‘ನವೆಂಬರ್ 1 ರಂದು ಆಸ್ಟ್ರೇಲಿಯಾದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮ ರದ್ದುಪಡಿಸಬೇಕಂತೆ’

ನವದೆಹಲಿ – ಖಲಿಸ್ತಾನಿ ಭಯೋತ್ಪಾದಕ ಗುರಪತವಂತ ಸಿಂಗ ಪನ್ನು ಅವರ ‘ಸಿಖ್ ಫಾರ್ ಜಸ್ಟಿಸ್’ ಸಂಘಟನೆಯು ಭಾರತೀಯ ಪಂಜಾಬಿ ಗಾಯಕ ಮತ್ತು ನಟ ದಿಲಜೀತ ದೋಸಾಂಜ ಅವರಿಗೆ ಬೆದರಿಕೆ ಹಾಕಿದ್ದು, ನವೆಂಬರ್ 1 ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅವರ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ.
1. ಸಂಘಟನೆಯು, ನಟ ದೋಸಾಂಜ ಅವರು ಅಮಿತಾಭ ಬಚ್ಚನ ಅವರ ‘ಕೌನ್ ಬನೇಗಾ ಕರೋಡಪತಿ 17’ ಕಾರ್ಯಕ್ರಮದಲ್ಲಿ ಅವರ ಕಾಲಿಗೆ ನಮಸ್ಕರಿಸುವ ಮೂಲಕ, 1984 ರ ದೆಹಲಿ ಸಿಖ್ ಹತ್ಯಾಕಾಂಡದ ಪ್ರತಿಯೊಬ್ಬ ಸಂತ್ರಸ್ತೆ, ವಿಧವೆ ಮತ್ತು ಅನಾಥರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದೆ. 1984 ರ ಅಕ್ಟೋಬರ 31 ರಂದು ಅಮಿತಾಭ ಬಚ್ಚನ ಅವರು ಜನರನ್ನು ಪ್ರಚೋದಿಸಿ ‘ಖೂನ್ ಕಾ ಬದ್ಲಾ ಖೂನ್ ಸೇ’ (ರಕ್ತಕ್ಕೆ ರಕ್ತದಿಂದ ಸೇಡು) ಎಂಬ ಘೋಷಣೆಯನ್ನು ನೀಡಿದ್ದರು, ಅದರ ನಂತರ ದೇಶಾದ್ಯಂತ ಅನೇಕ ಸಿಖ್ಖರ ಹತ್ಯೆಯಾಯಿತು ಎಂದು ಸಂಘಟನೆ ಹೇಳಿಕೊಂಡಿದೆ.
2. ಇತ್ತೀಚೆಗೆ ‘ಕೌನ್ ಬನೇಗಾ ಕರೋಡಪತಿ 17’ ಕಾರ್ಯಕ್ರಮದಲ್ಲಿ ದಿಲಜೀತ ದೋಸಾಂಜ ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಅವರು ನಿರೂಪಕ ಅಮಿತಾಭ ಬಚ್ಚನ ಅವರ ಕಾಲಿಗೆ ನಮಸ್ಕರಿಸಿದ್ದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ