ಬಂಗಾಳದಲ್ಲಿ ಭಾಜಪ ಸಂಸದರು ಮತ್ತು ಶಾಸಕರ ಮೇಲೆ ಸಮೂಹದಿಂದ ಮಾರಣಾಂತಿಕ ದಾಳಿ

  • ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ

  • ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಹೋಗಿದ್ದಾಗ ದಾಳಿ

ಮಾಲದಾ (ಬಂಗಾಳ) – ಇಲ್ಲಿನ ಭಾಜಪ ಶಾಸಕ ಶಂಕರ್ ಘೋಷ್ ಮತ್ತು ಸಂಸದ ಖಗೇನ್ ಮುರ್ಮು ಅವರ ಮೇಲೆ ಗುಂಪು ನಡೆಸಿದ ದಾಳಿಯಲ್ಲಿ ಅವರು ಗಾಯಗೊಂಡಿದ್ದಾರೆ. ಘೋಷ್ ಮತ್ತು ಮುರ್ಮು ಅವರು ನಾಗರಾಕಾಟೆಯ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಹೋಗಿದ್ದರು. ಆ ಸಮಯದಲ್ಲಿ ಈ ಘಟನೆ ನಡೆದಿದೆ. ಮುರ್ಮು ಅವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಗುಂಪು ಅವರ ವಾಹನವನ್ನು ಸಹ ಧ್ವಂಸಗೊಳಿಸಿದೆ. ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯ ಹಿಂದೆ ತೃಣಮೂಲ ಕಾಂಗ್ರೆಸ್ ಕೈವಾಡವಿದೆ ಎಂದು ಭಾಜಪ ಆರೋಪಿಸಿದೆ.

ತೃಣಮೂಲ ಕಾಂಗ್ರೆಸ್‌ನ ಪ್ರಚೋದನೆಯ ಮೇರೆಗೆ ಬಾಂಗ್ಲಾದೇಶಿ ಮುಸಲ್ಮಾನರು ದಾಳಿ ಮಾಡಿದ್ದಾರೆ! – ಕೇಂದ್ರ ಸಚಿವರ ಆರೋಪ

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು ಮತ್ತು ಭಾಜಪ ನಾಯಕ ಸುಕಾಂತ್ ಮಜುಮದಾರ್ ಅವರು, ‘ನಮ್ಮ ಸಂಸದರು, ಶಾಸಕರು ಮತ್ತು ರಾಜ್ಯದ ನಾಯಕರ ಮೇಲೆ ನಡೆದ ಆಕ್ರಮಣವು ಬಂಗಾಳದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇಂದಿಗೂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಹೋದ ಭಾಜಪ ತಂಡದ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ತೃಣಮೂಲವು ಬಾಂಗ್ಲಾದೇಶಿ ಒಳನುಸುಳುವ ಮುಸಲ್ಮಾನರು ಮತ್ತು ರಾಜ್ಯದ ಮುಸಲ್ಮಾನರನ್ನು ಮುಂದಿಟ್ಟುಕೊಂಡು ನಮ್ಮ ಸಂಸದರ ಮೇಲೆ ಆಕ್ರಮಣ ಮಾಡಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಯಂಕರ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ. ಈ ದಾಳಿಯ ಹಿಂದೆ ಪಿತೂರಿ ಇದೆ ಮತ್ತು ಅದರ ಬಗ್ಗೆ ಮಮತಾ ಬ್ಯಾನರ್ಜಿ ಅವರಿಗೆ ಮಾಹಿತಿ ಇತ್ತು ಎಂದು ನಾನು ಭಾವಿಸುತ್ತೇನೆ. ಉತ್ತರ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡಬೇಕಾಗುತ್ತದೆ.

ರಾಜ್ಯವು ನೆರೆ ಸಂತ್ರಸ್ತವಾಗಿರುವಾಗ ಮಮತಾ ಬ್ಯಾನರ್ಜಿ ‘ಕಾರ್ನಿವಲ್’ನಲ್ಲಿ (ಆನಂದೋತ್ಸವದಲ್ಲಿ) ಮಗ್ನರಾಗಿದ್ದಾರೆ! – ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ

ಭಾಜಪ ನಾಯಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು, ಉತ್ತರ ಬಂಗಾಳವು ನೆರೆ ಮತ್ತು ಭೂಕುಸಿತಗಳಿಂದ ತತ್ತರಿಸುತ್ತಿರುವಾಗ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ಕೋಲಕಾತಾ ಕಾರ್ನಿವಲ್’ನಲ್ಲಿ ಖ್ಯಾತನಾಮರ (ಸೆಲೆಬ್ರಿಟಿ) ಜೊತೆ ನೃತ್ಯ ಮಾಡುತ್ತಿದ್ದರು. ಅವರ ಈ ಅಮಾನವೀಯ ವರ್ತನೆಯಿಂದ ಜನತೆ ಅಸಮಾಧಾನಗೊಂಡಿದ್ದಾರೆ. ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಸಾಧ್ಯವಾಗದಂತೆ, ಅವರು ಮುಸಲ್ಮಾನ ಗೂಂಡಾಗಳಿಗೆ ನಮ್ಮ ಸಂಸದರ ಮೇಲೆ ಆಕ್ರಮಣ ಮಾಡಲು ಪ್ರಚೋದನೆ ನೀಡಿದ್ದಾರೆ.