ಕಳೆದ ವರ್ಷವೂ ನೂಕುನುಗ್ಗಲು ಸಂಭವಿಸಿತ್ತು!

ಜಗನ್ನಾಥಪುರಿ (ಒಡಿಶಾ) – ಇಲ್ಲಿ ಜಗನ್ನಾಥ ರಥಯಾತ್ರೆಯ ಸಮಯದಲ್ಲಿ ನೂಕುನುಗ್ಗಲು ಸಂಭವಿಸಿ 600ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಈ ಘಟನೆ ನಗರದ ಶ್ರೀ ನಹರ (ರಾಜನ ಅರಮನೆ) ಬಳಿ ನಡೆದಿದೆ ಎಂದು ತಿಳಿದುಬಂದಿದೆ. ಗಾಯಗೊಂಡವರಲ್ಲಿ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರನ್ನು ಪುರಿಯಲ್ಲಿನ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ರಥಯಾತ್ರೆಯ ಮೊದಲ ದಿನ, ಅಂದರೆ ಜೂನ್ 27 ರಂದು, ‘ಪಹಾಡಿ’ ಸಮಾರಂಭದ ಸಮಯದಲ್ಲಿ ಗಜಪತಿ ದಿವ್ಯ ಸಂಘದೇವರ ಅರಮನೆಯ ಬಳಿ ಜನಸಂದಣಿ ಸೇರಿತ್ತು. ಅದನ್ನು ನಿಯಂತ್ರಿಸಲು ಆಡಳಿತಕ್ಕೆ ತೊಂದರೆಯಾಗುತ್ತಿತ್ತು. ಈ ಸಮಯದಲ್ಲಿ ಭಕ್ತರ ನಡುವೆ ಗೊಂದಲ ಉಂಟಾಗಿ ನೂಕುನುಗ್ಗಲು ಸಂಭವಿಸಿತು. ಕಳೆದ ವರ್ಷವೂ ರಥಯಾತ್ರೆಯ ಸಮಯದಲ್ಲಿ ನೂಕುನುಗ್ಗಲು ಉಂಟಾಗಿ ಒಬ್ಬ ಭಕ್ತನ ಸಾವಾಗಿತ್ತು.
ಸಂಪಾದಕೀಯ ನಿಲುವುಇದರರ್ಥ, ಹಿಂದಿನ ಘಟನೆಯಿಂದ ಆಡಳಿತವು ಯಾವುದೇ ಪಾಠ ಕಲಿತಿಲ್ಲ. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಆಡಳಿತಾಧಿಕಾರಿಗಳನ್ನು ಸರಕಾರವು ತಕ್ಷಣ ಜೈಲಿಗೆ ತಳ್ಳಬೇಕು! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !