Slaughterhouse Near Alandi : ಆಳಂದಿ ತೀರ್ಥಕ್ಷೇತ್ರದ ಬಳಿ ಕಸಾಯಿಖಾನೆ ನಿರ್ಮಿಸಲು ಆಡಳಿತದ ಷಡ್ಯಂತ್ರ!

ಪುಣೆ, ಜೂನ್ 2 (ಸುದ್ದಿ) – ‘ಜ್ಞಾನಿಗಳ ರಾಜ ಗುರು ಮಹಾರಾವ’ ಎಂದು ಸಂತ ತುಕಾರಾಮ ಮಹಾರಾಜರು ಕೊಂಡಾಡಿರುವ ಸಂತಶ್ರೇಷ್ಠ ಜ್ಞಾನೇಶ್ವರ ಮಹಾರಾಜರು ಸಂಜೀವನಿ ಸಮಾಧಿ ತೆಗೆದುಕೊಂಡಿದ್ದ ತೀರ್ಥಕ್ಷೇತ್ರವು ವಾರಕರಿಗಳಿಗೆ ಮಾತ್ರವಲ್ಲದೆ, ಭಾರತ ಭೂಮಿಗೂ ಪವಿತ್ರವಾಗಿದೆ. ಸಂತಶ್ರೇಷ್ಠ ಜ್ಞಾನೇಶ್ವರ ಮಾವುಲಿಯ ಸಮಾಧಿ ದರ್ಶನಕ್ಕಾಗಿ ಭಾರತದ ಮೂಲೆಮೂಲೆಯಿಂದ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಭಕ್ತರು ಆಳಂದಿಗೆ ಬರುತ್ತಾರೆ. ಇಂತಹ ಪವಿತ್ರ ಕ್ಷೇತ್ರದ ಬಳಿ ಕಸಾಯಿಖಾನೆ ನಿರ್ಮಿಸುವ ದುರ್ಬುದ್ಧಿ ಆಡಳಿತಕ್ಕೆ ಬಂದಿದೆ. ಇಲ್ಲಿನ ಮೋಶಿ-ಡುಡುಳಗಾಂವ ಗಡಿಯಲ್ಲಿ 3.78 ಎಕರೆ ಜಾಗವನ್ನು ಪಿಂಪರಿ-ಚಿಂಚವಡ ಮಹಾನಗರ ಪಾಲಿಕೆ ಆಡಳಿತವು ಕಸಾಯಿಖಾನೆಗಾಗಿ ಮೀಸಲಿಡುವ ದುಷ್ಕೃತ್ಯವನ್ನು ಮಾಡಿದೆ. ಈ ಕುರಿತ ಸುಧಾರಿತ ಅಭಿವೃದ್ಧಿ ಯೋಜನೆಯ ಕರಡನ್ನು ಪಿಂಪರಿ-ಚಿಂಚವಡ ಮಹಾನಗರ ಪಾಲಿಕೆ ಆಡಳಿತವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇತ್ತೀಚೆಗೆ ಪ್ರಸಾರ ಮಾಡಿದೆ.

ಸಂಪಾದಕೀಯ ನಿಲುವು

  • ಪ್ರಸಿದ್ಧ ಆಳಂದಿ ತೀರ್ಥಕ್ಷೇತ್ರದ ಬಳಿ ದೊಡ್ಡ ಕಸಾಯಿಖಾನೆ ನಿರ್ಮಿಸಲು ಪ್ರಯತ್ನಿಸುತ್ತಿರುವ ಪಿಂಪರಿ-ಚಿಂಚವಡ ಮಹಾನಗರ ಪಾಲಿಕೆ ಆಡಳಿತಕ್ಕೆ ತಲೆ ಇದೆಯೇ?
  • ತೀರ್ಥಕ್ಷೇತ್ರಗಳಲ್ಲಿ ಮದ್ಯ-ಮಾಂಸ ನಿಷೇಧ ಕೇವಲ ಕಾಗದದ ಮೇಲೆಯೇ ಉಳಿಯಲಿದೆಯೇ? ಹಿಂದೂಗಳ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತಿರುವ ಮಹಾನಗರ ಪಾಲಿಕೆಗೆ ಹಿಂದೂಗಳು ಸಂಘಟಿತರಾಗಿ ಪ್ರಶ್ನಿಸುವುದು ಆವಶ್ಯಕವಾಗಿದೆ!