ಮುಂಬಯಿ ಉಚ್ಚ ನ್ಯಾಯಾಲಯ ‘ಪಿಒಪಿ’ ಮೂರ್ತಿಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದರೂ, ರಾಜ್ಯದಲ್ಲಿ ಕೃತಕ ತೊಟ್ಟಿಗಳಿಗಾಗಿ ಕೋಟಿಗಟ್ಟಲೆ ಅನಗತ್ಯ ಹಣ ವ್ಯಯಿಸುವ ಹುನ್ನಾರ! : POP Ganesha

ಶ್ರೀ. ಪ್ರೀತಮ್ ನಾಚಣಕರ, ವಿಶೇಷ ಪ್ರತಿನಿಧಿ, ಸನಾತನ ಪ್ರಭಾತ

ಕೃತಕ ಕೊಳದಲ್ಲಿ ಗಣೇಶನ ವಿಸರ್ಜನೆ (ಸಾಂಕೇತಿಕ ಛಾಯಾಚಿತ್ರ)

ಮುಂಬಯಿ, ಆಗಸ್ಟ್ 15 – ‘ಪಿಒಪಿ’ಯಿಂದ (ಪ್ಲಾಸ್ಟರ್ ಆಫ್ ಪ್ಯಾರಿಸ್) ಮಾಲಿನ್ಯವಾಗುತ್ತದೆ ಎಂದು ಯಾವುದೇ ಸಂಶೋಧನಾ ವರದಿ ಲಭ್ಯವಿಲ್ಲ. ಹೀಗಿದ್ದರೂ, ಗಣೇಶೋತ್ಸವದ ಸಮಯದಲ್ಲಿ ‘ಪಿಒಪಿ’ ಮೂರ್ತಿಗಳಿಂದ ಮಾಲಿನ್ಯವಾಗುತ್ತಿದೆ ಎಂದು ಕಾಂಗ್ರೆಸ್ ಹಲವು ವರ್ಷಗಳಿಂದ ಸುಳ್ಳು ಕಥೆಯನ್ನು ಹಬ್ಬಿಸಿತ್ತು. ಜೂನ್ 9, 2025 ರಂದು ಮುಂಬಯಿ ಉಚ್ಚ ನ್ಯಾಯಾಲಯ ‘ಪಿಒಪಿ’ ಮೂರ್ತಿಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದ ನಂತರ, ಹಿಂದೂ ಹಬ್ಬಗಳಿಂದ ಮಾಲಿನ್ಯವಾಗುತ್ತಿದೆ ಎಂಬ ಕಾಂಗ್ರೆಸ್‌ ನ ‘ನಕಲಿ ನಿರೂಪಣೆ’ಯ (ಸುಳ್ಳು ಕಥೆ) ಪೊಳ್ಳುತನ ಬಯಲಾಯಿತು. ಮೂರ್ತಿಗಳಿಂದ ಮಾಲಿನ್ಯವಾಗುತ್ತಿಲ್ಲ ಎಂದು ಸಾಬೀತಾದ ನಂತರವೂ, ಮಹಾರಾಷ್ಟ್ರದಲ್ಲಿ ‘ಪಿಒಪಿ’ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಕೋಟಿಗಟ್ಟಲೆ ಅನಗತ್ಯ ಹಣವನ್ನು ಖರ್ಚು ಮಾಡಿ ಕೃತಕ ತೊಟ್ಟಿಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

ಶ್ರೀ ಪ್ರೀತಮ್ ನಾಚಂಕರ್

‘ಪಿಒಪಿ’ ಮೂರ್ತಿಗಳ ಮೇಲಿನ ನಿಷೇಧವನ್ನು ತೆಗೆದುಹಾಕುವ ಘಟನಾವಳಿಗಳು!

ಮಾರ್ಚ್ 2025 ರಲ್ಲಿ ಮಹಾರಾಷ್ಟ್ರ ಸರಕಾರವು ‘ಪಿಒಪಿ’ ಮೂರ್ತಿಗಳಿಂದ ಮಾಲಿನ್ಯವಾಗುತ್ತದೆಯೇ ಎಂದು ಅಧ್ಯಯನ ಮಾಡಲು ಪರಮಾಣು ವಿಜ್ಞಾನಿ ಡಾ. ಅನಿಲ ಕಾಕೋಡ್ಕರ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಜೂನ್ 2025 ರಲ್ಲಿ ಸಲ್ಲಿಸಿದ ವರದಿಯಲ್ಲಿ ‘ಪಿಒಪಿ’ಯಿಂದ ಮಾಲಿನ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ಸಮಿತಿಯ ವರದಿಯ ಆಧಾರದ ಮೇಲೆ, ಮುಂಬಯಿ ಉಚ್ಚ ನ್ಯಾಯಾಲಯ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ಮೇಲಿನ ನಿಷೇಧವನ್ನು ತೆಗೆದುಹಾಕುವ ಮಹತ್ವದ ನಿರ್ಧಾರವನ್ನು ಕೈಗೊಂಡಿತು.

ಸಣ್ಣ ಆಕಾರದ ‘ಪಿಒಪಿ’ ಮೂರ್ತಿಗಳನ್ನು ತೊಟ್ಟಿಗಳಲ್ಲಿ ವಿಸರ್ಜನೆ ಮಾಡುವುದರ ಕಾರಣವಾದರೂ ಏನು?

ಗಣೇಶ ಮೂರ್ತಿಗಳ ವಿಸರ್ಜನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರಕಾರವು ಮುಂಬಯಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ ನಲ್ಲಿ 5 ಅಡಿಗಳವರೆಗಿನ ಮೂರ್ತಿಗಳನ್ನು ಕೃತಕ ತೊಟ್ಟಿಗಳಲ್ಲಿ ವಿಸರ್ಜಿಸುವ ನೀತಿಯನ್ನು ಮಂಡಿಸಿದೆ. ಇದಕ್ಕೆ ನ್ಯಾಯಾಲಯವು ಜುಲೈ 2025 ರಲ್ಲಿ 6 ಅಡಿಗಳವರೆಗಿನ ಮೂರ್ತಿಗಳನ್ನು ಕೃತಕ ತೊಟ್ಟಿಗಳಲ್ಲಿ ವಿಸರ್ಜಿಸಲು ನಿರ್ದೇಶನ ನೀಡಿದೆ. ಮೂಲಭೂತ ಪ್ರಶ್ನೆಯೆಂದರೆ, ಗೌರವಾನ್ವಿತ ಉಚ್ಚ ನ್ಯಾಯಾಲಯವು ‘ಪಿಒಪಿ’ಯಿಂದ ಮಾಲಿನ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ, ‘ಪಿಒಪಿ’ ಮೂರ್ತಿಗಳ ವಿಸರ್ಜನೆಗಾಗಿ ಕೃತಕ ತೊಟ್ಟಿಗಳು ಏಕೆ ಬೇಕು? ಎಂದು ಧರ್ಮಪ್ರೇಮಿ ಹಿಂದೂಗಳು ಪ್ರಶ್ನಿಸುತ್ತಿದ್ದಾರೆ.

ಮಾಲಿನ್ಯದ ಸಮಸ್ಯೆಯಲ್ಲ, ಬದಲಿಗೆ ‘ಪಿಒಪಿ’ ವಿಲೇವಾರಿಯ ಸಮಸ್ಯೆ!

ವಾಸ್ತವವಾಗಿ, ‘ಪಿಒಪಿ’ ಮೂರ್ತಿಗಳಿಂದ ಮಾಲಿನ್ಯದ ಸಮಸ್ಯೆಯೇ ಇಲ್ಲ. ‘ಪಿಒಪಿ’ ನೀರಿನಲ್ಲಿ ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಒಂದು ತೊಂದರೆ ಇದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ‘ಪಿಒಪಿ’ಯನ್ನು ತ್ವರಿತವಾಗಿ ಹೇಗೆ ವಿಲೇವಾರಿ ಮಾಡುವುದು ಎಂದು ಸಂಶೋಧಿಸಲು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಆಗಸ್ಟ್ 1, 2025 ರಂದು ತಜ್ಞರ ಸಮಿತಿಯನ್ನು ರಚಿಸಲಾಗಿದೆ. ‘ಪಿಒಪಿ’ಯನ್ನು ತ್ವರಿತವಾಗಿ ಹೇಗೆ ವಿಲೇವಾರಿ ಮಾಡುವುದು ಎಂಬುದರ ಕುರಿತು ಅಧ್ಯಯನ ಮಾಡಿ ಈ ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸಲಿದೆ.

ಸಂಪಾದಕೀಯ ನಿಲುವು

ಮುಂಬಯಿ ಉಚ್ಚ ನ್ಯಾಯಾಲಯದ ತೀರ್ಪನ್ನು ನಿರ್ಲಕ್ಷಿಸುವ ಪ್ರಯತ್ನವಿದು. ಭಾರತದ ವ್ಯವಸ್ಥೆಯೇ ಹಿಂದೂ ಧರ್ಮಶಾಸ್ತ್ರಗಳಿಗೆ ವಿರುದ್ಧವಾಗಿದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ. ಧರ್ಮನಿಷ್ಠ ಹಿಂದೂಗಳು ಇದನ್ನು ಪ್ರಾಣವನ್ನು ಪಣಕ್ಕಿಟ್ಟು ತೀವ್ರವಾಗಿ ವಿರೋಧಿಸುವುದು ಈಗ ಅಗತ್ಯವಾಗಿದೆ!