ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿವಾದಾತ್ಮಕ ಹೇಳಿಕೆ

ಬೆಂಗಳೂರು – ಚಾಮುಂಡೇಶ್ವರಿ ದೇವಿ ಕೇವಲ ಹಿಂದೂಗಳಿಗೆ ಸೇರಿದ್ದಲ್ಲ. ದಸರಾ ಧಾರ್ಮಿಕ ಹಬ್ಬವಲ್ಲ, ಅದು ಸಾಂಸ್ಕೃತಿಕ ಹಬ್ಬವಾಗಿದೆ. (ದಸರಾ ಧರ್ಮದ ವಿಜಯದ ಸಂಕೇತವಾಗಿದೆ, ಅಂದರೆ ಸನಾತನ ಧರ್ಮದ ವಿಜಯದ ಸಂಕೇತವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದರೆ ತಪ್ಪೇನು? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಮಾಡಿದ ಆಯ್ಕೆಗೆ ಭಾಜಪ ವಿರೋಧಿಸಿದ್ದರಿಂದ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ನಾಡ ಹಬ್ಬ – ದಸರಾ
ನಮ್ಮ ನಾಡ ದೇವತೆ – ಚಾಮುಂಡೇಶ್ವರಿಚಾಮುಂಡೇಶ್ವರಿ ತಾಯಿ ನಮ್ಮ ನಾಡಿನ ಅಧಿದೇವತೆ. ಈ ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ, ಧರ್ಮಗಳಲ್ಲೂ ಇದ್ದಾರೆ. ಆಕೆಯ ದರ್ಶನ ಎಲ್ಲರ ಹಕ್ಕು. ತಾಯಿ ಎಲ್ಲ ಭಕ್ತರ, ನಾಡಿನ ಎಲ್ಲ ಮಕ್ಕಳ ಆಸ್ತಿ, ಯಾರೊಬ್ಬರಿಗೂ ಸೀಮಿತ ಅಲ್ಲ. ತಾಯಿಯನ್ನು ಪೂಜಿಸಿದರೆ… pic.twitter.com/AiG8RrMrVZ
— DK Shivakumar (@DKShivakumar) August 27, 2025
ಶಿವಕುಮಾರ್ ಅವರು ಮಾತು ಮುಂದುವರೆಸಿ,
೧. ಚಾಮುಂಡಿ ಬೆಟ್ಟ, ಚಾಮುಂಡಿದೇವಿ ಎಲ್ಲ ಧರ್ಮಗಳಿಗೂ ಸೇರಿದ್ದು. ಎಲ್ಲ ಸಮುದಾಯದ ಜನರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುತ್ತಾರೆ. ಅದು ಅವರ ಶ್ರದ್ಧೆಯಾಗಿದೆ. ನಾವು ಮಸೀದಿ, ಚರ್ಚ್, ಜೈನ ಮಂದಿರ, ಗುರುದ್ವಾರಗಳಿಗೆ ಹೋಗುತ್ತೇವೆ. ಗುರುದ್ವಾರಕ್ಕೆ ಹೋಗುವುದು ತಪ್ಪೇ? ಹಾಗಾದರೆ ಇತರ ಧರ್ಮದವರು ಹಿಂದೂ ದೇವಸ್ಥಾನಕ್ಕೆ ಹೋದರೆ ಯಾಕೆ ವಿರೋಧ?
೨. ಅನೇಕ ಹಿಂದೂಗಳು ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲವೇ? (ಹಿಂದೂಗಳನ್ನು ಖಡ್ಗದ ಬಲದಿಂದ ಮತಾಂತರಗೊಳಿಸಲಾಗಿದೆ ಎಂಬುದು ಇತಿಹಾಸವಾಗಿದೆ. ದೌರ್ಜನ್ಯವೆಸಗಿದ ಮುಸ್ಲಿಂ ಆಕ್ರಮಣಕಾರರು ಹಿಂದೂಗಳನ್ನು ಮತಾಂತರಗೊಳಿಸಿದರು. ಹಾಗಾಗಿ ಅರ್ಧ ಸತ್ಯ ಹೇಳಿ ಸಮಾಜದ ಬುದ್ಧಿಯನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರನ್ನು ಖಂಡಿಸಿ! – ಸಂಪಾದಕರು) ಕೆಲವು ಹಿಂದೂ ಸಂಪ್ರದಾಯಗಳನ್ನು ಮುಸ್ಲಿಮರು ಅನುಸರಿಸುವುದಿಲ್ಲವೇ? (ಹಿಂದೂಗಳು ಮುಸ್ಲಿಮರ ಸಂಪ್ರದಾಯಗಳನ್ನು ಅನುಸರಿಸಬೇಕು ಎಂದು ಇದರರ್ಥ ಎಲ್ಲಿದೆ? – ಸಂಪಾದಕರು) ಇದೆಲ್ಲ ರಾಜಕೀಯವಾಗಿದೆ. ಹಾಗಾದರೆ ಬೆಟ್ಟ ಏರಲು ಏನು ಅಭ್ಯಂತರ? ಉದ್ಘಾಟಿಸಲು ಏನು ಅಭ್ಯಂತರ? ಎಂದು ಉಪಮುಖ್ಯಮಂತ್ರಿ ಶಿವಕುಮಾರ್ ಮರುಪ್ರಶ್ನಿಸಿದ್ದಾರೆ. (ಹಿಂದೂಗಳಿಗೆ ಅಭ್ಯಂತರವಿದೆ! – ಸಂಪಾದಕರು) ಅಯೋಧ್ಯೆಗೆ ಕೇವಲ ಹಿಂದೂಗಳು ಮಾತ್ರ ಬರಬೇಕು ಎಂದು ಬೋರ್ಡ್ ಎಲ್ಲಿದೆ? (ಗೋಮಾಂಸ ತಿನ್ನುವವರು ಮತ್ತು ವಿಗ್ರಹಾರಾಧನೆ ಮಾಡದವರು ಹಿಂದೂ ದೇವಸ್ಥಾನದಲ್ಲಿ ಏನು ಕೆಲಸ? – ಸಂಪಾದಕರು)
ನೀವು (ಕಾಂಗ್ರೆಸ್ಸಿಗರು) ಒಂದೇ ಕುಟುಂಬವನ್ನು ನಿಮ್ಮ ದೇವರನ್ನಾಗಿ ಸ್ವೀಕರಿಸಿದ್ದೀರಿ! – ಸಂಸದ ಯದುವೀರ ಒಡೆಯರ್

ಚಾಮುಂಡಿ ಬೆಟ್ಟ ಎಲ್ಲ ಧರ್ಮ ಮತ್ತು ಸಮುದಾಯಗಳಿಗೆ ತೆರೆದಿದೆ. ದೇವಿಯನ್ನು ಪೂಜಿಸುವ, ಅವಳಲ್ಲಿ ವಿಶ್ವಾಸವಿಟ್ಟಿರುವ ಮತ್ತು ಅವಳನ್ನು ಗೌರವಿಸುವ ಜನರು ಎಲ್ಲ ಜಾತಿ ಮತ್ತು ಧರ್ಮಗಳಲ್ಲಿ ಇದ್ದಾರೆ; ಆದರೆ ಚಾಮುಂಡಿ ಬೆಟ್ಟ ಒಂದು ಶಕ್ತಿಪೀಠವಾಗಿದೆ. ಚಾಮುಂಡೇಶ್ವರಿ ದೇವಿ ಹಿಂದೂಗಳ ದೇವಿ ಮತ್ತು ಅವಳ ಉಲ್ಲೇಖ ಹಿಂದೂ ಧರ್ಮಗ್ರಂಥವಾದ ಮಾರ್ಕಂಡೇಯ ಪುರಾಣದ ‘ದೇವಿ ಮಹಾತ್ಮೆ’ದಲ್ಲಿದೆ, ಬೇರೆ ಯಾವುದೇ ಧರ್ಮಗ್ರಂಥಗಳಲ್ಲಿ ಇಲ್ಲ. ಇಲ್ಲಿ ಪ್ರತಿದಿನ ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ಪೂಜೆ ಮತ್ತು ಸಂಪ್ರದಾಯಗಳು ನಡೆಯುತ್ತವೆ.
ಚಾಮುಂಡಿ ಬೆಟ್ಟ ಎಲ್ಲ ಧರ್ಮ–ಸಮುದಾಯದವರಿಗೂ ಮುಕ್ತವಾಗಿ ತೆರೆದಿದೆ. ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ-ಧರ್ಮಗಳಲ್ಲಿದ್ದಾರೆ.
ಆದರೆ, ಚಾಮುಂಡಿ ಬೆಟ್ಟ ಒಂದು ಶಕ್ತಿಪೀಠ. ತಾಯಿ ಚಾಮುಂಡೇಶ್ವರಿ ಹಿಂದೂ ದೇವಿ – ಆಕೆಯ ಉಲ್ಲೇಖ ಹಿಂದೂ ಗ್ರಂಥವಾದ ಮಾರ್ಕಂಡೇಯ ಪುರಾಣದ ದೇವಿ ಮಹಾತ್ಮ್ಯದಲ್ಲಿದೆ; ಬೇರೆ ಧರ್ಮಗಳ… https://t.co/303zPivqnJ
— Yaduveer Wadiyar (@yaduveerwadiyar) August 27, 2025
ಇಲ್ಲಿಗೆ ಬರುವ ಎಲ್ಲರೂ ಅವಳನ್ನು ಹಿಂದೂ ದೇವಿ ಎಂದೇ ಪೂಜಿಸುತ್ತಾರೆ. ದಸರಾ ನಮ್ಮ ದೇಶದ ಅತಿದೊಡ್ಡ ಸಾಂಸ್ಕೃತಿಕ ಹಬ್ಬವಾಗಿದೆ. ಎಲ್ಲ ಧರ್ಮದ ಜನರು ಇದರಲ್ಲಿ ಭಾಗವಹಿಸಬಹುದು; ಆದರೆ ಮೂಲತಃ ಇದು ಒಂದು ಹಿಂದೂ ಹಬ್ಬವಾಗಿದೆ. ಇದರ ದಿನಾಂಕವನ್ನು ಹಿಂದೂ ಪಂಚಾಂಗದ ಪ್ರಕಾರ ನಿರ್ಧರಿಸಲಾಗುತ್ತದೆ. ಇದು ಯಾರ ಇಚ್ಛೆ ಅಥವಾ ಭಾವನೆಗಳಿಗೆ ಅನುಗುಣವಾಗಿ ಬದಲಾಯಿಸಬಹುದಾದ ಹಬ್ಬವಲ್ಲ. ನೀವು ಒಂದೇ ಕುಟುಂಬವನ್ನು ನಿಮ್ಮ ದೇವರನ್ನಾಗಿ ಸ್ವೀಕರಿಸಿದ್ದೀರಿ. ಇಂತಹ ಪರಿಸ್ಥಿತಿಯಲ್ಲಿ, ನೀವು ದೇವಿಯ ಹಿಂದೂ ಸ್ವರೂಪ ಮತ್ತು ದಸರಾದ ಧಾರ್ಮಿಕ ಪರಂಪರೆಯನ್ನು ತಿರಸ್ಕರಿಸುವ ಧೈರ್ಯ ಮಾಡಬೇಡಿ. ನಾವು ರಾಜಕೀಯ ಮಾಡುತ್ತಿಲ್ಲ. ನೀವು ಓಲೈಕೆ ರಾಜಕಾರಣಕ್ಕಾಗಿ ನಮ್ಮ ಧರ್ಮದ ಮೇಲೆ ಆಕ್ರಮಣ ಮಾಡಿದಾಗ, ನಾವು ಅದನ್ನು ರಕ್ಷಿಸಲು ನಿಂತಿದ್ದೇವೆ, ಎಂದು ಮೈಸೂರಿನ ಭಾಜಪ ಸಂಸದ ಶ್ರೀ. ಯದುವೀರ ಒಡೆಯರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!