(ಟಿಪ್ಪಣಿ: ‘ಆಪರೇಶನ್ ಸಿಂಧೂರ್’ ಎಂದರೆ ಪಹಲ್ಗಾಮ್ನಲ್ಲಿನ ಭಯೋತ್ಪಾದಕರ ಆಕ್ರಮಣಕ್ಕೆ ಪ್ರತೀಕಾರವಾಗಿ ಭಾರತೀಯ ಸೈನ್ಯವು ನಡೆಸಿದ ಕಾರ್ಯಾಚರಣೆ!)
೭ ಮೇ ೨೦೨೫ ರಂದು ಬೆಳಿಗ್ಗೆಯಿಂದ ಕೆಲವು ಅರೆಬರೆ ಬುದ್ಧಿಯ ಪ್ರಗತಿಪರರು ಬುದ್ಧಿಯ ದಿವಾಳಿತನವನ್ನು ನೋಡಿ ಬಹಳಷ್ಟು ಮನರಂಜನೆ ಆಯಿತು. ನಿನ್ನೆಯವರೆಗೆ ‘ಮಾಕ್ ಡ್ರಿಲ್’ (ತುರ್ತು ಪರಿಸ್ಥಿತಿ ನಿರ್ವಹಣಾ ತಾಲೀಮು) ಅನ್ನು ಗೇಲಿ ಮಾಡುವುದರಲ್ಲಿ ಮಗ್ನರಾಗಿದ್ದ ಈ ಅರ್ಧಂಬರ್ಧ ಜನರ ಸ್ಥಿತಿಯು ‘ಆಪರೇಶನ್ ಸಿಂಧೂರ್’ನಿಂದ ಸಹಿಸಲೂ ಆಗುತ್ತಿಲ್ಲ ಮತ್ತು ಹೇಳಲೂ ಆಗುತ್ತಿಲ್ಲ ಎನ್ನುವಂತಾಗಿದೆ. ‘ಆಪರೇಶನ್ ಸಿಂಧೂರ್’ ಅನ್ನು ಬಹಿರಂಗವಾಗಿ ವಿರೋಧಿಸಲು ಸಾಧ್ಯವಿಲ್ಲ; ಏಕೆಂದರೆ ‘ಹಾಗೆ ಮಾಡಿದರೆ ಜನರು ಬಾಯಿಗೆ ಸಗಣಿ ತುಂಬಿಸುತ್ತಾರೆ; ಆದರೆ ಮೋದಿ ಸರಕಾರಕ್ಕೆ ಶ್ರೇಯಸ್ಸನ್ನು ತಪ್ಪಿಯೂ ನೀಡಬಾರದು’, ಎಂಬ ಇಕ್ಕಟ್ಟಿನಲ್ಲಿ ಸಿಲುಕಿದ್ದರಿಂದ ಈ ‘ಜಮಾತ್-ಎ-ಪುರೋಗಾಮಿ’ಗಳು ಎಲ್ಲಾ ಶ್ರೇಯಸ್ಸನ್ನು ಸೈನ್ಯಕ್ಕೆ ನೀಡುವ ‘ಪೋಸ್ಟ್’ಗಳ (ಬರಹಗಳ) ಮಳೆಯನ್ನು ಸುರಿಸಿದ್ದಾರೆ, ಸ್ವತಃ ಸೈನ್ಯವೇ ನಿಯಂತ್ರಣ ರೇಖೆಯನ್ನು ದಾಟಲು, ‘ಏರ್ ಸ್ಟ್ರೈಕ್’ ಮಾಡಲು ನಿರ್ಧರಿಸುತ್ತದೆ ಮತ್ತು ಪತ್ರಿಕಾಗೋಷ್ಠಿಯನ್ನು ನಡೆಸಲು ನಿರ್ಧರಿಸುತ್ತದೆ ಎನ್ನುವಂತೆ ಅವರಿಗೆ ಅನಿಸುತ್ತದೆ.
೧. ಈ ಹಿಂದೆ ಇದ್ದ ರಾಜಕೀಯ ಇಚ್ಛಾಶಕ್ತಿಯ ಕೊರತೆ
ಹಾಗೆನಾದರೂ ಇದ್ದಿದ್ದರೆ ೨೬ ನವೆಂಬರ್ ೨೦೦೮ ರಂದು ಮುಂಬೈಯಲ್ಲಿ ನಡೆದ ಪಾಕಿಸ್ತಾನ ಪ್ರಚೋದಿತ ಭೀಕರ ಭಯೋತ್ಪಾದಕ ದಾಳಿಗಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೈನ್ಯವು ‘ಏರ್ ಸ್ಟ್ರೈಕ್’ಗಳನ್ನು ಮಾಡುತ್ತಿರಲಿಲ್ಲವೇ? ಭಾರತೀಯ ಸೈನಿಕರು, ಸೈನ್ಯ ಮತ್ತು ಸೈನ್ಯಶಕ್ತಿಯು ಆಗಲೂ ಅಷ್ಟೇ ಸಮರ್ಥವಾಗಿತ್ತಲ್ಲ! ೨೬ ನವೆಂಬರ್ ೨೦೦೮ ರ ಮುಂಬೈಯ ಭಯೋತ್ಪಾದಕ ಆಕ್ರಮಣ ಮತ್ತು ಪಹಲ್ಗಾಮ್ನ ಭಯೋತ್ಪಾದಕ ಆಕ್ರಮಣ, ಅಂದಿನ ಭೀಕರ ರಾಜಕೀಯ ಮೌನ ಮತ್ತು ಹೇಡಿತನದ ವಿರುದ್ಧ ಈಗ ೨ ವಾರಗಳ ಒಳಗೆ ನೀಡಲಾದ ‘ಆಪರೇಶನ್ ಸಿಂಧೂರ್’ನ ದಿಟ್ಟ ಪ್ರತ್ಯುತ್ತರದಲ್ಲಿ ವ್ಯತ್ಯಾಸವೇನು? ವ್ಯತ್ಯಾಸವಿರುವುದು ರಾಜಕೀಯ ಇಚ್ಛಾಶಕ್ತಿಯಲ್ಲಿ, ಸೈನ್ಯದ ಹಿಂದೆ ತನ್ನೆಲ್ಲ ಶಕ್ತಿಯಿಂದ ದೃಢವಾಗಿ ನಿಲ್ಲುವ ಸಬಲ ನಾಯಕತ್ವದಲ್ಲಿ! ‘ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ’ ಎಂದು ಹೇಳುವ ವಿಜಯಶಾಲೀ ಮನೋಭಾವದಲ್ಲಿ!
೨. ಮಾಜಿ ವಾಯುಸೇನಾ ಮುಖ್ಯಸ್ಥರು ವಿವರಿಸಿದ ವರ್ಷ ೨೦೦೮ ರ ಪರಿಸ್ಥಿತಿ
ಭಾರತದ ವಾಯುಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಫಲಿ ಮೇಜರ್ರವರು ಇದನ್ನು ಹೇಳುತ್ತಿದ್ದಾರೆಂದು ನಾನು ಹೇಳುತ್ತಿಲ್ಲ. ೨೬ ನವೆಂಬರ್ ೨೦೦೮ ರಂದು ಭಾರತದ ವಾಯುಸೇನಾ ಮುಖ್ಯಸ್ಥರಾಗಿದ್ದ ಏರ್ ಚೀಫ್ ಮಾರ್ಷಲ್ ಫಲಿ ಮೇಜರ್ರವರು ಶಿವ ಅರೂರ್ರವರಿಗೆ ಬಾಲಾಕೋಟ್ ‘ಏರ್ ಸ್ಟ್ರೈಕ್’ ನಂತರ ನೀಡಿದ ಸಂದರ್ಶನದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ, ‘ಭಾರತದ ರಾಜಕೀಯ ಇಚ್ಛಾಶಕ್ತಿಯು ಬದಲಾಗಿದೆ.’ ಅವರ ನಂತರದ ವಾಯುಸೇನಾ ಮುಖ್ಯಸ್ಥ ಬಿ.ಎಸ್. ಧನೋಆರವರು ‘ವಿಜೆಟೈ’ನ ನೂರಾರು ವಿದ್ಯಾರ್ಥಿಗಳ ಮುಂದೆ ಸ್ಪಷ್ಟವಾಗಿ ಹೇಳಿದ್ದರು, ‘೨೬ ನವೆಂಬರ್ ೨೦೦೮ ರ ನಂತರ ವಾಯುಸೇನೆಯು ಪಾಕಿಸ್ತಾನದೊಳಗೆ ನುಗ್ಗಿ ಅಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸುವ ಸಂಪೂರ್ಣ ಯೋಜನೆಯನ್ನು ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ಸರಕಾರಕ್ಕೆ ನೀಡಿತ್ತು; ಆದರೆ ತಮ್ಮ ಅಂತರರಾಷ್ಟ್ರೀಯ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಅವರು ಈ ಯೋಜನೆಯನ್ನು ತಿರಸ್ಕರಿಸಿದರು.’
ಸ್ವತಃ ಅತ್ಯಂತ ದುರ್ಬಲ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರಾಗಿದ್ದ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ತಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವ ಹಪಹಪಿಯಲ್ಲಿ ಕಳೆದುಹೋಗಿದ್ದ ಸೋನಿಯಾ ಗಾಂಧಿಯವರು ಸೈನ್ಯಕ್ಕೆ ಮುಕ್ತಾವಕಾಶ ನೀಡದೆ ರಾಷ್ಟ್ರೀಯ ಭದ್ರತೆಯ ರಾಜಕೀಯ ಮಾಡಿದರು. ಪರಿಣಾಮವಾಗಿ ೨೬ ನವೆಂಬರ್ ೨೦೦೮ ರ ನಂತರದ ಭಯೋತ್ಪಾದಕ ಆಕ್ರಮಣಕ್ಕೆ ಕಾರಣರಾದ ಪಾಕಿಸ್ತಾನದ ಜನರಿಗೆ ಶಿಕ್ಷೆ ನೀಡಲು ನಮಗೆ ಸಾಧ್ಯವಾಗಲಿಲ್ಲ. ವರ್ಷ ೨೦೦೮ ರಲ್ಲಿ ಭಾರತದ ಪರಿಸ್ಥಿತಿ ಮತ್ತು ಪ್ರತಿಷ್ಠೆಯು ಅಂತರರಾಷ್ಟ್ರೀಯ ರಾಜಕಾರಣದಲ್ಲಿ ‘ಯಾರು ಬೇಕಾದರೂ ಬರಬಹುದು ಮತ್ತು ಕೆನ್ನೆಗೆ ಹೊಡೆದು ಹೋಗಬಹುದು’ ಎಂಬಂತಿತ್ತು.
೩. ಭಾರತದ ವಿದೇಶಾಂಗ ನೀತಿ ಸಬಲವಾಗಿದ್ದರ ಪರಿಣಾಮ
ಇಂದು ಪರಿಸ್ಥಿತಿ ಏನಿದೆ? ಭಾರತವು ಪಾಕಿಸ್ತಾನದೊಳಗೆ ನೇರವಾಗಿ ೧೦೦ ಕಿಮೀ ನುಗ್ಗಿ ದಾಳಿ ಮಾಡಿತು, ಅಮೆರಿಕವು ಒಂದು ಚಕಾರ ಶಬ್ದವನ್ನೂ ಉಚ್ಚರಿಸಲಿಲ್ಲ, ಇಸ್ಲಾಮಿಕ್ ದೇಶಗಳೂ ಇಲ್ಲ! ಬ್ರಿಟನ್ನೊಂದಿಗೆ ನಾವು ಇತ್ತೀಚೆಗೆ ದೊಡ್ಡ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಇರಾನ್ನಿಂದ ಅಫ್ಘಾನಿಸ್ತಾನದಂತಹ ಇಸ್ಲಾಮಿಕ್ ಮೂಲಭೂತವಾದಿ ದೇಶಗಳು ಸಹ ಪಾಕಿಸ್ತಾನದ ವಿರೋಧದಲ್ಲಿವೆ. ಪ್ರಧಾನಮಂತ್ರಿ ಮೋದಿಯವರ ವಿದೇಶಾಂಗ ನೀತಿಯು ಇಷ್ಟು ಸಬಲವಾಗಿರದಿದ್ದರೆ ಇದು ಸಾಧ್ಯವೇ ಇರಲಿಲ್ಲ; ಆದರೆ ಕಡಿಮೆ ಬುದ್ಧಿಯ ಬಾಲಿಶ ಚಿಂತಕರಿಗೆ ಇದನ್ನು ಯಾರು ಹೇಳುವರು ?
೪. ಮೋದಿದ್ವೇಷಿಗಳು ಸ್ವತಂತ್ರ ವಿಚಾರ ಮಾಡುವ ಆವಶ್ಯಕತೆ!
ಪಹಲ್ಗಾಮ್ನ ಪಾಕ್ ಪ್ರಚೋದಿತ ಭಯೋತ್ಪಾದಕ ದಾಳಿಯ ನಂತರ ಕೇವಲ ೧೫ ದಿನದಲ್ಲಿ ಭಾರತೀಯ ಸೈನ್ಯವು ಪಾಕಿಸ್ತಾನದ ೯ ಬೇರೆ ಬೇರೆ ಸ್ಥಳಗಳಲ್ಲಿ ನುಗ್ಗಿ ನಿಖರ ಮತ್ತು ದಿಟ್ಟ ಕಾರ್ಯಾಚರಣೆ ನಡೆಸಿತು, ಅದು ಕೇವಲ ನಿಯಂತ್ರಣ ರೇಖೆಯಾಚೆಗಷ್ಟೇ ಅಲ್ಲ, ಪಾಕಿಸ್ತಾನಿ ಪಂಜಾಬ್ನಲ್ಲಿ ೧೦೦ ಕಿಲೋಮೀಟರ್ ಒಳಗೆ ಇರುವ ಬಹಾವಲ್ಪುರದವರೆಗೆ. ಈ ‘ಸ್ಟ್ರೈಕ್’ಗಳು ‘ಪ್ರಿಸಿಶನ್ ಸ್ಟ್ರೈಕ್’ಗಳಾಗಿದ್ದವು, ಅಂದರೆ ಭಯೋತ್ಪಾದಕ ತರಬೇತಿ ನೆಲೆಗಳು ನಿಖರವಾಗಿ ಎಲ್ಲೆಲ್ಲಿವೆ? ಎಂಬ ಮಾಹಿತಿಯನ್ನು ಪಡೆದು ಈ ‘ಸ್ಟ್ರೈಕ್’ಗಳನ್ನು ಯೋಜನಾಬದ್ಧವಾಗಿ ಮಾಡಲಾಗಿತ್ತು. ಇದು ಒಂದು ದಿನದಲ್ಲಿ ನಡೆಯುವುದಿಲ್ಲ ಅಥವಾ ಕೇವಲ ಸೈನ್ಯವು ಈ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ತೆಗೆದುಕೊಳ್ಳಲು ಸಾಧ್ಯವಿಲ್ಲ.
ಈ ‘ಏರ್ ಸ್ಟ್ರೈಕ್’ಗಳು ಭಾರತೀಯ ಸೈನ್ಯ ಅಥವಾ ವಾಯುಸೇನೆಯು ಇದ್ದಕ್ಕಿದ್ದಂತೆ ಹೆಚ್ಚು ಸಮರ್ಥವಾಗಿದ್ದರಿಂದ ನಡೆದಿಲ್ಲ. ಭಾರತೀಯ ಸೈನಿಕರು ಯಾವಾಗಲೂ ಸಮರ್ಥರಾಗಿದ್ದರು. ವ್ಯತ್ಯಾಸವಿರುವುದು ಇಷ್ಟೇ, ಈಗ ಅವರ ಬೆಂಬಲಕ್ಕೆ ಬಲಿಷ್ಠ ರಾಜಕೀಯ ನಾಯಕತ್ವ ನಿಂತಿದೆ. ‘ಆಪರೇಶನ್ ಸಿಂಧೂರ್’ನ ಶ್ರೇಯಸ್ಸು ಕೇವಲ ಸೈನಿಕರಿಗೆ ಸೇರಿದ್ದು, ಮೋದಿಯವರಿಗೆ ಅಲ್ಲ’ ಎಂದು ಹೇಳುವ ತಲೆ ಇಲ್ಲದ ಮೋದಿದ್ವೇಷಿಗಳು ಸ್ವಲ್ಪ ಸ್ವತಂತ್ರವಾಗಿ ವಿಚಾರ ಮಾಡುವ ಸಾಮರ್ಥ್ಯವನ್ನು ಖರೀದಿಸಬೇಕು.
೫. ಸೈನ್ಯವು ನಡೆಸಿದ ಕಾರ್ಯಾಚರಣೆಯು ನಿರ್ಣಾಯಕ ಕೃತಿ ಮಾಡುವ ನಾಯಕತ್ವದ ಸಂಕೇತ!
ಸೌ. ಶೆಫಾಲಿ ವೈದ್ಯ ಇವರು ಮಾತನಾಡುತ್ತಾ, ಕೇವಲ ಹಿಂದೂ ಪುರುಷರನ್ನು ‘ಟಾರ್ಗೆಟ್’ (ಗುರಿ) ಮಾಡಿ ೨೬ ಹಿಂದೂ ಸ್ತ್ರೀಯರನ್ನು ವಿಧವೆಯರನ್ನಾಗಿಸಿದ ಪಹಲ್ಗಾಮ್ ಭಯೋತ್ಪಾದಕ ಆಕ್ರಮಣದ ನಂತರ ನಡೆಸಿದ ಸೈನ್ಯ ಕಾರ್ಯಾಚರಣೆಗೆ ಉದ್ದೇಶಪೂರ್ವಕವಾಗಿ ‘ಆಪರೇಶನ್ ಸಿಂಧೂರ್’ ಎಂದು ಹೆಸರಿಸುವುದು, ಕಾರ್ಯಾಚರಣೆಯ ನಿಖರ ಸಮಯ, ೨ ಮಹಿಳಾ ಅಧಿಕಾರಿಗಳು ಅದರಲ್ಲಿ ಒಬ್ಬರು ಹಿಂದೂ ಮತ್ತು ಒಬ್ಬರು ಮುಸ್ಲಿಂ ಅವರನ್ನು ಪತ್ರಿಕಾಗೋಷ್ಠಿಗಾಗಿ ಆಯ್ಕೆ ಮಾಡುವುದು, ಅದರಲ್ಲಿಯೂ ‘ನಾನ್-ಕಾಂಬ್ಯಾಟ್ ಸಿಗ್ನಲ್ ಕೋರ್’ ವಿಭಾಗದ ಕರ್ನಲ್ ಸೋಫಿಯಾ ಖುರೇಶಿಯವರನ್ನು ಪತ್ರಿಕಾಗೋಷ್ಠಿಗಾಗಿ ಆಯ್ಕೆ ಮಾಡುವುದು, ಇದೆಲ್ಲವೂ ಕಾಕತಾಳೀಯವಾಗಿ ನಡೆದಿದೆ ಎಂದು ಅನಿಸುತ್ತದೆಯೇ? ಅದೇ ಸಮಯದಲ್ಲಿ ಪ್ರಧಾನಮಂತ್ರಿಯವರು ಸ್ವತಃ ಮಹಿಳಾ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮುರವರಿಗೆ ‘ಬ್ರೀಫ್’ (ಸಂಕ್ಷಿಪ್ತ ಮಾಹಿತಿ) ನೀಡಲು ಹೋಗುವುದು, ಇದು ತಾನಾಗಿಯೇ ನಡೆದ ಘಟನೆಯೇ?
‘ಇದೆಲ್ಲವೂ ಉನ್ನತ ಮಟ್ಟದಲ್ಲಿ ರೂಪಿಸಿದ ತಂತ್ರಗಾರಿಕೆ, ಸಂಕೇತ, ‘ಟೈಮಿಂಗ್’ (ನಿಖರ ಸಮಯ), ದೃಶ್ಯ ಪರಿಣಾಮ ಇವೆಲ್ಲವುಗಳ ಬಗ್ಗೆ ಅಪಾರ ತಿಳುವಳಿಕೆ ಇರುವ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ನಾಯಕತ್ವವು ‘ನಿರ್ಣಾಯಕ ಕೃತಿ ಮಾಡುವ’ ನಾಯಕತ್ವವಾಗಿದೆ. ಕೇವಲ ‘ನಾವು ನೋಡುತ್ತೇವೆ, ನಾವು ಮಾಡುತ್ತೇವೆ’ ಎಂದು ಹೇಳುವ ದುರ್ಬಲ ಮನಮೋಹನ್ ಸಿಂಗ್ ಅವರ ನಾಯಕತ್ವವಲ್ಲ. ಮೋದಿ ಸರಕಾರವು ಸೈನ್ಯಕ್ಕೆ ಕೇವಲ ಮುಕ್ತಾವಕಾಶವನ್ನಷ್ಟೇ ನೀಡಲಿಲ್ಲ, ರಾಜಕೀಯ, ರಾಜತಾಂತ್ರಿಕ ಮತ್ತು ನೈತಿಕ ಬೆಂಬಲವನ್ನು ನೀಡಿತು. ಯಾವಾಗ ಒಬ್ಬ ಭಾರತೀಯ ಸೈನಿಕನಿಗೆ ತನ್ನ ನಾಯಕತ್ವವು ತನ್ನ ಬೆಂಬಲಕ್ಕೆ ದೃಢವಾಗಿ ನಿಂತಿದೆ ಎಂಬ ವಿಶ್ವಾಸವಿರುತ್ತದೆಯೋ, ಆಗ ಅವನು ಪರಾಕ್ರಮದ ಪರಾಕಾಷ್ಠೆಯನ್ನು ಮೆರೆಯುತ್ತಾನೆ. ವರ್ಷ ೨೦೦೮ ರಲ್ಲಿ ಭಾರತದಲ್ಲಿ ಶೂರ ಸೈನಿಕರು ಮತ್ತು ಸೈನ್ಯಾಧಿಕಾರಿಗಳ ಕೊರತೆಯಿರಲಿಲ್ಲ, ಆದರೆ ದೆಹಲಿಯಲ್ಲಿ ಸಬಲ ಮತ್ತು ದೃಢ ನಾಯಕತ್ವದ ಕೊರತೆಯಿತ್ತು.
೬. ತಥಾಕಥಿತ ಚಿಂತಕರ ಅಸಂಬದ್ಧ ವರ್ತನೆ
ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಬಲಿಷ್ಠರಾಗಿದ್ದಾರೆ, ದುರ್ಬಲ ಮನಮೋಹನ್ ಸಿಂಗ್ ಅಲ್ಲ ಮತ್ತು ವ್ಯತ್ಯಾಸವಿರುವುದು ಇಲ್ಲೇ, ಅದನ್ನು ಏರ್ ಚೀಫ್ ಮಾರ್ಷಲ್ ಫಲಿ ಮೇಜರ್ ಮತ್ತು ಧನೋಆರವರು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ. ಅಂದರೆ, ಮೋದಿದ್ವೇಷದಿಂದ ಕುರುಡರಾದ ಸ್ವಯಂಘೋಷಿತ ಚಿಂತಕರಿಗೆ ಅದು ಅರ್ಥವಾಗುವುದಿಲ್ಲ ಅಥವಾ ಅವರು ಅರ್ಥ ಮಾಡಿಕೊಳ್ಳಲು ಬಯಸುವುದಿಲ್ಲ. ದೇಶದ ಸಾಮಾನ್ಯ ನಾಗರಿಕನಿಗೆ ಮಾತ್ರ ಅದು ಸ್ಪಷ್ಟವಾಗಿ ಕಾಣಿಸುತ್ತದೆ, ಅರ್ಥವಾಗುತ್ತದೆ, ಅನುಭವವಾಗುತ್ತದೆ ಮತ್ತು ಅದಕ್ಕಾಗಿಯೇ ೧೦ ವರ್ಷಗಳಾದರೂ ಮೋದಿಯವರ ವೈಯಕ್ತಿಕ ಜನಪ್ರಿಯತೆ ಕಡಿಮೆಯಾಗುತ್ತಿಲ್ಲ ಮತ್ತು ಈ ತಥಾಕಥಿತ ಚಿಂತಕರು ಮಾತ್ರ ಹೆಚ್ಚೆಚ್ಚು ‘ಇರ್ರೆಲೆವೆಂಟ್’ (ಅಸಂಬದ್ಧ) ಆಗುತ್ತಿದ್ದಾರೆ!
– ಸೌ. ಶೆಫಾಲಿ ವೈದ್ಯ, ಪುಣೆ. (೭.೫.೨೦೨೫)