ಕೇರಳದ ನಾಲ್ಕನೇ ತರಗತಿಯ ಪುಸ್ತಕದಲ್ಲಿ ‘ಬ್ರಿಟಿಷರಿಗೆ ಹೆದರಿ ನೇತಾಜಿ ಬೋಸ್ ಜರ್ಮನಿಗೆ ಓಡಿಹೋದರು’ ಎಂದು ತಪ್ಪಾದ ಉಲ್ಲೇಖ : Kerala Anti-National Blunder Textbook

ಶಿಕ್ಷಣ ಸಚಿವರು ತಪ್ಪನ್ನು ಒಪ್ಪಿಕೊಂಡು, ಪುಸ್ತಕದಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು

ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಕೇರಳ ಶಿಕ್ಷಣ ಸಚಿವ ವಿ.ಶಿವನಕಟ್ಟಿ

ತಿರುವನಂತಪುರಂ (ಕೇರಳ) – ಕೇರಳ ರಾಜ್ಯದ ಶಾಲಾ ಪುಸ್ತಕದಲ್ಲಿ, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಬ್ರಿಟಿಷರಿಗೆ ಹೆದರಿ ಜರ್ಮನಿಗೆ ಓಡಿಹೋದರು ಎಂದು ಹೇಳಲಾಗಿತ್ತು. ಕೇರಳ ಸರಕಾರವು ಈ ತಪ್ಪನ್ನು ಒಪ್ಪಿಕೊಂಡಿದ್ದು, ಅದನ್ನು ಸರಿಪಡಿಸಲಾಗಿದೆ ಎಂದು ಹೇಳಿಕೊಂಡಿದೆ. ನಾಲ್ಕನೇ ತರಗತಿಯ ಶಿಕ್ಷಕರಿಗೆ ನೀಡಿದ ಪುಸ್ತಕದಲ್ಲಿ (‘ಶಿಕ್ಷಕರ ಕೈಪಿಡಿ’ಯಲ್ಲಿ) ಈ ತಪ್ಪು ಕಂಡುಬಂದಿತ್ತು. ವಿರೋಧ ಪಕ್ಷಗಳು ಸರಕಾರವನ್ನು ಪ್ರಶ್ನಿಸಿದಾಗ, ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ತಪ್ಪನ್ನು ಒಪ್ಪಿಕೊಂಡರು. ಈ ಪುಸ್ತಕವನ್ನು ತಯಾರಿಸಿದ ಸಮಿತಿಯ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು. ಭವಿಷ್ಯದಲ್ಲಿ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡುವುದಿಲ್ಲ ಎಂದು ಸಹ ಘೋಷಿಸಿದರು.

ಮಾರುಕಟ್ಟೆ ಅಥವಾ ಶಾಲೆಗಳಲ್ಲಿನ ಶಿಕ್ಷಕರಿಗೆ ತಲುಪಿದ ಪುಸ್ತಕಗಳನ್ನು ಹಿಂಪಡೆಯಲಾಗಿದೆ, ಮತ್ತು ತಿದ್ದುಪಡಿ ಮಾಡಿದ ಹೊಸ ಪುಸ್ತಕಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು. ಜೊತೆಗೆ, ಆನ್‌ಲೈನ್‌ನಲ್ಲಿ ಲಭ್ಯವಿರುವ ಪುಸ್ತಕದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದರು.

ಸಂಪಾದಕೀಯ ನಿಲುವು

ವಾಸ್ತವದಲ್ಲಿ ಇಂತಹ ತಪ್ಪು ಹೇಗೆ ಆಗುತ್ತದೆ? ಈ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕ!