‘ಆಪರೇಷನ್ ಸಿಂದೂರ್’ ದಿಂದ ಭಾರತದ ಬಗ್ಗೆ ಟೀಕಿಸುವ ಪಾಕಿಸ್ತಾನಿ ಮಹಿಳೆಗೆ ಪ್ರತ್ಯುತ್ತರ ನೀಡುವಾಗ ಮುಸಲ್ಮಾನರ ಬಗ್ಗೆ ಕಥಿತ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣ

ಕೋಲಕಾತಾ (ಬಂಗಾಲ) – ‘ಆಪರೇಷನ್ ಸಿಂದೂರ್’ ಮೇಲಿನ ಪೋಸ್ಟ್ ಗೆ ಉತ್ತರ ನೀಡುವಾಗ ಮುಸಲ್ಮಾನರ ವಿರೋಧದಲ್ಲಿ ಕಥಿತ ಆಕ್ಷೇಪಾರ್ಹ ಟಿಪ್ಪಣಿ ಮಾಡಿರುವ ಆರೋಪ ದಡಿಯಲ್ಲಿ ಕೊಲಕಾತಾ ಪೊಲೀಸರು ಶರ್ಮಿಷ್ಟ ಪನೊಲಿ ಈ ವಿದ್ಯಾರ್ಥಿನಿಯನ್ನು ಹರಿಯಾಣದ ಗುರುಗ್ರಾಮದಿಂದ ಬಂಧಿಸಿದ್ದಾರೆ. ಆಕೆಯನ್ನು ಕೋಲಕಾತಾದ ಅಲಿಪುರ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಆಕೆಗೆ ಈಗ ೧೪ ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶರ್ಮಿಷ್ಟ ಪುಣೆಯಲ್ಲಿ ಕಾನೂನ ಶಿಕ್ಷಣ ಪಡೆಯುತ್ತಿದ್ದಾರೆ.
ನಾವು ಈಗ ಮಹಾತ್ಮ ಗಾಂಧಿಯವರ ಭಕ್ತರಲ್ಲ!
ಶರ್ಮಿಷ್ಟ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿ ಅದರಲ್ಲಿ ಅವರು ಓರ್ವ ಪಾಕಿಸ್ತಾನಿ ಮಹಿಳೆಗೆ ಉತ್ತರ ನೀಡುವಾಗ ಮಹಮ್ಮದ್ ಪೈಗಂಬರ್ ಇವರ ಕುರಿತು ಕಥಿತ ಟೀಕೆ ಮಾಡಿದ್ದಾರೆ. ಪಾಕಿಸ್ತಾನಿ ಮಹಿಳೆಗೆ ಉದ್ದೇಶಿಸಿ ಆಕೆ, ಪಹಲ್ಗಾವ್ ಇಲ್ಲಿಯ ದಾಳಿ ಮತ್ತು ನಿಮ್ಮ ದೇಶ ಯಾವ ಇತರ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದಾರೆ, ಅವರ ಬಗ್ಗೆ ನೀವು ಕೇಳಿದ್ದೀರಾ? ಅದಕ್ಕೆ ನಾವು ಪ್ರತ್ಯುತ್ತರ ನೀಡಬಾರದೆ? ಈಗ ನಾವು ಮಹಾತ್ಮ ಗಾಂಧಿಯವರ ಭಕ್ತರಾಗಿಲ್ಲ! ಈ ವಿಡಿಯೋದಿಂದ ಶರ್ಮಿಷ್ಟ ಇವರ ವಿರೋಧದಲ್ಲಿ ದೂರು ದಾಖಲಿಸಲಾಗಿತ್ತು. ಅದರ ನಂತರ ಅವರ ಖಾತೆಯಿಂದ ಈ ವಿಡಿಯೋ ತೆಗೆದ ಹಾಕಲಾಯಿತು ಹಾಗೂ ಕ್ಷಮೆ ಕೂಡ ಯಾಚಿಸಲಾಗಿತ್ತು. ಇನ್ನೊಂದು ವಿಡಿಯೋದಲ್ಲಿ ಹಿಂದಿ ಚಲನಚಿತ್ರದಲ್ಲಿನ ಕಲಾವಿದರು ಮತ್ತು ಯುಟ್ಯೂಬ್ ನಡೆಸುವ ರಣವೀರ ಅಲಹಾಬಾದಿಯ ಇವರ ಬಗ್ಗೆ ಕೂಡ ತೀವ್ರವಾಗ್ದಾಳಿ ನಡೆಸಲಾಗಿತ್ತು. ಇಬ್ಬರೂ ಪಹಲ್ಗಾವ ಇಲ್ಲಿಯ ದಾಳಿಯ ನಂತರ ಪಾಕಿಸ್ತಾನದ ವಿರೋಧದಲ್ಲಿ ಸೌಮ್ಯ ನಿಲುವು ತಾಳಿದ್ದರು. ಇದನ್ನು ಆಕೆ ಡೋಂಗಿತನ ಎಂದು ಹೇಳಿದ್ದರು.
ಪಾಕಿಸ್ತಾನದಿಂದ ಜೀವ ಬೆದರಿಕೆ ನೀಡಲಾಗಿತ್ತು
ಶರ್ಮಿಷ್ಟ ಇವರ ವಿಡಿಯೋ ಪೋಸ್ಟ್ ಮಾಡಿದ ನಂತರ ಪಾಕಿಸ್ತಾನದಿಂದ ‘ಸರ್ ತನ ಸೇ ಜುದಾ’ (ತಲೆ ಕಡಿಯುವ) ಈ ರೀತಿಯ ಬೆದರಿಕೆ ನೀಡಲಾಗಿತ್ತು. ಹಾಗೆಯೇ ಆಕೆಯ ಕುರಿತು ದೂರು ದಾಖಲಿಸಲು ಆಗ್ರಹಿಸಲಾಗುತ್ತಿತ್ತು.
ಸಂಪಾದಕೀಯ ನಿಲುವುಪಾಕಿಸ್ತಾನಿ ಮಹಿಳೆಗೆ ಪ್ರತ್ಯುತ್ತರ ನೀಡಿರುವ ಕುರಿತು ಓರ್ವ ವಿದ್ಯಾರ್ಥಿನಿಯನ್ನು ಬಂಧಿಸಿರುವ ಕೋಲಕಾತಾ ಪೋಲಿಸರು ಭಾರತದವರೇ ಅಥವಾ ಪಾಕಿಸ್ತಾನದವರೆ ? ಮಮತಾ ಬ್ಯಾನರ್ಜಿ ಇವರ ಸರಕಾರ ಪಾಕಿಸ್ತಾನ ಪ್ರೇಮಿ ಅಷ್ಟೇ ಅಲ್ಲದೆ, ಅದು ಪಾಕಿಸ್ತಾನಿಯೇ ಆಗಿದೆ ಎಂದು ಕಾಣುತ್ತಿದೆ. ಈಗಲಾದರೂ ಕೇಂದ್ರ ಸರಕಾರ ಮಮತಾ ಬ್ಯಾನರ್ಜಿ ಇವರ ಸರಕಾರ ವಜಾ ಮಾಡಬಹುದೇ ? |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !