ಪಾಕಿಸ್ತಾನವು ದೇವಸ್ಥಾನಗಳು, ಕಾನ್ವೆಂಟ್ ಶಾಲೆಗಳಂತಹ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸುತ್ತಿದೆ!

  • ಭಾರತದ ವಿದೇಶಾಂಗ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ನೀಡಲಾದ ಮಾಹಿತಿ

  • ನಾಗರಿಕ ವಿಮಾನ ನಿಲ್ದಾಣಗಳನ್ನು ಗುರಾಣಿಯನ್ನಾಗಿ ಮಾಡಲಾಗಿದೆ!

  • ಅಂತರರಾಷ್ಟ್ರೀಯ ಹಣಕಾಸು ನಿಧಿಯ ಸಭೆಯಲ್ಲಿ ಭಾರತವು ತನ್ನ ನಿಲುವನ್ನು ಮಂಡಿಸಲಿದೆ

ನವದೆಹಲಿ – ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದ ಗುರುದ್ವಾರದ ಮೇಲೆ ಪಾಕಿಸ್ತಾನವು ದಾಳಿ ಮಾಡಿದೆ. ಅಲ್ಲದೆ, ಇಲ್ಲಿನ ಕ್ರೈಸ್ತ ಶಾಲೆಯೊಂದರ ಬಳಿಯೂ ಶೆಲ್‌ಗಳನ್ನು ಹಾರಿಸಲಾಗಿದೆ. ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ದುರಾದೃಷ್ಟವಶಾತ್ ಮೃತಪಟ್ಟಿದ್ದಾರೆ. ಮತ್ತೊಂದು ಕ್ರೈಸ್ತ ಕಾನ್ವೆಂಟ್ ಮೇಲೂ ದಾಳಿ ಮಾಡಲಾಗಿದೆ. ಅದೃಷ್ಟವಶಾತ್ ಶಾಲೆ ಮುಚ್ಚಿದ್ದರಿಂದ ಅಲ್ಲಿನ ಜನರು ಬಚಾವಾದರು. ಪಾಕಿಸ್ತಾನವು ಕಾನ್ವೆಂಟ್ ಶಾಲೆಗಳು ಮತ್ತು ದೇವಸ್ಥಾನಗಳಂತಹ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸುವ ಮೂಲಕ ತನ್ನ ನೀಚತನವನ್ನು ತೋರಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಮೇ 9 ರ ಸಂಜೆ ವಿದೇಶಾಂಗ ಸಚಿವಾಲಯದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಿಸ್ರಿ ಅವರು ಮಾತು ಮುಂದುವರೆಸಿ,

1. ಪಾಕಿಸ್ತಾನವು ಪ್ರಚೋದನಕಾರಿ, ಬೇಜವಾಬ್ದಾರಿಯುತ ಮತ್ತು ಹೆಚ್ಚುಸುವ ಆಕ್ರಮಣಗಳನ್ನು ಮಾಡುತ್ತಿದೆ. ಅಲ್ಲದೆ, ಸುಳ್ಳು ಮಾಹಿತಿಯನ್ನು ಹರಡುತ್ತಿದೆ. ‘ಭಾರತೀಯ ವಾಯುಸೇನೆಯೇ ಅಮೃತಸರದಲ್ಲಿ ದಾಳಿ ಮಾಡಿದೆ’ ಎಂದು ಸುಳ್ಳು ಆರೋಪ ಮಾಡುವ ಮೂಲಕ ಜಗತ್ತಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ.

2. ಭಾರತವು ಮುನ್ನೆಚ್ಚರಿಕಾ ಕ್ರಮವಾಗಿ ಕರ್ತಾರ್ಪುರ ಸಾಹಿಬ್ ಕಾರಿಡಾರ್ ಅನ್ನು ಮುಚ್ಚಿದೆ.

3. ಮೇ 7 ರ ಬೆಳಿಗ್ಗೆಯಿಂದ ಪಾಕಿಸ್ತಾನವು ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸುತ್ತಿದೆ.

4. ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ನಡೆಯುವ ಸಭೆಯಲ್ಲಿ ಭಾರತವು ತನ್ನ ನಿಲುವನ್ನು (ಪಾಕಿಸ್ತಾನದ ಮುಖವಾಡ ಕಳಚುವ) ಮಂಡಿಸಲಿದೆ.

5. ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರು ಅಮೇರಿಕ ಮತ್ತು ನಾರ್ವೆಯ ವಿದೇಶಾಂಗ ಸಚಿವರೊಂದಿಗೆ ಚರ್ಚಿಸಿದ್ದು, ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಅಮೇರಿಕವು ಭಾರತದೊಂದಿಗೆ ಇದೆ ಎಂದು ಭರವಸೆ ನೀಡಿದೆ.

ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ನಾಗರಿಕ ವಿಮಾನ ನಿಲ್ದಾಣಗಳನ್ನು ಮುಚ್ಚದೆ ಅವುಗಳನ್ನು ಗುರಾಣಿಯನ್ನಾಗಿ ಮಾಡುತ್ತಿದೆ! – ಸೇನೆ

ಪಾಕಿಸ್ತಾನವು ನಿಯಂತ್ರಣ ರೇಖೆಯಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಇದರಲ್ಲಿ ಕೆಲವು ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ. ಭಾರತವು ಸಹ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತವು ಪಾಕಿಸ್ತಾನದ 4 ವಾಯುನೆಲೆಗಳ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ನಾಗರಿಕ ವಿಮಾನ ನಿಲ್ದಾಣಗಳನ್ನು ಮುಚ್ಚದೆ ಅವುಗಳನ್ನು ಗುರಾಣಿಯನ್ನಾಗಿ ಮಾಡಿದೆ. ಭಾರತೀಯ ವಾಯುಪಡೆಯು ಸಂಯಮದಿಂದ ಪರಾಕ್ರಮ ಮೆರೆಯುತ್ತಿದೆ ಎಂದು ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಪಾದಕೀಯ ನಿಲುವು

‘ಭಯೋತ್ಪಾದನೆಗೆ ಧರ್ಮವಿದೆ ಮತ್ತು ಅದು ಇಸ್ಲಾಂ’, ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಪಾಕಿಸ್ತಾನದ ಈ ರೀತಿಯ ಮಿಲಿಟರಿ ಕ್ರಮದ ಬಗ್ಗೆ ಕಾಂಗ್ರೆಸ್ ಮತ್ತು ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳಿಗೆ ಈಗ ಪ್ರಶ್ನಿಸಬೇಕು!