
ಶೂನ್ಯದ ಹಿಂದೆ ಅಂಕಿ ಇಲ್ಲದಿದ್ದರೆ ಶೂನ್ಯಕ್ಕೆ ಬೆಲೆ ಇರುವುದಿಲ್ಲ. ಹಾಗೆಯೇ, ಶೂನ್ಯದಂತೆ ಇರುವ ಜಗತ್ತಿಗೆ ಅರ್ಥ ಬರುವುದು ಶ್ರೀ ಗುರು ಗಳಿಂದಲೇ ! ‘ಗುರು’ವಿನಲ್ಲಿನ ‘ಗು’ ಅಕ್ಷರವು ‘ಗುಣಾತೀತ’ವನ್ನು ಮತ್ತು ‘ರು’ ಅಕ್ಷರವು ‘ರೂಪಾತೀತ’ ಸ್ವರೂಪವನ್ನು ಸೂಚಿಸುತ್ತದೆ. ಗುಣರೂಪಕ್ಕೆ ಮೀರಿದ, ಅಂದರೆ ನಿರ್ಗುಣ ಮತ್ತು ನಿರಾಕಾರ ಸ್ವರೂಪವನ್ನು ಸಾಕ್ಷಾತ್ಕರಿಸುವಾತನೇ ಗುರು ! ಸಂಸ್ಕ್ರತಿಯ ಗೌರವ ಕಲಿಸುವವರೇ ಗುರು. ನಮ್ಮ ಕೈಗಳನ್ನು ಜೋಡಿಸಿ, ಅಂದರೆ ಎರಡು ಕೈಗಳ ದ್ವೈತದಿಂದ ನಮಸ್ಕಾರದ ಅದ್ವೈತವನ್ನು ಸಾಧಿಸಿ ಸಾಧಕನು ಶ್ರೀ ಗುರುಗಳಿಗೆ ಶರಣಾಗಬೇಕು. ಶ್ರೀಗುರುಗಳು ಸುಗಂಧಭರಿತ ಹೂವಿನಂತಿದ್ದಾರೆ. ಶಿμಯ್Àನು ದುಂಬಿಯಂತಿದ್ದಾನೆ. ಅವನ ಗುರುಭಕ್ತಿಯೇ ಗುಂಜಾರವವಾಗಿದೆ. ಅಗ್ನಿಯು ಒಣ ಮತ್ತು ಹಸಿ ಎಲ್ಲಾ ಕಟ್ಟಿಗೆಗಳನ್ನು ಸುಡುತ್ತದೆ. ಅದೇ ರೀತಿ, ಗುರುಚರಣಗಳಿಗೆ ಶರಣಾದಾಗ ಎಲ್ಲಾ ಸಂಚಿತ ಕರ್ಮಗಳು ಭಸ್ಮವಾಗುತ್ತವೆ; ಆದ್ದರಿಂದ ಶ್ರೀ ಗುರುಗಳ ಸ್ಮರಣಾರ್ಥವಾಗಿ ಹಣೆಗೆ ಭಸ್ಮ ಅಥವಾ ತಿಲಕವನ್ನು ಹಚ್ಚಬೇಕು. ಮಂಜು ಕರಗಿ ನೀರಿನೊಂದಿಗೆ ಒಂದಾಗುವಂತೆ, ‘ಅಹಂಭಾವ’ವನ್ನು ಬಿಟ್ಟು ಗುರುಭಾವದಲ್ಲಿ ಸಮರ್ಪಣೆ ಯಾಗುವುದೇ ಗುರುಸೇವೆ.
ಶ್ರೀ ಗುರುಗಳ ನಿರಂತರ ಚಿಂತನೆಯಿಂದ ಸಾಧಕನು ಗುರುತತ್ತ್ವವನ್ನು ಪಡೆಯಬಹುದು. ಉಸಿರಾಟವು ೨೪ ಗಂಟೆಗಳ ಕಾಲ ನಡೆಯುತ್ತಲೇ ಇರುತ್ತದೆ. ಅದರಲ್ಲಿ ‘ಗುರುಸ್ಮರಣೆ’ಯನ್ನು ಸೇರಿಸಲು ಸಾಧ್ಯವಾದರೆ, ಅಂದರೆ ಅಜಪಾ-ಜಪವನ್ನು ಮಾಡಲು ಸಾಧ್ಯವಾದರೆ, ನಿದ್ರೆಯಲ್ಲೂ ಗುರುಭಕ್ತಿ ಆಗುತ್ತದೆ. ಜೇನುನೊಣ ಜೇನುತುಪ್ಪವಲ್ಲದೆ ಬೇರೆಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಹಾಗೆಯೇ ಗುರುಭಕ್ತನು ಗುರುಭಕ್ತಿಯಲ್ಲದೆ ಬೇರೆ ಏನನ್ನೂ ಮಾಡುವುದೇ ಇಲ್ಲ.
– ಶ್ರೀ. ದಾಮೋದರ ದತ್ತಾತ್ರೇಯ ಕುಲಕರ್ಣಿ
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !