From Gurukula To ISRO : ಗುರುಕುಲದಲ್ಲಿ ವೈದಿಕ ಶಿಕ್ಷಣ ಪಡೆದ ಕನ್ನೂರಿನ ಯುವಕ ‘ಇಸ್ರೋ’ ವಿಜ್ಞಾನಿ!

ಗೋವಿಂದ ಕೃಷ್ಣನ್ ಎಂ.

ಕನ್ನೂರು (ಕೇರಳ) – ಗುರುಕುಲದಲ್ಲಿ ವೈದಿಕ ಶಿಕ್ಷಣ ಪಡೆದ ಕನ್ನೂರು ನಿವಾಸಿ ಗೋವಿಂದ ಕೃಷ್ಣನ್ ಎಂ. ಶೀಘ್ರದಲ್ಲೇ ತಿರುವನಂತಪುರಂನ ಥುಂಬಾದಲ್ಲಿರುವ ‘ಇಸ್ರೋ’ದ ಪ್ರಮುಖ ಕೇಂದ್ರವಾದ ‘ವಿಕ್ರಮ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ’ದಲ್ಲಿ ವಿಜ್ಞಾನಿಯಾಗಿ ಸೇರಲಿದ್ದಾರೆ.

. ವೈದಿಕ ಅಧ್ಯಯನದಲ್ಲಿ ಪ್ರಾವೀಣ್ಯತೆ ಪಡೆದಿದ್ದ ಗೋವಿಂದ, ಅವರ ಗುರುಕುಲದ ಸಹಪಾಠಿಗಳು ಪುರೋಹಿತಶಾಹಿಯತ್ತ ಒಲವು ತೋರಿದಾಗಲೂ ವಿಜ್ಞಾನದ ಕಡೆಗೆ ಆಸಕ್ತಿ ಬೆಳೆಸಿಕೊಂಡರು. “ಆಧ್ಯಾತ್ಮ ಮತ್ತು ವಿಜ್ಞಾನ ಒಟ್ಟಾಗಿ ಇರಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ; ಆದರೆ ಇದು ಸಾಧ್ಯ ಎಂದು ನಾನು ಸಾಬೀತುಪಡಿಸಿದ್ದೇನೆ” ಎಂದು ಗೋವಿಂದ ಹೇಳುತ್ತಾರೆ.

. ಅವರು ಮಾತು ಮುಂದುವರೆಸಿ ,”ನನ್ನ ಜೀವನದ ಒಂದು ಹಂತದಲ್ಲಿ ನಾನು ವೈದಿಕ ಶಿಕ್ಷಣಕ್ಕೆ ನನ್ನ ಅತ್ಯುತ್ತಮ ಪ್ರಯತ್ನವನ್ನು ನೀಡಿದೆ ಮತ್ತು ಎರಡನೇ ಹಂತದಲ್ಲಿ ವಿಜ್ಞಾನಕ್ಕೆ ನನ್ನ ಎಲ್ಲವನ್ನೂ ನೀಡಿದೆ. ಆದರೆ ನಾನು ಎಂದಿಗೂ ಒಂದಕ್ಕಾಗಿ ಇನ್ನೊಂದನ್ನು ಸಂಪೂರ್ಣವಾಗಿ ತ್ಯಜಿಸಲಿಲ್ಲ” ಎಂದು ಹೇಳಿದರು.

. ೨೦೧೧ ರಲ್ಲಿ ಪಯ್ಯನ್ನೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ನಾಲ್ಕನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ಅವರು ನಿಯಮಿತ ಶಾಲಾ ಶಿಕ್ಷಣವನ್ನು ತೊರೆದು ತ್ರಿಶೂರ್‌ನ ಬ್ರಹ್ಮಸ್ವಂ ಮಠದಲ್ಲಿ ನಾಲ್ಕು ವರ್ಷಗಳ ಕಾಲ ಗುರುಕುಲದಲ್ಲಿ ಶಿಕ್ಷಣ ಪಡೆದರು.

. ಗೋವಿಂದ ನಾಲ್ಕನೇ ತರಗತಿಯಲ್ಲಿದ್ದಾಗ ಅವರ ಉಪನಯನ ವಿಧಿ ನಡೆಯಿತು ಮತ್ತು ಅದರ ನಂತರ ತಕ್ಷಣವೇ ಅವರು ಗುರುಕುಲದ ಪ್ರಯಾಣವನ್ನು ಪ್ರಾರಂಭಿಸಿದರು.

. ತದನಂತರ ಗೋವಿಂದ ಮತ್ತೆ ನಿಯಮಿತ ಶಾಲೆಗೆ ಹೋಗಲು ಪ್ರಾರಂಭಿಸಿದರು. ಗುರುಕುಲದಲ್ಲಿ ಉಳಿದುಕೊಂಡು ಹತ್ತನೇ ತರಗತಿಯವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಗುರುಕುಲದಿಂದ ಹೊರಬಂದು ಉನ್ನತ ಮಾಧ್ಯಮಿಕ ಶಿಕ್ಷಣಕ್ಕಾಗಿ ಮಂಗಳೂರಿನ ಮೂಡುಬಿದ್ರೆಯ ಆಳ್ವಾಸ್ ಕಾಲೇಜಿಗೆ ಸೇರಿದರು. ಆ ನಂತರ ತಿರುವನಂತಪುರಂನ ವಲಿಯಮಲದಲ್ಲಿರುವ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ’ಯಿಂದ ‘ಬಿ.ಟೆಕ್’ ಪದವಿ ಪಡೆದರು.

. ಗೋವಿಂದ ‘ಇಸ್ರೋ ಸೆಂಟ್ರಲ್ ರಿಕ್ರೂಟ್‌ಮೆಂಟ್ ಬೋರ್ಡ್’ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿದ್ದು, ಜುಲೈನಲ್ಲಿ ಅಧಿಕೃತವಾಗಿ ‘ಇಸ್ರೋ’ಗೆ ಸೇರಲಿದ್ದಾರೆ.

. ತಮ್ಮ ವೃತ್ತಿಜೀವನದಲ್ಲೂ ದೈನಂದಿನ ಧಾರ್ಮಿಕ ಕ್ರಿಯೆಗಳನ್ನು ಮುಂದುವರಿಸಲು ಅವರಿಗೆ ಇಚ್ಛೆಯಿದೆ. ವೈದಿಕ ಶಿಕ್ಷಣವು ಅವರಿಗೆ ಏಕಾಗ್ರತೆ, ಶಿಸ್ತು ಮತ್ತು ಶಕ್ತಿಯನ್ನು ನೀಡಿದೆ ಎಂದು ಅವರು ಹೇಳುತ್ತಾರೆ.

. ಗೋವಿಂದ ಅವರ ತಂದೆ ಹರೇಶ ಕುಮಾರ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯಾಗಿದ್ದಾರೆ.

ಸಂಪಾದಕೀಯ ನಿಲುವು

  • ಎಲ್ಲಿ ದೇಶಭಕ್ತ ವಿದ್ಯಾರ್ಥಿಗಳನ್ನು ರೂಪಿಸುವ ಗುರುಕುಲ, ಎಲ್ಲಿ ರಾಷ್ಟ್ರದ್ರೋಹಿ ವಿದ್ಯಾರ್ಥಿಗಳನ್ನು ರೂಪಿಸುವ ಮದರಸಾಗಳು!
  • ಗುರುಕುಲ ಶಿಕ್ಷಣ ಪದ್ಧತಿಯನ್ನು ನಿರಾಕರಿಸುವವರಿಗೆ ಇದೊಂದು ಕಪಾಳಮೋಕ್ಷ !