ಜೋಧ್‌ಪುರ (ರಾಜಸ್ಥಾನ) ಮದರಸಾ ಮಂಡಳಿ ಪಠ್ಯಕ್ರಮದಲ್ಲಿ ‘ಆಪರೇಷನ್ ಸಿಂದೂರ್’ ಮಾಹಿತಿ ಸೇರ್ಪಡೆ!

ಜೋಧ್‌ಪುರ (ರಾಜಸ್ಥಾನ) – ಉತ್ತರಾಖಂಡ ಮದರಸಾ ಮಂಡಳಿಯ ನಂತರ, ಈಗ ರಾಜಸ್ಥಾನದ ಜೋಧ್‌ಪುರ ಮದರಸಾ ಮಂಡಳಿಯು ತಮ್ಮ ಪಠ್ಯಕ್ರಮದಲ್ಲಿ ‘ಆಪರೇಷನ್ ಸಿಂದೂರ್’ ಮಾಹಿತಿಯನ್ನು ಸೇರಿಸಲು ನಿರ್ಧರಿಸಿದೆ.

ಮಂಡಳಿಯ ಅಧ್ಯಕ್ಷ ಎಂ.ಡಿ. ಚೋಪ್ದಾರ್ ಮಾತನಾಡಿ, ‘ಆಪರೇಷನ್ ಸಿಂದೂರ್’ನಿಂದ ಮುಸ್ಲಿಂ ಹೆಣ್ಣುಮಕ್ಕಳು ಪ್ರೇರಣೆ ಪಡೆಯಬೇಕು, ಹಾಗೆಯೇ ಅವರಿಗೆ ಕರ್ನಲ್ ಸೋಫಿಯಾ ಖುರೇಷಿ ಅವರ ಕಾರ್ಯಗಳ ಬಗ್ಗೆ ಮಾಹಿತಿ ದೊರೆಯಬೇಕು ಎಂಬ ಉದ್ದೇಶದಿಂದ ಮದರಸಾ ಪಠ್ಯಕ್ರಮದಲ್ಲಿ ‘ಆಪರೇಷನ್ ಸಿಂದೂರ್’ ಮಾಹಿತಿಯನ್ನು ಸೇರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ನಿರ್ಧಾರದಿಂದ ದೇಶಭಕ್ತಿ ಹೆಚ್ಚುವುದಲ್ಲದೆ, ಮದರಸಾದಲ್ಲಿ ಕಲಿಯುವ ಹೆಣ್ಣುಮಕ್ಕಳಿಗೆ ಪ್ರೇರಣೆಯೂ ಸಿಗಲಿದೆ ಎಂದವರು ಹೇಳಿದರು.

ಸಂಪಾದಕೀಯ ನಿಲುವು

ಮದರಸಾಗಳಲ್ಲಿ ದೇಶಭಕ್ತಿ, ದೇಶಕ್ಕಾಗಿ ಪ್ರಾಣ ನೀಡಲು ಸಿದ್ಧತೆ, ಸರ್ವಧರ್ಮ ಸಮಭಾವ ಮತ್ತು ಜಾತ್ಯತೀತತೆಯನ್ನು ಮೊದಲು ಕಲಿಸುವುದು ಅವಶ್ಯಕ!