ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾದ ಪ್ರದೇಶದಲ್ಲಿ ಮುಸ್ಲಿಮರು ಭಗವಾ ಧ್ವಜಗಳ ಪಕ್ಕದಲ್ಲಿ ಹಸಿರು ಧ್ವಜಗಳನ್ನು ಹಾಕಿದರು! – Ratlam Ganesh Utsav Hindus Muslims Fight

ರತಲಾಮ್ (ಮಧ್ಯಪ್ರದೇಶ)ದಲ್ಲಿನ ಘಟನೆ

ಇಂದೋರ್ (ಮಧ್ಯಪ್ರದೇಶ) – ರತಲಾಮ್‌ನ ಕಲೈಗರ್ ರಸ್ತೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. ಈ ಸಂದರ್ಭದಲ್ಲಿ, ಮಂಡಳಿಯ ಸದಸ್ಯರು ಪ್ರದೇಶದ ಕಂಬಗಳ ಮೇಲೆ ಕೇಸರಿ ಧ್ವಜಗಳನ್ನು ಹಾಕಿದರು. ಇದಕ್ಕೆ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿ, ಕೇಸರಿ ಧ್ವಜಗಳ ಪಕ್ಕದಲ್ಲಿ ಹಸಿರು ಧ್ವಜಗಳನ್ನು ಹಾಕಿದರು. ಇದರಿಂದಾಗಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಮುಖಾಮುಖಿ ಸಂಭವಿಸಿ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಯಿತು. ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾದ ಉದ್ವಿಗ್ನ ಪರಿಸ್ಥಿತಿ ಸಂಜೆ 5 ಗಂಟೆಯವರೆಗೆ ಮುಂದುವರೆಯಿತು. ಈ ಸಮಯದಲ್ಲಿ, ಅನೇಕ ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಕೂಡ ಸ್ಥಳಕ್ಕೆ ತಲುಪಿದರು. ಪರಿಸ್ಥಿತಿ ಇನ್ನಷ್ಟು ಹದಗೆಡದಂತೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದರು. “ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿರುವ ಸ್ಥಳದಲ್ಲಿ ಕೇವಲ ಕೇಸರಿ ಧ್ವಜಗಳು ಮಾತ್ರ ಇರುತ್ತವೆ” ಎಂದು ಪೊಲೀಸರು ಸ್ಪಷ್ಟಪಡಿಸಿದರು. “ಈಗ ಪರಿಸ್ಥಿತಿ ಸಾಮಾನ್ಯವಾಗಿದೆ” ಎಂದು ಪೊಲೀಸರು ತಿಳಿಸಿದರು.

ಸಂಪಾದಕೀಯ ನಿಲುವು

ಹಿಂದೂಗಳ ಹಬ್ಬದ ಸಮಯದಲ್ಲಿ ಅನಗತ್ಯವಾಗಿ ಸಮಸ್ಯೆಗಳನ್ನು ಸೃಷ್ಟಿಸಿ ಪರಿಸ್ಥಿತಿಯನ್ನು ಹದಗೆಡಿಸುವ ಮುಸ್ಲಿಮರ ಮನಸ್ಥಿತಿಯನ್ನು ತಿಳಿಯಿರಿ!