ಸಂಸತ್ತಿನಲ್ಲಿ ಎರಡನೇ ದಿನವೂ ಗದ್ದಲ: ಕೆಲ ಗಂಟೆಗಳ ಕಾಲ ಮುಂದೂಡಿದ ಕಲಾಪ

ನವದೆಹಲಿ – ಸಂಸತ್ತಿನ ಮುಂಗಾರು (ಮಳೆಗಾಲದ) ಅಧಿವೇಶನದ ಎರಡನೇ ದಿನವೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಉಭಯ ಸದನಗಳ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ‘ಪಹಲ್ಗಾಮ್ ದಾಳಿ’, ‘ಆಪರೇಷನ್ ಸಿಂದೂರ’ ಮುಂತಾದ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಮತ್ತು ಪ್ರಧಾನ ಮಂತ್ರಿಗಳು ಇದಕ್ಕೆ ಉತ್ತರಿಸಬೇಕು’, ಎಂದು ವಿರೋಧ ಪಕ್ಷಗಳ ಸಂಸದರು ಆಗ್ರಹಿಸಿದರು. ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ಸಂಸದರು ಬಿಹಾರ ರಾಜ್ಯದ ಮತದಾರರ ಪಟ್ಟಿ ಪರಿಶೀಲನೆಯ ನಿರ್ಧಾರದ ವಿರುದ್ಧವೂ ಘೋಷಣೆಗಳನ್ನು ಕೂಗಿದರು.
ಈ ಗೊಂದಲದ ಪರಿಸ್ಥಿತಿಯಿಂದಾಗಿ ಉಭಯ ಸದನಗಳ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.

ಸಂಪಾದಕೀಯ ನಿಲುವು

ಸದನದ ಕಲಾಪಗಳನ್ನು ನಿಲ್ಲಿಸಿ ಜನರ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುವವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸುವ ಕಾನೂನು ಜಾರಿಗೆ ಬರುವುದು ಅವಶ್ಯಕವಾಗಿದೆ. ಆಗ ಮಾತ್ರ ಗದ್ದಲ ಮಾಡುವ ಎಲ್ಲಾ ಜನಪ್ರತಿನಿಧಿಗಳ ಮೇಲೆ ನಿಯಂತ್ರಣ ಸಾಧ್ಯ!