
ಕ್ಯಾಲಿಫೋರ್ನಿಯಾ (ಅಮೆರಿಕಾ) – ಖಲಿಸ್ತಾನ ವಿರೋಧಿ ನಿಲುವುಗಳನ್ನು ಹೊಂದಿದ್ದ, ಅಮೆರಿಕಾ ಮೂಲದ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಸುಖಿ ಚಾಹಲ್ ಅವರು ಅನುಮಾನಾಸ್ಪದವಾಗಿ ನಿಧನರಾಗಿದ್ದಾರೆ. ಸುಖಿ ಚಾಹಲ್ ಸಂಪೂರ್ಣ ಆರೋಗ್ಯವಂತರಾಗಿದ್ದರಿಂದ, ಅವರ ಹಠಾತ್ ಮರಣದ ಬಗ್ಗೆ ಗಂಭೀರ ಅನುಮಾನಗಳು ಹುಟ್ಟಿಕೊಂಡಿವೆ. ಚಾಹಲ್ ಅವರು ‘ಖಾಲ್ಸಾ ಟುಡೇ’ ಸಂಸ್ಥೆಯ ಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.
🚨 Anti-Khalistan activist dies under mysterious circumstances in the US – just days before the August 17 Khalistan Referendum in Washington DC.
His sudden death raises serious questions, as he was actively opposing the event.
PC: @Resonant_News pic.twitter.com/zqJrHGs76T
— Sanatan Prabhat (@SanatanPrabhat) August 3, 2025
1. ಚಾಹಲ್ ಅವರ ಸ್ನೇಹಿತ ಜಸ್ಪಾಲ್ ಸಿಂಗ್ ಅವರ ಪ್ರಕಾರ, ಜುಲೈ 31 ರಂದು ಚಾಹಲ್ ಅವರನ್ನು ಅವರ ಪರಿಚಿತರೊಬ್ಬರು ರಾತ್ರಿ ಊಟಕ್ಕೆ ಮನೆಗೆ ಆಹ್ವಾನಿಸಿದ್ದರು. ಊಟದ ನಂತರ ಸ್ವಲ್ಪ ಸಮಯದಲ್ಲೇ ಅವರ ಆರೋಗ್ಯ ಹಠಾತ್ತಾಗಿ ಹದಗೆಟ್ಟು ಸ್ಥಳದಲ್ಲೇ ನಿಧನರಾದರು.
2. ಜಸ್ಪಾಲ್ ಸಿಂಗ್ ಅವರ ಹೇಳಿಕೆಯ ಪ್ರಕಾರ, ಆಗಸ್ಟ್ 17, 2025 ರಂದು ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಖಲಿಸ್ತಾನ ಜನಮತ ಸಂಗ್ರಹದ ಮೊದಲು ಚಾಹಲ್ ಅವರ ಸಾವು ಸಂಭವಿಸಿದೆ, ಈ ಜನಮತ ಸಂಗ್ರಹವನ್ನು ಅವರು ತೀವ್ರವಾಗಿ ವಿರೋಧಿಸುತ್ತಿದ್ದರು.
3. ಕ್ಯಾಲಿಫೋರ್ನಿಯಾದಲ್ಲಿ ಅವರ ಪರಿಚಿತರಾದ ಬೂಟಾ ಸಿಂಗ್ ಕಲೇರ್ ಅವರು ಸುಖಿ ಚಾಹಲ್ ಅವರಿಗೆ ಖಲಿಸ್ತಾನ ಬೆಂಬಲಿಗರಿಂದ ಬೆದರಿಕೆಗಳು ಬರುತ್ತಿದ್ದವು ಎಂದು ತಿಳಿಸಿದರು. ಆದರೂ ಚಾಹಲ್ ತಮ್ಮ ನಿಲುವುಗಳಿಗೆ ಬದ್ಧರಾಗಿದ್ದರು ಮತ್ತು ಭಯವಿಲ್ಲದೆ ಪ್ರಚಾರ ಕಾರ್ಯಗಳನ್ನು ಮುಂದುವರಿಸಿದ್ದರು. ಪೊಲೀಸರು ಅವರ ಮರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮರಣದ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸ್ಪಷ್ಟವಾಗಲಿದೆ.
ಕಾನೂನನ್ನು ಪಾಲಿಸುವ ಮತ್ತು ಜಾಗೃತ ಸಲಹೆಗಾರ
ಸುಖಿ ಚಾಹಲ್ ಭಾರತೀಯ ವಲಸೆ ಸಮುದಾಯಕ್ಕೆ ಅಮೆರಿಕಾದ ಕಾನೂನುಗಳನ್ನು ಪಾಲಿಸುವಂತೆ ಮತ್ತು ಅಪರಾಧಗಳಿಂದ ದೂರವಿರುವಂತೆ ಸಲಹೆ ನೀಡುತ್ತಿದ್ದರು. ಇತ್ತೀಚೆಗೆ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, “ಅಮೆರಿಕಾ ಕಾನೂನು ಮತ್ತು ಸುವ್ಯವಸ್ಥೆಯ ರಾಷ್ಟ್ರವಾಗಿದೆ. ವಿದೇಶಿ ಪ್ರವಾಸಿಗರ ಅಪರಾಧಗಳನ್ನು ಸಹಿಸುವುದಿಲ್ಲ. ನೀವು ಅಮೆರಿಕಾದಲ್ಲಿ ಕಾನೂನುಗಳನ್ನು ಉಲ್ಲಂಘಿಸಿದರೆ, ನಿಮ್ಮ ವೀಸಾ (ಒಂದು ದೇಶಕ್ಕೆ ಪ್ರವೇಶಿಸಲು, ದೇಶವನ್ನು ತೊರೆಯಲು ಅಥವಾ ಪ್ರಯಾಣಿಸಲು ಅನುಮತಿ ನೀಡುವ ಅಧಿಕೃತ ದಾಖಲೆ ಅಥವಾ ಮುದ್ರೆ) ರದ್ದುಗೊಳ್ಳಬಹುದು ಮತ್ತು ನೀವು ಅಮೆರಿಕಾದಲ್ಲಿ ಇರಲು ಅನರ್ಹರಾಗಬಹುದು” ಎಂದು ಹೇಳಿದ್ದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation