ಭಗವಾನ್ ಹನುಮಂತ ಮೊದಲ ಗಗನಯಾತ್ರಿ! – ಭಾಜಪ ಸಂಸದ ಅನುರಾಗ್ ಠಾಕೂರ್

ನವದೆಹಲಿ – ಹನುಮಂತನು ಮೊದಲ ಗಗನಯಾತ್ರಿ ಎಂದು ಭಾಜಪ ಸಂಸದ ಮತ್ತು ಮಾಜಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಆಗಸ್ಟ್ 23ರಂದು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ದಂದು ಹಿಮಾಚಲ ಪ್ರದೇಶದ ಹಮೀರ್‌ಪುರದ ಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ, ಬಾಹ್ಯಾಕಾಶಕ್ಕೆ ಹೋದ ಮೊದಲ ವ್ಯಕ್ತಿ ಯಾರು ಎಂದು ಕೇಳಿದರು? ಈ ಪ್ರಶ್ನೆಗೆ ವಿದ್ಯಾರ್ಥಿಗಳು ನೀಲ್ ಆರ್ಮ್‌ಸ್ಟ್ರಾಂಗ್ ಎಂದು ಉತ್ತರಿಸಿದರು. ಇದಕ್ಕೆ ಅವರು, ಹನುಮಂತನು ಬಾಹ್ಯಾಕಾಶಕ್ಕೆ ಹೋದ ಮೊದಲ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಸಂಸದ ಠಾಕೂರ್ ಅವರು ಭಾರತದ ಬಾಹ್ಯಾಕಾಶ ಪ್ರಗತಿಯನ್ನು ಶ್ಲಾಘಿಸಿದರು!

ಠಾಕೂರ್ ಅವರು ಈ ಸಂದರ್ಭದಲ್ಲಿ ವೇದಗಳು, ಧರ್ಮಗ್ರಂಥಗಳು ಮತ್ತು ಜ್ಞಾನದತ್ತ ಗಮನ ಹರಿಸುವಂತೆ ಜನರಿಗೆ ಕರೆ ನೀಡಿದರು. 2023 ರಲ್ಲಿ ಚಂದ್ರಯಾನ-3 ಮೂಲಕ ಭಾರತ ಸಾಧಿಸಿದ ಯಶಸ್ಸು ಮತ್ತು 2035 ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಮತ್ತು 2040 ರ ವೇಳೆಗೆ ಚಂದ್ರನ ಮೇಲೆ ‘ಕ್ರೂ ಲ್ಯಾಂಡಿಂಗ್’ (ಮಾನವರನ್ನು ಇಳಿಸುವುದು) ಮಾಡುವ ಭಾರತದ ಗುರಿಯನ್ನು ಶ್ಲಾಘಿಸಿದರು.

ಸಂಪಾದಕೀಯ ನಿಲುವು

  • ಹನುಮಂತನು ಸೂರ್ಯನನ್ನು ನುಂಗಲು ಹಾರಿದನು, ಇದು ಇತಿಹಾಸ ಇದೆ. ಈ ಇತಿಹಾಸವನ್ನು ಮಕ್ಕಳಿಗೆ ಶಾಲೆಗಳಲ್ಲಿ ಕಲಿಸುವುದು ಅವಶ್ಯಕವಾಗಿದೆ, ಆಗ ಮಾತ್ರ ಅವರಿಗೆ ಭಾರತದ ಭವ್ಯ ಇತಿಹಾಸದ ಮಹತ್ವವು ತಿಳಿಯುತ್ತದೆ!
  • ಅನೇಕ ಋಷಿಮುನಿಗಳು ಸೂಕ್ಷ್ಮ ರೂಪದಲ್ಲಿ ಬಾಹ್ಯಾಕಾಶದಲ್ಲಿ ಸಂಚರಿಸುತ್ತಿದ್ದರು, ಇದು ಕೂಡ ಇತಿಹಾಸ ಇದೆ. ಇಂದಿಗೂ ಅನೇಕ ಸಾಧು-ಸಂತರು ಕ್ಷಣಾರ್ಧದಲ್ಲಿ ಈ ರೀತಿಯ ಪ್ರಯಾಣ ಮಾಡಬಹುದು. ಇದಕ್ಕೆ ಉದಾಹರಣೆಗಳೂ ಲಭ್ಯವಿವೆ. ಇದನ್ನೂ ಮಕ್ಕಳಿಗೆ ಕಲಿಸುವುದು ಅವಶ್ಯಕವಾಗಿದೆ!

‘ಸಂಸದ ಠಾಕೂರ್ ವಿದ್ಯಾರ್ಥಿಗಳನ್ನು ಅಂತಹ ಪ್ರಶ್ನೆ ಕೇಳುವುದು ಸೂಕ್ತವಲ್ಲ!'(ಅಂತೆ)

ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ, ಅಂದರೆ ದ್ರಾವಿಡ ಪ್ರಗತಿ ಸಂಘ) ಸಂಸದೆ ಕನಿಮೋಳಿ ಅವರಿಂದ ಟೀಕೆ

ಠಾಕೂರ್ ಅವರ ಹೇಳಿಕೆಗೆ ಡಿಎಂಕೆ ಸಂಸದೆ ಕನಿಮೋಳಿ ವಿರೋಧ ವ್ಯಕ್ತಪಡಿಸಿದ್ದಾರೆ. ಚಂದ್ರನ ಮೇಲೆ ಮೊದಲು ಕಾಲಿಟ್ಟವರು ಯಾರು ಎಂದು ಸಂಸದ ಠಾಕೂರ್ ಕೇಳಿದ್ದು ಮತ್ತು ಆ ವ್ಯಕ್ತಿ ನೀಲ್ ಆರ್ಮ್‌ಸ್ಟ್ರಾಂಗ್ ಅಲ್ಲ, ಹನುಮಂತ ಎಂದು ಹೇಳಿದ್ದು ಅಥವಾ ವಾದಿಸಿದ್ದು ತಪ್ಪು ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಕಟ್ಟರ್ ಹಿಂದೂ ವಿರೋಧಿ ಡಿಎಂಕೆ ನಾಯಕರು ಈ ರೀತಿ ಟೀಕಿಸುವುದು ಆಶ್ಚರ್ಯವೇನಲ್ಲ. ಈ ಪಕ್ಷವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು, ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಹಿಂದೂಗಳು ಸಂಸತ್ತಿನಿಂದ ಮಾತ್ರವಲ್ಲದೆ ತಮಿಳುನಾಡು ವಿಧಾನಸಭೆಯಿಂದಲೂ ಅವರನ್ನು ಮನೆಗೆ ಕಳುಹಿಸುತ್ತಾರೆ!