
ಮುಂಬಯಿ, ಜುಲೈ 31 (ವಾರ್ತೆ.) – 2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಸಂಪೂರ್ಣ ತನಿಖೆಯು ‘ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ’ದ ಪಾಪವಾಗಿತ್ತು. ಇಡೀ ಪ್ರಕರಣವೇ ಸುಳ್ಳಾಗಿತ್ತು. ‘ನನ್ನ ನಾಸಿಕ್ ಮನೆಯಲ್ಲಿ ಬಾಂಬ್ ಇಡಲಾಗಿತ್ತು’ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. 17 ವರ್ಷಗಳ ನಂತರ ಬಂದ ಈ ತೀರ್ಪು ನ್ಯಾಯವಲ್ಲ. ನಮ್ಮನ್ನು ಸಿಲುಕಿಸಿದವರಿಗೆ ಶಿಕ್ಷೆಯಾಗುವವರೆಗೆ ಇದನ್ನು ನ್ಯಾಯ ಎಂದು ಹೇಳಲು ಸಾಧ್ಯವಿಲ್ಲ. ನಮಗೆ ತೊಂದರೆ ಕೊಟ್ಟವರನ್ನು ಹಿಡಿಯುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ನಿರಪರಾಧಿಗಳೆಂದು ಘೋಷಿಸಲ್ಪಟ್ಟ ಶಂಕರಾಚಾರ್ಯ ಅಮೃತಾನಂದ ದೇವತೀರ್ಥ ಅಲಿಯಾಸ್ ಸುಧಾಕರ್ ದ್ವಿವೇದಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಕೇಸರಿಯನ್ನು ಭಯೋತ್ಪಾದಕ ಎಂದು ಕರೆಯುವುದು ಕಾಂಗ್ರೆಸ್ನ ಷಡ್ಯಂತ್ರ!
ಅವರು ಮಾತು ಮುಂದುವರೆಸಿ, ಭಯೋತ್ಪಾದಕ ಎಂಬ ಪದದಿಂದ ನಮ್ಮನ್ನು ಕಳಂಕಗೊಳಿಸಲಾಯಿತು. ಹಿಂದೂ ಭಯೋತ್ಪಾದಕನಲ್ಲ, ಅವನು ಕ್ರಾಂತಿಕಾರಿಯಾಗಿರುತ್ತಾನೆ. ನಮ್ಮ 17 ವರ್ಷಗಳ ಸಮಯ ಕಳೆದುಹೋಯಿತು, ಅದನ್ನು ಯಾರು ನಮಗೆ ಹಿಂದಿರುಗಿಸುತ್ತಾರೆ? ಅದರ ನಷ್ಟವನ್ನು ಯಾರು ಭರಿಸುತ್ತಾರೆ? ನ್ಯಾಯಾಲಯದ ತೀರ್ಪಿನಿಂದ ಈಗ ಇದು ಸ್ಪಷ್ಟವಾಗಿದೆ: ‘ಹಿಂದೂ ಭಯೋತ್ಪಾದನೆ’ ಎಂಬ ಯಾವುದೇ ಪರಿಕಲ್ಪನೆ ಇಲ್ಲ. ಕೇಸರಿಯನ್ನು ಭಯೋತ್ಪಾದಕ ಎಂದು ಕರೆಯುವುದು ಕಾಂಗ್ರೆಸ್ನ ಷಡ್ಯಂತ್ರವಾಗಿತ್ತು. ಕೇಸರಿಗೆ ಜಯ ಸಿಕ್ಕಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!