‘ಆಪರೇಷನ್ ಸಿಂದೂರ್’ ಇನ್ನೂ ಮುಗಿದಿಲ್ಲ, ಇದು ಕೇವಲ ಒಂದು ವಿರಾಮವಷ್ಟೇ! – ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಎಚ್ಚರಿಕೆ

ಪಾಕಿಸ್ತಾನವು ಹಾಫಿಜ್ ಸಯೀದ್ ಮತ್ತು ಮಸೂದ್ ಅಜರ್ ರನ್ನು ಭಾರತಕ್ಕೆ ಹಸ್ತಾಂತರಿಸಬೇಕು

ಪಣಜಿ, ಮೇ 30 (ವಾರ್ತಾ ಇಲಾಖೆ) – ‘ಆಪರೇಷನ್ ಸಿಂದೂರ್’ ಕೇವಲ ಸೇನಾ ಕಾರ್ಯಾಚರಣೆಯಲ್ಲ, ಇದು ಭಯೋತ್ಪಾದನೆಯ ವಿರುದ್ಧ ಭಾರತದ ನೇರ ಪ್ರಹಾರವಾಗಿದೆ. ಪಾಕಿಸ್ತಾನವು ಯಾವುದೇ ದುಸ್ಸಾಹಸಕ್ಕೆ ಮುಂದಾದರೆ, ಭಾರತೀಯ ನೌಕಾಪಡೆಯ ಮಾರಕ ಸಾಮರ್ಥ್ಯ ಮತ್ತು ಆಕ್ರಮಣಶೀಲತೆಯನ್ನು ಎದುರಿಸಬೇಕಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೇ 30 ರಂದು ಗೋವಾದ ಕರಾವಳಿಯಲ್ಲಿ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ಯುದ್ಧನೌಕೆ ‘ಐ.ಎನ್.ಎಸ್. ವಿಕ್ರಾಂತ್’ ನಲ್ಲಿ ಅಧಿಕಾರಿಗಳು ಮತ್ತು ನೌಕಾಪಡೆಯ ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಎಚ್ಚರಿಕೆ ನೀಡಿದರು.

ಸಮಗ್ರ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯ ಪಾತ್ರ ಪ್ರಶಂಸನೀಯವಾಗಿದೆಯೆಂದು ರಾಜನಾಥ್ ಸಿಂಗ್ ಶ್ಲಾಘಿಸಿದರು. ಭಾರತೀಯ ನೌಕಾಪಡೆಯ ಅಗಾಧ ಶಕ್ತಿ, ಅದರ ಮಿಲಿಟರಿ ಕೌಶಲ್ಯ ಮತ್ತು ವಿನಾಶಕಾರಿ ಸಾಮರ್ಥ್ಯವು ಶತ್ರುಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದೆ ಎಂದವರು ಉಲ್ಲೇಖಿಸಿದರು. ‘ಆಪರೇಷನ್ ಸಿಂದೂರ್’ ಇನ್ನೂ ಮುಗಿದಿಲ್ಲ. ಇದು ಕೇವಲ ಒಂದು ವಿರಾಮವಾಗಿದೆ ಎಂದು ಅವರು ಎಚ್ಚರಿಸಿದರು.

ರಾಜನಾಥ್ ಅವರು ಮುಂದೆ ಮಾತನಾಡಿ,

1. ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತೀಯ ನೌಕಾಪಡೆಯು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ನೀಡಿತು, ಒಂದು ವೇಳೆ ಅದು ಕೆಟ್ಟ ದೃಷ್ಟಿಯಿಂದ ನೋಡಲು ಪ್ರಯತ್ನಿಸಿದರೆ, ಭಾರತದಿಂದ ಪ್ರತೀಕಾರದ ಕ್ರಮವು ನೌಕಾಪಡೆಯ ಕೈಯಲ್ಲಿರುತ್ತದೆ. ಪಾಕಿಸ್ತಾನವು ಸ್ವಾತಂತ್ರ್ಯ ಸಮಯದಿಂದ ಆಡುತ್ತಿರುವ ಭಯೋತ್ಪಾದನೆಯ ಅಪಾಯಕಾರಿ ಆಟದ ಸಮಯ ಈಗ ಮುಗಿದಿದೆ.

2. ಪಾಕಿಸ್ತಾನಿ ನೆಲದಿಂದ ಬಹಿರಂಗವಾಗಿ ಭಾರತ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಮತ್ತು ಭಾರತವು ಗಡಿ ಮತ್ತು ಸಮುದ್ರ ಎರಡೂ ಕಡೆಗಳಿಂದ ಭಯೋತ್ಪಾದಕರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಂಪೂರ್ಣವಾಗಿ ಸ್ವತಂತ್ರವಾಗಿದೆ.

3. ಪಾಕಿಸ್ತಾನವು ತನ್ನ ನೆಲದಲ್ಲಿ ಬೆಳೆಯುತ್ತಿರುವ ಭಯೋತ್ಪಾದನೆಯ ಬೇರುಗಳನ್ನು ತನ್ನ ಕೈಯಾರೆ ಕಿತ್ತುಹಾಕಬೇಕು. ಹಾಫಿಜ್ ಸಯೀದ್ ಮತ್ತು ಮಸೂದ್ ಅಜರ್ ನಂತಹ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು. ಭಾರತದ ಪಟ್ಟಿಯಲ್ಲಿ ಮಾತ್ರವಲ್ಲದೆ, ವಿಶ್ವಸಂಸ್ಥೆಯು ಸೂಚಿಸಿದ ಭಯೋತ್ಪಾದಕರ ಪಟ್ಟಿಯಲ್ಲಿಯೂ ಸಹ ಈ ಇಬ್ಬರು ಉಗ್ರರ ಹೆಸರುಗಳಿವೆ.

4. ಇಂದು ನಾವು ಕೇವಲ ಗುಂಡು ಮತ್ತು ಬಾಂಬ್ ಗಳಿಂದ ಮಾತ್ರ ಹೋರಾಡುವುದಿಲ್ಲ, ಬದಲಿಗೆ ಸೈಬರ್ ಸ್ಪೇಸ್, ಡೇಟಾ ಪ್ರಾಬಲ್ಯ ಮತ್ತು ಕಾರ್ಯತಂತ್ರದ ನಿಗ್ರಹದ ಮೂಲಕವೂ ಹೋರಾಡುವ ಯುಗದಲ್ಲಿದ್ದೇವೆ. ಈ ಕ್ಷೇತ್ರಗಳಲ್ಲಿ ನೌಕಾಪಡೆಯು ಪ್ರಗತಿ ಸಾಧಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

5. ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರದ ರಕ್ಷಕ ಮಾತ್ರವಲ್ಲದೆ, ಈ ಪ್ರದೇಶದಲ್ಲಿ ಭಾರತದ ಅಸ್ತಿತ್ವವನ್ನು ಬಲಪಡಿಸುವ ಕಾರ್ಯತಂತ್ರದ ದೃಷ್ಟಿಯಿಂದಲೂ ಒಂದು ಶಕ್ತಿಯಾಗಿದೆ.