ನಾನು ದೇವಸ್ಥಾನಕ್ಕೆ ಹೋಗದಿದ್ದರೆ, ಜನರು ಮತ ನೀಡುವುದಿಲ್ಲ! – ಮುಖ್ಯಮಂತ್ರಿ ಸಿದ್ದರಾಮಯ್ಯ : CM Siddaramaiah Statement

ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಹೇಳಿಕೆ

ಬೆಂಗಳೂರು – ಜುಲೈ 6, 2025 ರಂದು ಈ ವಿಷಯದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ನಾನು ಹೆಚ್ಚಾಗಿ ದೇವಸ್ಥಾನಗಳಿಗೆ ಹೋಗುವುದಿಲ್ಲ. ಆದರೆ, ನಾನು ಹಳ್ಳಿಗಳಿಗೆ ಭೇಟಿ ನೀಡಿದಾಗ, ಅಲ್ಲಿನ ದೇವಸ್ಥಾನಕ್ಕೆ ಹೋಗದಿದ್ದರೆ, ಜನರು ನನಗೆ ಮತ ನೀಡುವುದಿಲ್ಲ. ‘ನಾನು ರಾಜಕಾರಣಿ ತಾನೇ? ನಾನು ಹೋಗಲೇಬೇಕು. ಹೋಗದಿದ್ದರೆ ಮತಗಳು ಸಿಗುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 6 ರಂದು ಹೇಳಿಕೆ ನೀಡಿದರು.

ಸಿದ್ದರಾಮಯ್ಯ ಅವರ ಪ್ರತಿಮೆ ‘ನಾಸ್ತಿಕವಾದಿ’ಯಾಗಿದ್ದರೂ, ಅವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ, ಹಾಗೆಯೇ ಅನೇಕ ಬಾರಿ ಹಣೆಗೆ ತಿಲಕವನ್ನೂ ಹಚ್ಚುತ್ತಾರೆ. ಈ ಬಗ್ಗೆ ವಿರೋಧ ಪಕ್ಷಗಳು ಅವರ ಮೇಲೆ ಮಾಡಿದ ಟೀಕೆಗೆ ಅವರು ಮೇಲಿನ ‘ಸ್ಪಷ್ಟೀಕರಣ’ ನೀಡಿದರು.

ಸಂಪಾದಕೀಯ ನಿಲುವು

‘ಹಿಂದೂಗಳ ಹಿತಾಸಕ್ತಿಗಾಗಿ ಕೆಲಸ ಮಾಡದಿದ್ದರೆ, ಹಿಂದೂಗಳು ಮತ ನೀಡುವುದಿಲ್ಲ’ ಎಂಬ ವರ್ಚಸ್ಸನ್ನು ಹಿಂದೂಗಳು ಈಗ ಸೃಷ್ಟಿಸಬೇಕು!