|

ಮಥುರಾ – ಮಾತೃಭೂಮಿಯ ಬಗ್ಗೆ ಯಾರಿಗೆ ಪ್ರೀತಿ ಇದೆ ಮತ್ತು ಯಾರಿಗೆ ಇಲ್ಲ ಎಂದು ಎಲ್ಲ ಭಾರತೀಯರಿಗೆ ತಿಳಿಯಲು, ದೇವಸ್ಥಾನಗಳು ಮತ್ತು ಮಸೀದಿಗಳಲ್ಲಿ ರಾಷ್ಟ್ರಗೀತೆಯನ್ನು ಹಾಕಬೇಕು ಎಂದು ಬಾಗೇಶ್ವರ ಧಾಮ್ ಪೀಠಾಧೀಶ್ವರ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಹೇಳಿದ್ದಾರೆ.
🇮🇳 Pandit Dhirendra Krishna Shastri:
👉 “To test love for Bharat, let’s play the National Anthem in temples & mosques.”🛕 A meeting of 200+ saints was held in Vrindavan.
🚩 From Nov 7–16, he’ll lead a 170 km Sanatan Hindu Ekta March from Delhi to Vrindavan.
Goals:
🌸… pic.twitter.com/McHSX2EaSp— Sanatan Prabhat (@SanatanPrabhat) September 2, 2025
ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ನವೆಂಬರ್ 7 ರಿಂದ ನವೆಂಬರ್ 16 ರವರೆಗೆ ದೆಹಲಿಯಿಂದ ವೃಂದಾವನಕ್ಕೆ 170 ಕಿ.ಮೀ. ಉದ್ದದ ‘ಸನಾತನ ಹಿಂದೂ ಏಕತಾ’ ಪಾದಯಾತ್ರೆ ನಡೆಸಲಿದ್ದಾರೆ. ಈ ಪಾದಯಾತ್ರೆಯ ಯೋಜನೆಗಾಗಿ ವೃಂದಾವನದ ಕೃಷ್ಣ ಕೃಪಾ ಧಾಮ್ ಆಶ್ರಮದಲ್ಲಿ ನಡೆದ 200ಕ್ಕೂ ಹೆಚ್ಚು ಸಂತರು ಸಭೆ ಸೇರಿದ್ದರು. ಈ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಭೆಯಲ್ಲಿ ಕಥಾ ವಾಚಕ ಅನಿರುದ್ಧಾಚಾರ್ಯ ಮಹಾರಾಜ್ ಮತ್ತು ಭಾಜಪ ಸಂಸದ ಮನೋಜ್ ತಿವಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಪಾದಯಾತ್ರೆಯ ರೂಪುರೇಷೆ, ಶಿಸ್ತು ಮತ್ತು ಧಾರ್ಮಿಕ ಶಿಷ್ಟಾಚಾರಗಳ ಬಗ್ಗೆ ಚರ್ಚಿಸಲಾಯಿತು.

ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಮಾತು ಮುಂದುವರೆಸಿ, “ಇದು ಸನಾತನಿಗಳನ್ನು ಒಗ್ಗೂಡಿಸುವ ನಮ್ಮ ಪ್ರಯತ್ನವಾಗಿದೆ. ಮಥುರಾದಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಲು ಈ ಯಾತ್ರೆ ನಡೆಯುತ್ತಿದೆ. ಇದು ಕೇವಲ ಒಂದು ನೋಟ ಮಾತ್ರ, ನಿಜವಾದ ಚಿತ್ರ ಇನ್ನೂ ಬಾಕಿ ಇದೆ. ಈ ಯಾತ್ರೆಯು ಎಲ್ಲಾ ಸನಾತನ ಹಿಂದೂಗಳನ್ನು ಒಗ್ಗೂಡಿಸಲು ಉದ್ದೇಶಿಸಿದೆ. ಧರ್ಮ ವಿರೋಧಿ ಶಕ್ತಿಗಳು ನಮ್ಮನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿವೆ; ಆದರೆ ಎಲ್ಲಾ ಸಂತರು ಮತ್ತು ಮಹಾಪುರುಷರು ನಮ್ಮೊಂದಿಗಿದ್ದಾರೆ. ಬ್ರಜ್ ಪ್ರದೇಶದಲ್ಲಿ ಮಾಂಸ ಮತ್ತು ಮದ್ಯ ಮಾರಾಟ ನಿಷೇಧಿಸುವುದು, ಯಮುನಾ ನದಿಯನ್ನು ಶುದ್ಧೀಕರಿಸುವುದು ಮತ್ತು ಧಾರ್ಮಿಕ ಸ್ಥಳಗಳಲ್ಲಿ ರಾಷ್ಟ್ರಗೀತೆ ನುಡಿಸುವುದು ನಮ್ಮ ನೀತಿಗಳಾಗಿವೆ. ಎಲ್ಲಾ ಸನಾತನಿಗಳು ಒಗ್ಗೂಡುವವರೆಗೂ ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ” ಎಂದು ಹೇಳಿದರು.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ