ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ಮಂದಿರದ ಸ್ವಚ್ಛತಾ ನೌಕರರಿಗೆ ಚಿಕನ್ ಮಸಾಲಾ ಪ್ಯಾಕೆಟ್‌ಗಳ ವಿತರಣೆ

  • ಮಂದಿರಗಳ ಸರ್ಕಾರೀಕರಣದ ದುಷ್ಪರಿಣಾಮಗಳು!

  • ವಾರಕರಿಗಳಲ್ಲಿ ಆಕ್ರೋಶ!

ಪಂಢರಪುರ – ಮಹಾರಾಷ್ಟ್ರದ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರವಾಗಿರುವ ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಸ್ವಚ್ಛತಾ ನೌಕರರಿಗೆ ದೀಪಾವಳಿ ಉಡುಗೊರೆಗಳಲ್ಲಿ ಚಿಕನ್ ಮಸಾಲಾ ಪ್ಯಾಕೆಟ್‌ಗಳನ್ನು ವಿತರಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದ ವಾರಕರಿಗಳು, ಮಾಳ್ಕರಿಗಳ ನಡುವೆ ಆಕ್ರೋಶದ ಅಲೆ ಎದ್ದಿದೆ. ಪಂಢರಪುರದ ವಾರಕರಿಗಳು ಮಾಲೆ ಧರಿಸಿದ ನಂತರ ಮಾಂಸಾಹಾರವನ್ನು ಸ್ಪರ್ಶಿಸುವುದಿಲ್ಲ.

ಹೀಗಿದ್ದರೂ, ನೌಕರರಿಗೆ ದೀಪಾವಳಿ ಉಡುಗೊರೆಯಾಗಿ ಚಿಕನ್ ಮಸಾಲಾ ಪ್ಯಾಕೆಟ್‌ಗಳನ್ನು ನೀಡಿ ವಾರಕರಿಗಳ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣ ಬಯಲಾಗಿದೆ. ಈ ಸಂಬಂಧ ದೇವಾಲಯ ದೇವಸ್ಥಾನ ಸಮಿತಿಯು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಾರಕರಿಗಳು ಆಗ್ರಹಿಸುತ್ತಿದ್ದಾರೆ. (ಇಂತಹ ಬೇಡಿಕೆಗಳನ್ನು ಮಾಡಬೇಕಾಗುತ್ತದೆ? – ಸಂಪಾದಕರು).