
ನವದೆಹಲಿ – ಇಸ್ರೇಲ್ ಗಾಜಾದಲ್ಲಿ 60 ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದೆ, ಅದರಲ್ಲಿ 18 ಸಾವಿರದ 430 ಮಕ್ಕಳು ಸೇರಿದ್ದಾರೆ. ಇಸ್ರೇಲ್ ನಾಗರಿಕರ ಮೇಲೆ ದಾಳಿಗಳನ್ನು ಮಾಡುತ್ತಿರುವಾಗ, ಭಾರತ ಸರಕಾರ ಪ್ಯಾಲೆಸ್ತೀನ್ ಜನರ ದುಃಖದ ಬಗ್ಗೆ ಮೌನವಾಗಿ ಕುಳಿತಿದೆ. ಗಾಜಾದಲ್ಲಿ ನೂರಾರು ಜನರು ಹಸಿವಿನಿಂದ ಸತ್ತಿದ್ದಾರೆ ಮತ್ತು ಲಕ್ಷಾಂತರ ಜನರು ಹಸಿವಿನ ಅಪಾಯದಲ್ಲಿದ್ದಾರೆ. ಮೌನದಿಂದ ಇಂತಹ ಅಪರಾಧಗಳನ್ನು ಉತ್ತೇಜಿಸುವುದು ಕೂಡ ಒಂದು ಅಪರಾಧ ಎಂದು ಪ್ರಿಯಾಂಕಾ ವಾಡ್ರಾ ಅವರು ಭಾರತ ಸರಕಾರವನ್ನು ಟೀಕಿಸಿದ್ದಾರೆ.
ಹೆಚ್ಚಿನ ನಾಗರಿಕರ ಸಾವು ಹಮಾಸನ ಹೇಯ ತಂತ್ರಗಳ ಪರಿಣಾಮ ! – ಇಸ್ರೇಲ್

ಪ್ರಿಯಾಂಕಾ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೂವೆನ್ ಇವರು, ಇಸ್ರೇಲ್ 25 ಸಾವಿರ ಹಮಾಸ್ ಭಯೋತ್ಪಾದಕರನ್ನು ಕೊಂದಿದೆ. ಹೆಚ್ಚಿನ ನಾಗರಿಕರ ಸಾವು ಹಮಾಸ್ ನ ಹೇಯ ರಣತಂತ್ರಗಳ ಪರಿಣಾಮವಾಗಿದೆ. ಅವರ ಭಯೋತ್ಪಾದಕರು ನಾಗರಿಕರ ಹಿಂದೆ ಅಡಗಿರುತ್ತಾರೆ ಮತ್ತು ಜನರು ಓಡಿ ಹೋಗದಂತೆ ಅಥವಾ ಸಹಾಯಕ್ಕಾಗಿ ಕೇಳದಂತೆ ತಡೆಯುತ್ತಾರೆ.
ಇಸ್ರೇಲ್ ಗಾಜಾಗೆ 20 ಲಕ್ಷ ಟನ್ ಆಹಾರವನ್ನು ತಲುಪಿಸಿತು; ಆದರೆ ಹಮಾಸ್ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತು, ಇದರಿಂದಾಗಿ ಹಸಿವು ಉಂಟಾಯಿತು. ಕಳೆದ 50 ವರ್ಷಗಳಲ್ಲಿ ಗಾಜಾದ ಜನಸಂಖ್ಯೆ ಶೇ.450 ರಷ್ಟು ಹೆಚ್ಚಾಗಿದೆ. ಜನರು ಹಮಾಸ್ ನ ಅಂಕಿಅಂಶಗಳನ್ನು ನಂಬಬಾರದು ಎಂದು ಅವರು ಹೇಳಿದರು.
ಸಂಪಾದಕೀಯ ನಿಲುವು
|
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !
ಸಲ್ಮಾನ್ ಖಾನ್ ಅವರಿಂದ ಪರಿಸರ ನಿಯಮಗಳ ಉಲ್ಲಂಘನೆ! – ವಿಡಿಯೋ ಮೂಲಕ ನೆರೆಹೊರೆಯವರ ಆರೋಪ