ಶಬರಿಮಲೆ ದೇವಸ್ಥಾನದಿಂದ ಚಿನ್ನ ನಾಪತ್ತೆಯಾದ ಪ್ರಕರಣದ ಕುರಿತು ಕೇರಳ ಹೈಕೋರ್ಟ್ ನ ಅಭಿಪ್ರಾಯ

ತಿರುವನಂತಪುರಂ (ಕೇರಳ) – ಕೇರಳದ ಪ್ರಸಿದ್ಧ ಶಬರಿಮಲೆ ದೇವಾಲಯದ ೨ ದ್ವಾರಪಾಲಕರ ವಿಗ್ರಹಗಳ ಮೇಲಿದ್ದ ೪ ಕೆ.ಜಿ. ಚಿನ್ನ ನಾಪತ್ತೆಯಾದ ಪ್ರಕರಣದ ಬಗ್ಗೆ ಕೇರಳ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು, ನಾಪತ್ತೆಯಾದ ೪ ಕೆ.ಜಿ. ಚಿನ್ನವನ್ನು ಒಂದು ಮದುವೆಗೆ ಬಳಸಲು ಉದ್ದೇಶಿಸಲಾಗಿತ್ತು ಮತ್ತು ಇದರ ಮಾಹಿತಿ ದೇವಾಲಯವನ್ನು ನಿಯಂತ್ರಿಸುವ ತಿರುವಾಂಕೂರು ದೇವಸ್ವಂ ಮಂಡಳಿಗೆ ಇತ್ತು ಎಂದು ಹೇಳಿದೆ. ಇದು ಕಳವಳಕಾರಿ ಘಟನೆಯಾಗಿದ್ದು ಭಕ್ತರನ್ನು ವಂಚಿಸುತ್ತಿದೆ. ಈ ಪ್ರಕರಣದ ಮುಖ್ಯ ಆರೋಪಿ ಉಣ್ಣಿಕೃಷ್ಣನ್ ಪೋಟ್ಟಿ ಅವರು ತಿರುವಾಂಕೂರು ದೇವಸ್ವಂ ಮಂಡಳಿಗೆ ಕಳುಹಿಸಿದ ಇ-ಮೇಲ್ನಿಂದ ಈ ಮಂಡಳಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಕಂಡುಬರುತ್ತದೆ.

೧. ವಿಚಾರಣೆಯ ಸಮಯದಲ್ಲಿ ಉಚ್ಚ ನ್ಯಾಯಾಲಯವು, ಚಿನ್ನದ ಲೇಪನ ತಜ್ಞರಾದ ಪೋಟ್ಟಿ ಅವರು ಮಂಡಳಿಯ ಅಧ್ಯಕ್ಷರಿಗೆ ಕಳುಹಿಸಿದ ಇ-ಮೇಲ್ ಅನ್ನು ಉಲ್ಲೇಖಿಸಿತು. ಅದರಲ್ಲಿ, ಶ್ರೀಕೋವಿಲ್ನ (ಗರ್ಭಗುಡಿಯ) ಮುಖ್ಯ ದ್ವಾರದಲ್ಲಿರುವ ದ್ವಾರಪಾಲಕರ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡಿದ ನಂತರ, ತಮ್ಮ ಬಳಿ ಸ್ವಲ್ಪ ಚಿನ್ನ ಉಳಿದಿತ್ತು, ಅದನ್ನು ಮಂಡಳಿಯ ಸಹಾಯದಿಂದ ಒಬ್ಬ ಬಡ ಯುವತಿಯ ಮದುವೆಗೆ ಬಳಸಲು ಬಯಸಿದ್ದರು ಎಂದು ತಿಳಿಸಲಾಗಿತ್ತು.
೨. ನ್ಯಾಯಾಲಯವು ಈ ಪ್ರಕರಣದ ತನಿಖೆಗಾಗಿ ಒಂದು ವಿಶೇಷ ತನಿಖಾ ದಳವನ್ನು ರಚಿಸಿದೆ. ಈ ದಳವು ೬ ವಾರಗಳೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ.
ಸಂಪಾದಕೀಯ ನಿಲುವುದೇವಾಲಯದ ಸರಕಾರೀಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ