1 ಕೋಟಿ 67 ಲಕ್ಷ ಕುಟುಂಬಗಳಿಗೆ ಲಾಭವಾಗಲಿದೆ !

ಪಾಟಲೀಪುತ್ರ (ಬಿಹಾರ) – ರಾಜ್ಯದ ನಾಗರಿಕರಿಗೆ 125 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುವುದು. ಇದರೊಂದಿಗೆ, ಮುಂದಿನ 3 ವರ್ಷಗಳಲ್ಲಿ ಗೃಹಬಳಕೆಯ ಗ್ರಾಹಕರಿಗೆ ಸೌರಶಕ್ತಿಯ ಲಾಭವೂ ಸಿಗಲಿದೆ. ಮುಖ್ಯಮಂತ್ರಿ ನಿತೀಶ ಕುಮಾರರವರು ಸ್ವತಃ ಇದನ್ನು ಘೋಷಿಸಿದರು. ಇದರಿಂದ ರಾಜ್ಯದ 1 ಕೋಟಿ 67 ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದರು. ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ ನಿತೀಶ ಕುಮಾರರವರು, `ನಾವು ಆರಂಭದಿಂದಲೂ ಎಲ್ಲರಿಗೂ ಕಡಿಮೆ ದರದಲ್ಲಿ ವಿದ್ಯುತ್ತನ್ನು ಒದಗಿಸುತ್ತಿದ್ದೇವೆ. ಆಗಸ್ಟ್ 1 ರಿಂದ, ಅಂದರೆ ಜುಲೈ ತಿಂಗಳ ವಿದ್ಯುತ್ ಬಿಲ್ ನಿಂದ, ಎಲ್ಲಾ ಗೃಹಬಳಕೆಯ ಗ್ರಾಹಕರು 125 ಯೂನಿಟ್ ವರೆಗಿನ ವಿದ್ಯುತ್ ಗೆ ಹಣ ಪಾವತಿಸಬೇಕಾಗಿಲ್ಲ’ ಎಂದು ಹೇಳಿದರು.
“हमलोग शुरू से ही सस्ती दरों पर सभी को बिजली उपलब्ध करा रहे हैं। अब हमने तय कर दिया है कि 1 अगस्त, 2025 से यानी जुलाई माह के बिल से ही राज्य के सभी घरेलू उपभोक्ताओं को 125 यूनिट तक बिजली का कोई पैसा नहीं देना पड़ेगा। इससे राज्य के कुल 1 करोड़ 67 लाख परिवारों को लाभ होगा। pic.twitter.com/CbQDR0v3XA
— CMO Bihar (@officecmbihar) July 17, 2025
ಎಲ್ಲಾ ಮನೆಗಳ ಮೇಲ್ಛಾವಣಿ ಅಥವಾ ಹತ್ತಿರದ ಸಾರ್ವಜನಿಕ ಸ್ಥಳಗಳಲ್ಲಿ ಸೌರಶಕ್ತಿ ಯೋಜನೆಗಳನ್ನು ಅಳವಡಿಸಲಾಗುವುದು ಅತ್ಯಂತ ಬಡ ಕುಟುಂಬಗಳಿಗೆ ಇದನ್ನು ಅಳವಡಿಸುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ. ಇತರರಿಗೂ ಸಾಕಷ್ಟು ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
🚨 Free Power or Fiscal Trap? ⚡
CM Nitish Kumar to give 125 units/month free electricity to 1.67 Cr families from Aug 1
💡 Govt to fund solar setups for poorest over 3 yrs
But can Bharat afford such freebies under heavy debt?
🛑 Centre must curb freebie politics!#BiharNews… pic.twitter.com/rlYGcflPR9
— Sanatan Prabhat (@SanatanPrabhat) July 17, 2025
ಸಂಪಾದಕೀಯ ನಿಲುವುದೇಶದ ಮೇಲೆ ದೊಡ್ಡ ಸಾಲವಿರುವಾಗ, ಇಂತಹ ಯೋಜನೆಗಳು ಜನರಿಗೆ ತಾತ್ಕಾಲಿಕವಾಗಿ ಸಹಾಯ ಮಾಡುತ್ತವೆಯಾದರೂ, ಇದು ಒಟ್ಟಾರೆ ದೇಶಕ್ಕಾಗಿ ಸೂಕ್ತವೇ ? ಇಂತಹ ಉಚಿತ ಸೌಲಭ್ಯಗಳನ್ನು ನೀಡುವ ಪ್ರವೃತ್ತಿಯನ್ನು ನಿಲ್ಲಿಸಲು ಕೇಂದ್ರ ಸರಕಾರವು ಮಾರ್ಗಸೂಚಿಗಳನ್ನು ಹೊರಡಿಸಿ ರಾಜ್ಯ ಸರಕಾರಗಳು ಅವುಗಳನ್ನು ಅನುಸರಿಸುವಂತೆ ಪ್ರಯತ್ನಿಸಬೇಕು ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ