
೧. ಗುರು ಮತ್ತು ಸೇವೆ ಇಲ್ಲದೆ ಆತ್ಮಜ್ಞಾನ ಸಿಗದ ಕಾರಣ ಶಿಷ್ಯನು ಗುರುಸೇವೆಯನ್ನು ಮಾಡಬೇಕು !
‘ಗುರುಗಳಿಲ್ಲದೆ ಮತ್ತು ಸೇವೆ ಇಲ್ಲದೆ ಆತ್ಮಜ್ಞಾನ ಅಥವಾ ಇತರ ಯಾವುದೇ ಜ್ಞಾನ ಸಿಗುವುದಿಲ್ಲ. ಯಾವುದೇ ರಹಸ್ಯ ತಿಳಿಯುವುದಿಲ್ಲ. ಇದಕ್ಕಾಗಿ ಗುರುಗಳ ಸೇವೆಯನ್ನು ಮಾಡಬೇಕು. ಸೇವೆಯಿಂದ ಅಹಂಕಾರವನ್ನು ಅಳಿಸಿ ಹಾಕಬೇಕು. ಶಿಷ್ಯನು ಗುರುಗಳನ್ನು ಅನುಸರಿಸಬೇಕು. ಧ್ಯಾನ ಮತ್ತು ಚಿಂತನೆ ಮಾಡಬೇಕು. ನಂತರ ಅವನಿಗೆ ಗುರುಗಳಿಲ್ಲದೆಯೂ ಇರಲು ಸಾಧ್ಯವಾಗಬೇಕು. ಅವನಿಗೆ ಗುರುಗಳ ಅವಶ್ಯಕತೆಯೂ ಇರಬಾರದು. ಕೊನೆಯಲ್ಲಿ ಶಿಷ್ಯನೇ ಗುರುವಾಗಬೇಕು.
೨. ಅನಂತ ಸ್ವರೂಪದಲ್ಲಿರುವ ಭಗವಂತನನ್ನು ತಿಳಿಯಲು ಶಿಷ್ಯನು ನಿರಂತರ ಮುನ್ನಡೆಯುವುದು ಆವಶ್ಯಕ !
ಭಗವಂತನ ರಸವು ನಾನಾರೂಪಗಳಲ್ಲಿ ಹರಿಯಲಿ. ಮನಸ್ಸು ಸ್ವಲ್ಪ ಶಾಂತವಾದಾಗ ಸುಖವೆನಿಸುತ್ತದೆ, ವಿಶ್ರಾಂತಿ ಸಿಗುತ್ತದೆ ಮತ್ತು ಆನಂದವಾಗುತ್ತದೆ; ಆದರೆ ಅದು ಕೇವಲ ಒಂದು ಮಿನುಗು ನೋಟ. ಅದು ಒಂದು ಮಾದರಿಯಾಗಿದೆ. ಅಲ್ಲಿ ನಿಲ್ಲಬೇಡಿರಿ. ಎಷ್ಟು ಸಿಕ್ಕರೂ, ಮುನ್ನಡೆಯುತ್ತಲೇ ಇರಿ. ಇನ್ನೂ ಅನಂತವನ್ನು ಪಡೆಯಬೇಕಿದೆ. ಭಗವಂತನು ಅನಂತನಾಗಿದ್ದಾನೆ. ಪರಮೇಶ್ವರನ ರಹಸ್ಯ ಅನಂತವಾಗಿದೆ. ಇನ್ನಷ್ಟು ನೋಡಿರಿ ಆದರೂ ಗುರುತು ಸಿಗುವುದೇ ಇಲ್ಲ. ನೋಡುತ್ತಾ ನೋಡುತ್ತಾ ನೋಡುವವನೇ ಮುಗಿಯಬೇಕು. ‘ನಾನು’ ಎಂಬುದು ಸಂಪೂರ್ಣವಾಗಿ ನಾಶ ವಾಗದೆ ‘ವಿರಾಟ’ದೊಂದಿಗೆ ಒಂದಾಗಲು ಸಾಧ್ಯವಿಲ್ಲ.
– ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ (ಆಧಾರ : ಮಾಸಿಕ ‘ಘನಗರ್ಜಿತ’, ೧ ಡಿಸೆಂಬರ್ ೨೦೨೧)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !