ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ಭಾರತ ಸರಕಾರ ಮೌನವಾಗಿರುವುದು ಕೂಡ ಒಂದು ಅಪರಾಧ ! – Priyanka Vadra On Gaza

ನವದೆಹಲಿ – ಇಸ್ರೇಲ್ ಗಾಜಾದಲ್ಲಿ 60 ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದೆ, ಅದರಲ್ಲಿ 18 ಸಾವಿರದ 430 ಮಕ್ಕಳು ಸೇರಿದ್ದಾರೆ. ಇಸ್ರೇಲ್ ನಾಗರಿಕರ ಮೇಲೆ ದಾಳಿಗಳನ್ನು ಮಾಡುತ್ತಿರುವಾಗ, ಭಾರತ ಸರಕಾರ ಪ್ಯಾಲೆಸ್ತೀನ್ ಜನರ ದುಃಖದ ಬಗ್ಗೆ ಮೌನವಾಗಿ ಕುಳಿತಿದೆ. ಗಾಜಾದಲ್ಲಿ ನೂರಾರು ಜನರು ಹಸಿವಿನಿಂದ ಸತ್ತಿದ್ದಾರೆ ಮತ್ತು ಲಕ್ಷಾಂತರ ಜನರು ಹಸಿವಿನ ಅಪಾಯದಲ್ಲಿದ್ದಾರೆ. ಮೌನದಿಂದ ಇಂತಹ ಅಪರಾಧಗಳನ್ನು ಉತ್ತೇಜಿಸುವುದು ಕೂಡ ಒಂದು ಅಪರಾಧ ಎಂದು ಪ್ರಿಯಾಂಕಾ ವಾಡ್ರಾ ಅವರು ಭಾರತ ಸರಕಾರವನ್ನು ಟೀಕಿಸಿದ್ದಾರೆ. ‌

ಹೆಚ್ಚಿನ ನಾಗರಿಕರ ಸಾವು ಹಮಾಸನ ಹೇಯ ತಂತ್ರಗಳ ಪರಿಣಾಮ ! – ಇಸ್ರೇಲ್

ಪ್ರಿಯಾಂಕಾ ವಾದ್ರಾ ಮತ್ತು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರುವೆನ್

ಪ್ರಿಯಾಂಕಾ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೂವೆನ್ ಇವರು, ಇಸ್ರೇಲ್ 25 ಸಾವಿರ ಹಮಾಸ್ ಭಯೋತ್ಪಾದಕರನ್ನು ಕೊಂದಿದೆ. ಹೆಚ್ಚಿನ ನಾಗರಿಕರ ಸಾವು ಹಮಾಸ್ ನ ಹೇಯ ರಣತಂತ್ರಗಳ ಪರಿಣಾಮವಾಗಿದೆ. ಅವರ ಭಯೋತ್ಪಾದಕರು ನಾಗರಿಕರ ಹಿಂದೆ ಅಡಗಿರುತ್ತಾರೆ ಮತ್ತು ಜನರು ಓಡಿ ಹೋಗದಂತೆ ಅಥವಾ ಸಹಾಯಕ್ಕಾಗಿ ಕೇಳದಂತೆ ತಡೆಯುತ್ತಾರೆ.

ಇಸ್ರೇಲ್ ಗಾಜಾಗೆ 20 ಲಕ್ಷ ಟನ್ ಆಹಾರವನ್ನು ತಲುಪಿಸಿತು; ಆದರೆ ಹಮಾಸ್ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತು, ಇದರಿಂದಾಗಿ ಹಸಿವು ಉಂಟಾಯಿತು. ಕಳೆದ 50 ವರ್ಷಗಳಲ್ಲಿ ಗಾಜಾದ ಜನಸಂಖ್ಯೆ ಶೇ.450 ರಷ್ಟು ಹೆಚ್ಚಾಗಿದೆ. ಜನರು ಹಮಾಸ್‌ ನ ಅಂಕಿಅಂಶಗಳನ್ನು ನಂಬಬಾರದು ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

  • ಭಾರತದ ವಿಭಜನೆಯ ಸಮಯದಲ್ಲಿ 10 ಲಕ್ಷ ಹಿಂದೂಗಳ ನರಮೇಧಕ್ಕೆ ಕಾಂಗ್ರೆಸ್ ಕಾರಣವಾಗಿತ್ತು. 1984 ರಲ್ಲಿ ಸಿಖ್ಖರ ನರಮೇಧಕ್ಕೆ ಕಾಂಗ್ರೆಸ್ ಕಾರಣವಾಗಿತ್ತು, ಇದರ ಬಗ್ಗೆ ಪ್ರಿಯಾಂಕಾ ವಾಡ್ರಾ ಎಂದಿಗೂ ಏಕೆ ಮಾತನಾಡುವುದಿಲ್ಲ?
  • ಕಾಶ್ಮೀರದಲ್ಲಿ ಹಿಂದೂಗಳನ್ನು ಕೊಲ್ಲಲಾಯಿತು, ಲಕ್ಷಾಂತರ ಹಿಂದೂಗಳನ್ನು ಓಡಿಸಲಾಯಿತು, ಅದರ ಬಗ್ಗೆ ಕಾಂಗ್ರೆಸ್ ಏನನ್ನೂ ಮಾಡಲಿಲ್ಲ, ಅದರ ಬಗ್ಗೆ ಪ್ರಿಯಾಂಕಾ ವಾಡ್ರಾ ಮಾತನಾಡುವುದಿಲ್ಲ; ಆದರೆ ಗಾಜಾದಲ್ಲಿ ಹಮಾಸ್ ಭಯೋತ್ಪಾದಕರಿಗೆ ಸಹಾಯ ಮಾಡುವ ಮುಸ್ಲಿಮರ ಬಗ್ಗೆ ಅವರಿಗೆ ಕಾಳಜಿ ಇದೆ!