
ಮುಂಬೈ – 2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಕರ್ನಲ್ ಪ್ರಸಾದ್ ಪುರೋಹಿತ್, ಮೇಜರ್ ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ ಮತ್ತು ಇತರ ಎಲ್ಲಾ ಹಿಂದುತ್ವನಿಷ್ಠರನ್ನು ನಿರ್ದೋಷಿಗಳೆಂದು NIA ವಿಶೇಷ ನ್ಯಾಯಾಲಯ ತೀರ್ಪು ನೀಡುವ ಮೂಲಕ ಮತ್ತೊಮ್ಮೆ ನ್ಯಾಯದ ದೇವಾಲಯದಲ್ಲಿ ‘ಸತ್ಯ ಗೆಲ್ಲುತ್ತದೆ’ ಎಂದು ಸಾಬೀತಾಗಿದೆ. ಇದು ಸದಾಚಾರದ ವಿಜಯ ಮತ್ತು ಇಡೀ ಹಿಂದೂ ಸಮಾಜಕ್ಕೆ ಐತಿಹಾಸಿಕ ಕ್ಷಣವಾಗಿದೆ. ಸನಾತನ ಸಂಸ್ಥೆ ಈ ಎಲ್ಲಾ ಮುಗ್ಧ ದೇಶಭಕ್ತರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.
📍 Malegaon Bomb Blast: Timeline Recap
🗓️ 29 Sept 2008: Bike bomb blast kills 7, injures 92.
👮♂️ Case handed to ATS under Hemant Karkare.
🚓 Bike traced to Sadhvi Pragya; arrests followed across MP, MH.
📑 Jan 2009: Chargesheet against 14 under MCOCA.
🔄 2010: Case… pic.twitter.com/M2SJnwfJox
— Sanatan Prabhat (@SanatanPrabhat) July 31, 2025
ಈ ನಿರ್ಣಯವು ವರ್ಷಗಳಿಂದ ನಡೆಯುತ್ತಿರುವ ಅನ್ಯಾಯವನ್ನು ಕೊನೆಗೊಳಿಸಿದೆ ಮಾತ್ರವಲ್ಲದೆ, ‘ಹಿಂದೂ ಭಯೋತ್ಪಾದನೆ’ಯ ಸುಳ್ಳು ಪರಿಕಲ್ಪನೆಯನ್ನು ಸಹ ಸಂಪೂರ್ಣವಾಗಿ ಕೆಡವಲಾಗಿದೆ. ಹಿಂದುತ್ವ ಬೆಂಬಲಿಗರಿಗೆ ಇಂದು ನ್ಯಾಯ ಸಿಕ್ಕಿದ್ದರೂ, ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ, ದೇಶಭಕ್ತರ ಮೇಲೆ ಅಮಾನವೀಯ ದೌರ್ಜನ್ಯ ಎಸಗಿದ ಮತ್ತು ವಿಶೇಷವಾಗಿ ಸಾಧ್ವಿ ಪ್ರಜ್ಞಾ ಜಿ ಮತ್ತು ಇತರ ಅಮಾಯಕ ಜನರನ್ನು ವರ್ಷಗಳ ಕಾಲ ಜೈಲಿನಲ್ಲಿಟ್ಟ ಪಿತೂರಿ ಶಕ್ತಿಗಳಿಗೆ ಶಿಕ್ಷೆಯಾಗುವವರೆಗೆ ಈ ನ್ಯಾಯ ಅಪೂರ್ಣವಾಗಿರುತ್ತದೆ. ಈ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಅಭಯ್ ವರ್ತಕ್ ಅವರು ಆಗ್ರಹಿಸಿದ್ದಾರೆ.
ಈ ಅಮಾಯಕ ಹಿಂದೂಗಳು ‘ಕೇಸರಿ ಭಯೋತ್ಪಾದನೆ’ ಮತ್ತು ‘ಹಿಂದೂ ಭಯೋತ್ಪಾದನೆ’ಯಂತಹ ಸುಳ್ಳು ಆರೋಪಗಳ ಕಳಂಕದೊಂದಿಗೆ ಹಲವು ವರ್ಷಗಳ ಕಾಲ ಅನ್ಯಾಯದ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಯಿತು ಎಂದು ಶ್ರೀ. ವರ್ತಕ್ ಹೇಳಿದರು. ಆಗಿನ ತನಿಖಾ ಸಂಸ್ಥೆಗಳು ಪಕ್ಷಪಾತ, ಪೂರ್ವಾಗ್ರಹ ಮತ್ತು ರಾಜಕೀಯ ಒತ್ತಡದಲ್ಲಿ ಕೆಲಸ ಮಾಡಿದ್ದವು. ವಿಶೇಷವಾಗಿ ಅಂದಿನ ಹಿರಿಯ ಪೊಲೀಸ್ ಅಧಿಕಾರಿ ಪರಂಬೀರ್ ಸಿಂಗ್ ಅವರಂತಹ ಜನರು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ಅಮಾಯಕರನ್ನು ಅಪರಾಧಿಗಳೆಂದು ಬಲವಂತವಾಗಿ ಘೋಷಿಸಲು ಪ್ರಯತ್ನಿಸಿದರು. ಅಲ್ಲದೆ, ಅಂದಿನ ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್, ಪಿ. ಚಿದಂಬರಂ ಮತ್ತು ಸುಶೀಲ್ ಕುಮಾರ್ ಶಿಂಧೆ ‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಪ್ರಚಾರ ಮಾಡುವ ಮೂಲಕ ಇಡೀ ಹಿಂದೂ ಸಮಾಜವನ್ನು ದೂಷಿಸಲು ಪ್ರಯತ್ನ ಮಾಡಿದರು. 2009 ರಲ್ಲಿ, ಕಾಂಗ್ರೆಸ್ ಸರ್ಕಾರವು ಮಡಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಅನುಯಾಯಿಗಳನ್ನು ಸಿಲುಕಿಸಲು ಸಂಚು ರೂಪಿಸಿತು, ಆದರೆ 2013 ರಲ್ಲಿ ಅವರನ್ನು ಗೌರವಾನ್ವಿತ ನ್ಯಾಯಾಲಯವು ಸಂಪೂರ್ಣವಾಗಿ ನಿರ್ದೋಷಿಗಳೆಂದು ಘೋಷಿಸಿತು. ಅದೇ ರೀತಿ, 2008 ರ ಮಾಲೆಗಾಂವ್ ಪ್ರಕರಣದಲ್ಲಿ ಆರೋಪಿಸಲ್ಪಟ್ಟ ದೇಶಭಕ್ತರನ್ನು 17 ವರ್ಷಗಳ ನಂತರ ನ್ಯಾಯಾಲಯ ಬಿಡುಗಡೆ ಮಾಡಿದೆ. ಹಿಂದೂ ಸಮಾಜವನ್ನು ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟುವ ಪಾಪವನ್ನು ಕಾಂಗ್ರೆಸ್ ಮಾಡಿದೆ, ಆದರೆ ನ್ಯಾಯ ದೇವತೆ ಹಿಂದೂಗಳಿಗೆ ನ್ಯಾಯವನ್ನು ನೀಡಿದರು ಎಂದು ಶ್ರೀ. ವರ್ತಕ್ ಅವರು ಹೇಳಿದ್ದಾರೆ.
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!