Bangladeshi Infiltrator : ಒಂದೂವರೆ ತಿಂಗಳ ಹಿಂದೆ ಬಾಂಗ್ಲಾದೇಶಕ್ಕೆ ಕರೆದೊಯ್ದು ಬಿಟ್ಟು ಬಂದಿದ್ದ ನುಸುಳುಕೋರ ಮತ್ತೆ ದೆಹಲಿಗೆ ವಾಪಸ್ಸು!

ನವದೆಹಲಿ – ದೆಹಲಿ ಪೊಲೀಸರು ಓರ್ವ ಬಾಂಗ್ಲಾದೇಶಿ ನಪುಂಸಕ ನುಸುಳುಕೋರನನ್ನು ಬಂಧಿಸಿ, ಬಾಂಗ್ಲಾದೇಶಕ್ಕೆ ಕಳುಹಿಸಿದ್ದರು. ಅವನು 45 ದಿನಗಳ ನಂತರ ಮತ್ತೆ ಭಾರತದಲ್ಲಿ ನುಸುಳಿ ದೆಹಲಿಗೆ ಮರಳಿ ತಲುಪಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಈ ಹಿಂದೆ ಅವನು ಹಲವು ವರ್ಷಗಳಿಂದ ದೆಹಲಿಯಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದನು. ಮರಳಿ ಬಂದ ನಂತರ ಅವನು ಮತ್ತೆ ತಾನು ಈ ಹಿಂದೆ ವಾಸಿಸುತ್ತಿದ್ದ ಶಾಲಿಮಾರ್ ಬಾಗ್ ನಲ್ಲಿಯೇ ವಾಸಿಸಲು ಪ್ರಾರಂಭಿಸಿದ್ದಾನೆ. ಅವನ ಹೆಸರು ಸುಹಾನ ಖಾನ್ (ವಯಸ್ಸು 30 ವರ್ಷ) ಎಂದು ತಿಳಿದುಬಂದಿದೆ.

ದೆಹಲಿ ಪೊಲೀಸರು ಮೇ ತಿಂಗಳಲ್ಲಿ ದೆಹಲಿಯಿಂದ 300ಕ್ಕೂ ಹೆಚ್ಚು ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದ್ದರು. ಅವರನ್ನು ಮೇ ಮತ್ತು ಜೂನ್ ತಿಂಗಳಲ್ಲಿ ತ್ರಿಪುರಾದ ಅಗರ್ತಲಾಕ್ಕೆ ವಿಮಾನದ ಮೂಲಕ ಕರೆದೊಯ್ದು ಬಾಂಗ್ಲಾದೇಶದ ಗಡಿಯಾಚೆಗೆ ಬಿಡಲಾಗಿತ್ತು.

ಸಂಪಾದಕೀಯ ನಿಲುವು

ಇದರಿಂದ ಬಾಂಗ್ಲಾದೇಶದ ಗಡಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅಥವಾ ಭದ್ರತಾ ವ್ಯವಸ್ಥೆಯಲ್ಲಿ ಲೋಪಗಳಿವೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಿದ್ದರೆ, ಬಾಂಗ್ಲಾದೇಶೀಯರನ್ನು ಭಾರತದಿಂದ ಎಂದಿಗೂ ಹೊರಹಾಕಲು ಸಾಧ್ಯವಿಲ್ಲ ಅಥವಾ ಹೊರಹಾಕಿದರೂ ಅವರು ಪದೇ ಪದೇ ಮರಳಿ ಬರುತ್ತಾರೆ. ಈ ಪರಿಸ್ಥಿತಿ ಪೊಲೀಸರು ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ!