ಭಾರತದ ವಿಜಯಕ್ಕಾಗಿ ಗೋವಾದಲ್ಲಿ ಶತಚಂಡಿ ಯಾಗದ ಆಯೋಜನೆ! – ಸನಾತನ ಸಂಸ್ಥೆ

  • ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಮರುದಿನವೇ ಯಾಗ

  • ಯಾಗವು ಎಲ್ಲಾ ನಾಗರಿಕರಿಗೆ ಮುಕ್ತವಾಗಿದ್ದು; ದೇಶ-ವಿದೇಶಗಳ ನಾಗರಿಕರು ಭಾಗವಹಿಸಲಿದ್ದಾರೆ

ಫೊಂಡಾ (ಗೋವಾ) – ಪ್ರಸ್ತುತ ನಡೆಯುತ್ತಿರುವ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತವು ವಿಜಯಶಾಲಿಯಾಗಲಿ ಎಂದು ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಮರುದಿನವೇ, ಅಂದರೆ ಮೇ 20 ರಿಂದ 22, 2025 ರವರೆಗೆ ಮೂರು ದಿನಗಳ ಕಾಲ 25 ಪುರೋಹಿತರಿಂದ ಶತಚಂಡಿ ಯಾಗವನ್ನು ನಡೆಸಲಾಗುವುದು. ಈ ಯಾಗವು ಎಲ್ಲಾ ನಾಗರಿಕರಿಗೆ ಮುಕ್ತವಾಗಿದ್ದು, ಇದರಲ್ಲಿ ದೇಶ-ವಿದೇಶಗಳ ನಾಗರಿಕರು ಭಾಗವಹಿಸಲಿದ್ದಾರೆ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಶ್ರೀ. ಚೇತನ ರಾಜಹಂಸ

ಫರ್ಮಾಗುಡಿ, ಫೊಂಡಾ ಗೋವಾದ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಸನಾತನ ರಾಷ್ಟ್ರದ ಶಂಖನಾದಕ್ಕಾಗಿ ಮೇ 17 ರಿಂದ 19, 2025 ರವರೆಗೆ ಮಹೋತ್ಸವ ನಡೆಯಲಿದೆ. ಅದರ ಮರುದಿನವೇ ಶತಚಂಡಿ ಯಾಗದ ಆಯೋಜನೆ ಮಾಡಲಾಗಿದೆ.

ಈ ಪತ್ರಿಕಾ ಪ್ರಕಟಣೆಯಲ್ಲಿ ಮುಂದೆ ತಿಳಿಸಿರುವಂತೆ,

1. ಮೇ 20 ರ ಮಧ್ಯಾಹ್ನ 4 ರಿಂದ ರಾತ್ರಿ 8; ಮೇ 21 ರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ಮತ್ತು ಮಧ್ಯಾಹ್ನ 4 ರಿಂದ ರಾತ್ರಿ 8, ಹಾಗೆಯೇ ಮೇ 22 ರ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30 ರವರೆಗೆ ಈ ಶತಚಂಡಿ ಯಾಗವು ನಡೆಯಲಿದೆ.

2. ಈ ಯಾಗದಲ್ಲಿ ಭಾಗವಹಿಸುವ ಜನರು ಭಾರತದ ವಿಜಯಕ್ಕಾಗಿ ಪ್ರಾರ್ಥಿಸಲಿದ್ದಾರೆ. ದೇವಭೂಮಿ, ತಪೋಭೂಮಿ, ಅವತಾರಭೂಮಿ ಮತ್ತು ಭೂಮಿಯ ಮೇಲಿನ ಏಕೈಕ ಸನಾತನ ರಾಷ್ಟ್ರವಾಗಿರುವ ಭಾರತದ ರಕ್ಷಣೆ ಮತ್ತು ವಿಜಯಕ್ಕಾಗಿ ನಡೆಯುವ ಶತಚಂಡಿ ಯಾಗದಲ್ಲಿ ಸಪ್ತಶತಿಯ ಸಾಮೂಹಿಕ ಪಠಣ, ಯಜ್ಞ ವಿಧಿಗಳು, ಆಹುತಿ ಮತ್ತು ಪೂರ್ಣಾಹುತಿ ಇತ್ಯಾದಿಗಳು ಇರಲಿವೆ.

3. ಈ ಯಾಗದ ಮೊದಲು ಮೇ 17 ರಿಂದ 19, 2025 ರವರೆಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ರಾಷ್ಟ್ರ-ಧರ್ಮ ಮತ್ತು ಹಿಂದೂ ಸಮಾಜದ ರಕ್ಷಣೆಗೆ ಸಂಬಂಧಿಸಿದ ಮಹತ್ವದ ಗಣ್ಯರ ಚಿಂತನ ಮಂಥನ, ಸಂತ ಸಭೆ ಮತ್ತು ಇತರ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.