂ ಯುವತಿಯ ಅಪಹರಣ ಪ್ರಕರಣದಲ್ಲಿ ಪೊಲೀಸರು ದಾಖಲಿಸಿರುವ ದೂರು ಕಾನೂನು ಮತ್ತು ನ್ಯಾಯ ಪ್ರಕ್ರಿಯೆಗೆ ವಿರುದ್ಧವಾಗಿದೆ ಎಂದು ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಸಂಘಟನೆ ಟೀಕಿಸಿದೆ. ಸಂಘಟನೆಯ ಪ್ರಕಾರ, ಈ ಪ್ರಕರಣವನ್ನು ‘ನಾರಿ ಓ ಶಿಶು ನಿರ್ಜಾತನ್ ದಮನ್ ಅಧಿನಿಯಮ ೨೦೦೧’ (ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ತಡೆ ಕಾಯ್ದೆ ೨೦೦೧) ಅಡಿಯಲ್ಲಿ ದಾಖಲಿಸಬೇಕಿತ್ತು; ಆದರೆ ಪೊಲೀಸರು ತಪ್ಪಾದ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
🇧🇩 Dhaka, Bangladesh: Accused in Hindu girl’s abduction case granted bail; police booked wrong sections, alleges Bangladesh Minority Watch.
❗ NGO slams police for not using Women & Children Repression Prevention Act, 2001, calling the action “unjust and unacceptable.”
⚖️… pic.twitter.com/mI7F8wBHs7
— Sanatan Prabhat (@SanatanPrabhat) October 31, 2025
೧. ಸಂಘಟನೆಯು, ಅಪರಾಧದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಅಂಶಗಳು ಸ್ಪಷ್ಟವಾಗಿ ಕಂಡುಬಂದರೂ, ಪೊಲೀಸರು ದೂರು ದಾಖಲಿಸುವಾಗ ಸೂಕ್ತ ಸೆಕ್ಷನ್ಗಳನ್ನು ಸೇರಿಸಿಲ್ಲ. ಪರಿಣಾಮವಾಗಿ, ಆರೋಪಿಗಳಿಗೆ ಸುಲಭವಾಗಿ ಜಾಮೀನು ದೊರೆತಿದೆ, ಇದು ಅನ್ಯಾಯ ಮತ್ತು ಸ್ವೀಕಾರಾರ್ಹವಲ್ಲ.
೨. ಸಂಘಟನೆಯು ಈ ಘಟನೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ ಮತ್ತು ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರೆಯುವ ಸಲುವಾಗಿ ಅಪರಾಧದಲ್ಲಿ ಸೂಕ್ತ ಕಾನೂನಿನ ಸೆಕ್ಷನ್ಗಳನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.
೩. ಸರಕಾರ ಮತ್ತು ಪೊಲೀಸರಿಗೆ ಸಂಘಟನೆಯು, ಕಾನೂನು ಪ್ರಕ್ರಿಯೆ ಮತ್ತು ನ್ಯಾಯದ ಕುರಿತು ಪೊಲೀಸರಿಗೆ ಸಾಕಷ್ಟು ತರಬೇತಿ ನೀಡಬೇಕು ಎಂದು ಸಲಹೆ ನೀಡಿದೆ. ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಯಾವುದೇ ತಾರತಮ್ಯವು ಮಾನವ ಹಕ್ಕುಗಳ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅದು ಉಲ್ಲೇಖಿಸಿದೆ.
ಅಲ್ಪಸಂಖ್ಯಾತರ ರಕ್ಷಣೆ ಮತ್ತು ದೇಶದಲ್ಲಿ ಶಾಂತಿ ಕಾಪಾಡಲು ಸಹಿಷ್ಣುತೆಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯ ಎಂದು ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ತನ್ನ ಮನವಿಯಲ್ಲಿ ಸ್ಪಷ್ಟಪಡಿಸಿದೆ.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’