ವಡೋದರದಲ್ಲಿ (ಗುಜರಾತ್) ಮುಸ್ಲಿಮರಿಂದ ಶ್ರೀ ಗಣೇಶನ ಮೂರ್ತಿಯ ಮೆರವಣಿಗೆಯ ಮೇಲೆ ಮೊಟ್ಟೆ ಎಸೆತ ! Muslims Throw Eggs Ganesh Chaturthi

  • ಪೊಲೀಸರು ಮತಾಂಧರನ್ನು ಬಂಧಿಸಿ ಜನರ ಎದುರು ಕ್ಷಮೆ ಕೇಳುವಂತೆ ಮಾಡಿದರು!

  • ಪೊಲೀಸ್ ಆಯುಕ್ತ ನರಸಿಂಹ ಕೋಮಾರ್ ಅವರು ಕಠಿಣ ಕ್ರಮಕ್ಕೆ ಆದೇಶ ನೀಡಿದ್ದರಿಂದ ಪೊಲೀಸರಿಂದ ತಕ್ಷಣ ಕ್ರಮ

ಈ ಚಿತ್ರವು ಯಾವುದೇ ವ್ಯಕ್ತಿಯ ಭಾವನೆಗಳಿಗೆ ಧಕ್ಕೆ ತರುವುದಕ್ಕಾಗಿ ಅಲ್ಲ, ಇದು ಕೇವಲ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುವ ಉದ್ದೇಶದಿಂದ ಇದೆ.

ವಡೋದರ (ಗುಜರಾತ) – ನಗರದಲ್ಲಿ ಶ್ರೀ ಗಣೇಶ ಚತುರ್ಥಿಯ ಹಿಂದಿನ ದಿನ ಸಿಟಿ ವಿಸ್ತಾರ ಪ್ರದೇಶದಲ್ಲಿ ಮೆರವಣಿಗೆ ನಡೆಯುತ್ತಿದ್ದಾಗ ಶ್ರೀ ಗಣೇಶನ ಮೂರ್ತಿಯ ಮೇಲೆ ಮುಸಲ್ಮಾನರು ಮೊಟ್ಟೆ ಎಸೆದರು. ಈ ಘಟನೆಯಿಂದ ನಗರದಲ್ಲಿ ಉದ್ವಿಗ್ನತೆ ಉಂಟಾಯಿತು. ಪೊಲೀಸ್ ಆಯುಕ್ತ ನರಸಿಂಹ ಕೋಮಾರ ತಕ್ಷಣ ಕಠಿಣ ಕ್ರಮಕ್ಕೆ ಆದೇಶ ನೀಡಿದರು. ಪೊಲೀಸರು ಮುಸ್ಲಿಂ ಸಮುದಾಯದ ಮೂವರನ್ನು ಬಂಧಿಸಿದರು. ಅವರಲ್ಲಿ ಒಬ್ಬ ಅಪ್ರಾಪ್ತನಾಗಿದ್ದಾನೆ. (ಇದು ಮುಸ್ಲಿಮರಲ್ಲಿ ಚಿಕ್ಕ ವಯಸ್ಸಿನಿಂದಲೇ ಹಿಂದೂಗಳನ್ನು ದ್ವೇಷಿಸಲು ಕಲಿಸಲಾಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ! – ಸಂಪಾದಕರು) ಪೊಲೀಸರು ಮತಾಂಧರನ್ನು ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಮೆರವಣಿಗೆ ಮಾಡಿಸಿದರು. ಅವರ ಕೈಗಳನ್ನು ಕಟ್ಟಿ, ಮೊಣಕಾಲುಗಳ ಮೇಲೆ ಕುಳಿತುಕೊಳ್ಳುವಂತೆ ಮಾಡಿದರು. ನಂತರ ಜನರ ಎದುರು ತಪ್ಪು ಒಪ್ಪಿಕೊಂಡು ಕ್ಷಮೆಯಾಚಿಸುವಂತೆ ಮಾಡಿದರು.

1. ಆಗಸ್ಟ್ 27 ರಂದು ಪೊಲೀಸರು ಮುಸ್ಲಿಮರನ್ನು ಬಂಧಿಸಿದ ನಂತರ, ಅವರನ್ನು ನಗರದ ಪಾಣಿಗೇಟ್ ಪ್ರದೇಶದಲ್ಲಿ ಮೆರವಣಿಗೆ ಮಾಡಿಸಿದರು. ಈ ಪ್ರದೇಶವು ಹಿಂದೂ-ಮುಸ್ಲಿಂ ಮಿಶ್ರ ವಸತಿಯಿಂದ ಕೂಡಿದ್ದು, ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ.

2. ಪೊಲೀಸರು ಅವರನ್ನು ಜನರ ಎದುರು ತಪ್ಪು ಒಪ್ಪಿಕೊಳ್ಳುವಂತೆ ಮಾಡಿದರು. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಮತ್ತು ಅಪರಾಧ ವಿಭಾಗದ ಅಧಿಕಾರಿಗಳು ಅಲ್ಲಿ ಹಾಜರಿದ್ದರು.

3. ಪೊಲೀಸ್ ಆಯುಕ್ತ ನರಸಿಂಹ ಕೋಮಾರ್ ಅವರ ಕಠಿಣ ನಿಲುವಿನಿಂದಾಗಿ ಪೊಲೀಸರು ತಕ್ಷಣ ಕ್ರಮ ಕೈಗೊಂಡರು. ‘ಗಣೇಶೋತ್ಸವದ ಸಮಯದಲ್ಲಿ ಯಾರೂ ಇಂತಹ ಕೆಲಸವನ್ನು ಪುನರಾವರ್ತಿಸುವ ಧೈರ್ಯ ಮಾಡಬಾರದು, ಅದಕ್ಕಾಗಿಯೇ ಸಮಾಜಘಾತುಕ ಶಕ್ತಿಗಳನ್ನು ನಗರದಲ್ಲಿ ಮೆರವಣಿಗೆ ಮಾಡಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಸಂಪಾದಕೀಯ ನಿಲುವು

  • ಪೊಲೀಸರು ಮನಸ್ಸು ಮಾಡಿದರೆ, ಮತಾಂಧ ಮುಸ್ಲಿಮರನ್ನು ಸರಿಯಾದ ದಾರಿಗೆ ತರಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ! ಎಲ್ಲಾ ಕಡೆಗಳಲ್ಲಿನ ಪೊಲೀಸರು ಇದೇ ರೀತಿ ಕ್ರಮ ಕೈಗೊಂಡರೆ, ಮತಾಂಧರ ಚಟುವಟಿಕೆಗಳಿಗೆ ಖಂಡಿತ ಕಡಿವಾಣ ಬೀಳುತ್ತದೆ!
  • ಭಾರತದಲ್ಲಿ ಹಿಂದೂಗಳು ಶಾಂತಿಯುತವಾಗಿ ಮೆರವಣಿಗೆಗಳನ್ನು ನಡೆಸಲು ಬಿಡುವುದಿಲ್ಲ ಎಂದು ಮತಾಂಧರು ಬಹುಶಃ ನಿರ್ಧರಿಸಿದ್ದಾರೆ. ಇಂತಹವರೊಂದಿಗೆ ಸರ್ವಧರ್ಮ ಸಮಭಾವ ಪಾಲಿಸಬೇಕೆಂದು ಹೇಳುವವರು ಇಂತಹ ಘಟನೆಗಳ ಸಮಯದಲ್ಲಿ ಎಲ್ಲಿರುತ್ತಾರೆ?