250 ಬಾಂಗ್ಲಾದೇಶಿಯರನ್ನು ಕೈ ಕಟ್ಟಿ ವಾಪಸ್ಸು ಕಳುಹಿಸಲಾಯಿತು: ಗುಜರಾತ್‌ನ ಕಠಿಣ ಸಂದೇಶ ! : Bangladesh Infiltrators Deported

ಕರ್ಣಾವತಿ (ಗುಜರಾತ) – ಗುಜರಾತನಲ್ಲಿ ವಾಸಿಸುತ್ತಿದ್ದ 250 ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಜುಲೈ 2 ರಂದು ಗಡೀಪಾರು ಮಾಡಲಾಯಿತು. ಈ ಅಕ್ರಮ ವಲಸಿಗರನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ವಡೋದರಾ ವಾಯುನೆಲೆಯಿಂದ ಢಾಕಾ (ಬಾಂಗ್ಲಾದೇಶ)ಗೆ ಕಳುಹಿಸಲಾಯಿತು. ಕಟ್ಟುನಿಟ್ಟಿನ ಭದ್ರತೆಯಲ್ಲಿ ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಈ ಕಾರ್ಯಾಚರಣೆಯನ್ನು ನಡೆಸಿದವು. ಯಾವುದೇ ಗೊಂದಲ ಉಂಟಾಗದಂತೆ, ಎಲ್ಲಾ ಅಕ್ರಮ ವಲಸಿಗರ ಕೈಗಳನ್ನು ಕಟ್ಟಲಾಗಿತ್ತು.

ಈ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಕರ್ಣಾವತಿ (ಅಹಮದಾಬಾದ), ಸೂರತ, ವಡೋದರಾ ಮತ್ತು ರಾಜಕೋಟನಂತಹ ವಿವಿಧ ನಗರಗಳಿಂದ ಪೊಲೀಸರ ಮೇಲ್ವಿಚಾರಣೆಯಲ್ಲಿ ಬಸ್ಸುಗಳ ಮೂಲಕ ಕರೆತರಲಾಯಿತು. ಕಳೆದ 2 ತಿಂಗಳಲ್ಲಿ 1 ಸಾವಿರದ 200 ಕ್ಕೂ ಹೆಚ್ಚು ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ವಾಪಸ್ಸು ಕಳುಹಿಸಲಾಗಿದೆ. ನಕಲಿ ಆಧಾರ ಕಾರ್ಡ್, ಪಾನ ಕಾರ್ಡ್‌ಗಳಂತಹ ದಾಖಲೆಗಳನ್ನು ಪರಿಶೀಲಿಸಿ ಪೊಲೀಸರು ಅವರ ಗುರುತನ್ನು ಪತ್ತೆ ಮಾಡುತ್ತಿದ್ದಾರೆ.

ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು !

ಅಧಿಕಾರಿಗಳ ಪ್ರಕಾರ, ಈ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ವಿಶೇಷವಾಗಿ ದೊಡ್ಡ ನಗರಗಳಲ್ಲಿ ಅಕ್ರಮ ವಲಸಿಗರ ಮೇಲೆ ನಿಗಾ ಇಡಲಾಗುತ್ತಿದೆ. ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ನಾಗರಿಕರಿಗೂ ಮನವಿ ಮಾಡಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಕ್ರಮಗಳು ದೇಶಾದ್ಯಂತ ಪ್ರತಿದಿನ ನಡೆಯಬೇಕು ಮತ್ತು ಅದೇ ಸಮಯದಲ್ಲಿ, ಈ ಅಕ್ರಮ ವಲಸಿಗರು ಮತ್ತೆ ಭಾರತಕ್ಕೆ ನುಸುಳದಂತೆ ಅಷ್ಟೇ ಜಾಗರೂಕತೆಯಿಂದ ಗಮನಹರಿಸಬೇಕು!