
೧. ಗುರು ಮತ್ತು ಸೇವೆ ಇಲ್ಲದೆ ಆತ್ಮಜ್ಞಾನ ಸಿಗದ ಕಾರಣ ಶಿಷ್ಯನು ಗುರುಸೇವೆಯನ್ನು ಮಾಡಬೇಕು !
‘ಗುರುಗಳಿಲ್ಲದೆ ಮತ್ತು ಸೇವೆ ಇಲ್ಲದೆ ಆತ್ಮಜ್ಞಾನ ಅಥವಾ ಇತರ ಯಾವುದೇ ಜ್ಞಾನ ಸಿಗುವುದಿಲ್ಲ. ಯಾವುದೇ ರಹಸ್ಯ ತಿಳಿಯುವುದಿಲ್ಲ. ಇದಕ್ಕಾಗಿ ಗುರುಗಳ ಸೇವೆಯನ್ನು ಮಾಡಬೇಕು. ಸೇವೆಯಿಂದ ಅಹಂಕಾರವನ್ನು ಅಳಿಸಿ ಹಾಕಬೇಕು. ಶಿಷ್ಯನು ಗುರುಗಳನ್ನು ಅನುಸರಿಸಬೇಕು. ಧ್ಯಾನ ಮತ್ತು ಚಿಂತನೆ ಮಾಡಬೇಕು. ನಂತರ ಅವನಿಗೆ ಗುರುಗಳಿಲ್ಲದೆಯೂ ಇರಲು ಸಾಧ್ಯವಾಗಬೇಕು. ಅವನಿಗೆ ಗುರುಗಳ ಅವಶ್ಯಕತೆಯೂ ಇರಬಾರದು. ಕೊನೆಯಲ್ಲಿ ಶಿಷ್ಯನೇ ಗುರುವಾಗಬೇಕು.
೨. ಅನಂತ ಸ್ವರೂಪದಲ್ಲಿರುವ ಭಗವಂತನನ್ನು ತಿಳಿಯಲು ಶಿಷ್ಯನು ನಿರಂತರ ಮುನ್ನಡೆಯುವುದು ಆವಶ್ಯಕ !
ಭಗವಂತನ ರಸವು ನಾನಾರೂಪಗಳಲ್ಲಿ ಹರಿಯಲಿ. ಮನಸ್ಸು ಸ್ವಲ್ಪ ಶಾಂತವಾದಾಗ ಸುಖವೆನಿಸುತ್ತದೆ, ವಿಶ್ರಾಂತಿ ಸಿಗುತ್ತದೆ ಮತ್ತು ಆನಂದವಾಗುತ್ತದೆ; ಆದರೆ ಅದು ಕೇವಲ ಒಂದು ಮಿನುಗು ನೋಟ. ಅದು ಒಂದು ಮಾದರಿಯಾಗಿದೆ. ಅಲ್ಲಿ ನಿಲ್ಲಬೇಡಿರಿ. ಎಷ್ಟು ಸಿಕ್ಕರೂ, ಮುನ್ನಡೆಯುತ್ತಲೇ ಇರಿ. ಇನ್ನೂ ಅನಂತವನ್ನು ಪಡೆಯಬೇಕಿದೆ. ಭಗವಂತನು ಅನಂತನಾಗಿದ್ದಾನೆ. ಪರಮೇಶ್ವರನ ರಹಸ್ಯ ಅನಂತವಾಗಿದೆ. ಇನ್ನಷ್ಟು ನೋಡಿರಿ ಆದರೂ ಗುರುತು ಸಿಗುವುದೇ ಇಲ್ಲ. ನೋಡುತ್ತಾ ನೋಡುತ್ತಾ ನೋಡುವವನೇ ಮುಗಿಯಬೇಕು. ‘ನಾನು’ ಎಂಬುದು ಸಂಪೂರ್ಣವಾಗಿ ನಾಶ ವಾಗದೆ ‘ವಿರಾಟ’ದೊಂದಿಗೆ ಒಂದಾಗಲು ಸಾಧ್ಯವಿಲ್ಲ.
– ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ (ಆಧಾರ : ಮಾಸಿಕ ‘ಘನಗರ್ಜಿತ’, ೧ ಡಿಸೆಂಬರ್ ೨೦೨೧)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !