ಕಾಂಗ್ರೆಸ್ ಇಡೀ ದೇಶದ ಎದುರು ಕ್ಷಮೆಯಾಚಿಸಬೇಕು! – Yogi Adityanath Statement

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಗ್ರಹ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎಲ್ಲ ಆರೋಪಿಗಳು ನಿರಪರಾಧಿಗಳೆಂದು ಸಾಬೀತಾದ ಈ ತೀರ್ಪು ‘ಸತ್ಯಮೇವ ಜಯತೇ’ ಮೌಲ್ಯದ ಜೀವಂತ ಜಯಘೋಷವಾಗಿದೆ. ಈ ತೀರ್ಪು ಕಾಂಗ್ರೆಸ್‌ನ ಭಾರತ ವಿರೋಧಿ, ನ್ಯಾಯ ವಿರೋಧಿ ಮತ್ತು ಸನಾತನ ವಿರೋಧಿ ಪ್ರವೃತ್ತಿಯನ್ನು ಕಪಾಳಮೋಕ್ಷೆ ಮಾಡಿದಂತೆ ಇದೆ. ‘ಕೇಸರಿ ಭಯೋತ್ಪಾದನೆ’ ಎಂಬ ಸುಳ್ಳು ಪದವನ್ನು ಸೃಷ್ಟಿಸಿ ಕೋಟ್ಯಂತರ ಸನಾತನ ಶ್ರದ್ಧಾವಂತರು, ಸಾಧು-ಸಂತರು ಮತ್ತು ರಾಷ್ಟ್ರಸೇವಕರ ವರ್ಚಸ್ಸಿಗೆ ಹಾನಿ ಮಾಡಿದ ಗಂಭೀರ ಅಪರಾಧವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ತನ್ನ ಈ ಕ್ಷಮಿಸಲಾಗದ ಪಾಪವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡು ಇಡೀ ದೇಶದ ಮುಂದೆ ಕ್ಷಮೆಯಾಚಿಸಬೇಕು.