ಶಾಕಾಹಾರಿ ಬದಲಿಗೆ ಮಾಂಸಾಹಾರಿ ಊಟ ನೀಡಿದ್ದರಿಂದ ಪ್ರಯಾಣಿಕನ ಸಾವು !

ಕೊಲಂಬೊ (ಶ್ರೀಲಂಕಾ) – ‘ಕತಾರ್ ಏರ್‌ವೇಸ್‌’ನ ವಿಮಾನದಲ್ಲಿ ಮಾಂಸಾಹಾರಿ ಊಟ ತಿಂದಿದ್ದರಿಂದ ೮೫ ವರ್ಷದ ಹೃದ್ರೋಗ ತಜ್ಞ ಡಾ. ಅಶೋಕ ಜಯವೀರ್ ಅವರು ಮೃತಪಟ್ಟಿದ್ದಾರೆ. ಡಾ. ಜಯವೀರ್ ಅವರು ಶಾಕಾಹಾರಿ ಊಟವನ್ನು ಕೇಳಿದ್ದರು; ಆದರೆ ಅವರಿಗೆ ಮಾಂಸಾಹಾರಿ ಊಟವನ್ನು ನೀಡಲಾಯಿತು. ಆ ಊಟ ತಿಂದಿದ್ದರಿಂದ ಅವರಿಗೆ ಉಸಿರುಗಟ್ಟಿ ಸಾವು ಸಂಭವಿಸಿತು. ಡಾ. ಜಯವೀರ ಅವರ ಮಗನು ಕತಾರ್ ಏರ್‌ವೇಸ್‌ ವಿರುದ್ಧ ಕೊಲೆ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಮೇಲೆ ಮೊಕದ್ದಮೆ ದಾಖಲಿಸಿ ೧ ಕೋಟಿ ೧೫ ಲಕ್ಷ ರೂಪಾಯಿಗಳ ಪರಿಹಾರವನ್ನು ಕೋರಿದ್ದಾನೆ.