ಭಾರತವು ಪಾಕಿಸ್ತಾನದ ಮೇಲೆ ‘ವಾಯುದಾಳಿ’ ನಡೆಸುವ ಬಗ್ಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಗೆ ದೊರೆತಿದ್ದ ಮುನ್ಸೂಚನೆ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮ ದಿನಾಂಕದ ಪ್ರಕಾರ ಮೇ 6 ರಂದು ಅವರ ಹುಟ್ಟುಹಬ್ಬವಿತ್ತು. ಅದೇ ದಿನ ಸಂಜೆ ತಮಿಳುನಾಡಿನ ಕಾಂಚೀಪುರಂನಲ್ಲಿದ್ದಾಗ ಬಹಳ ಜೋರಾದ ಬಿರುಗಾಳಿ ಬೀಸಿತ್ತು. ಈ ಗಾಳಿಯು ಎಷ್ಟು ಪ್ರಬಲವಾಗಿತ್ತೆಂದರೆ, ‘ಯುದ್ಧ ಪ್ರಾರಂಭವಾಗುತ್ತದೆ ಮತ್ತು ಇದು ಭಾರತ-ಪಾಕ್ ಯುದ್ಧದ ಮೂಲಕ ಮೂರನೇ ಮಹಾಯುದ್ಧದ ಮುನ್ನುಡಿಯೇನೋ’ ಎಂಬಂತೆ ಭಾಸವಾಗುತ್ತಿತ್ತು. ಈ ಸಮಯದಲ್ಲಿ ಕಾಂಚೀಪುರಂನಲ್ಲಿ ಬಿರುಗಾಳಿ ಎಷ್ಟು ತೀವ್ರವಾಗಿ ಬೀಸುತ್ತಿತ್ತು ಎಂದರೆ ಶ್ರೀ ಕಾಮಾಕ್ಷಿದೇವಿ ಈ ಯುದ್ಧದಲ್ಲಿ ಭಾಗವಹಿಸಲಿದ್ದಾಳೆ ಎಂದೂ ನನಗೆ ಅನಿಸಿತು. (ಕಾಂಚೀಪುರಂ ಶ್ರೀ ಕಾಮಾಕ್ಷಿದೇವಿಯ ಸ್ಥಾನ). ‘ಕಾಂಚೀಪುರಂ ಬ್ರಹ್ಮಾಂಡದ ದೇವಿಯ ಲೋಕವಾಗಿದ್ದು, ಸಾಕ್ಷಾತ್ ದೇವಿಯೇ ಈ ಯುದ್ಧದಲ್ಲಿ ಭಾಗಿಯಾಗಿರಬಹುದು’ ಎಂದು ಅನಿಸಿತು.

ನನ್ನ ಜೊತೆ ಸೇವೆ ಮಾಡುತ್ತಿದ್ದ ಶ್ರೀ. ವಿನೀತ ದೇಸಾಯಿ ಮತ್ತು ಶ್ರೀ. ಸ್ನೇಹಲ್ ರಾವುತ ಎಂಬ ಇಬ್ಬರು ಸಾಧಕರು ಚೆನ್ನೈನಿಂದ ಕಾಂಚೀಪುರಂಗೆ ಮೇ 6 ರ ಸಂಜೆ ಬರುತ್ತಿದ್ದರು. ದಾರಿಯಲ್ಲಿ ಅವರಿಗೆ ಮಿಂಚು ಮತ್ತು ಗುಡುಗು ಕಾಣಿಸಿತು. ಒಂದು ಕ್ಷಣ ಮಿಂಚು ಹೊಳೆದಾಗ ಆ ಮಿಂಚಿನ ಆಕಾರ ತ್ರಿಶೂಲದಂತೆ ಕಾಣಿಸಿತು. ಇದರಿಂದ ‘ಮುಂದಿನ ಕಾರ್ಯಾಚರಣೆ ‘ಆಪರೇಷನ್ ತ್ರಿಶೂಲ್’ ಆಗಿರಬಹುದೇನೋ?’ ಎಂದು ಅವರಿಗೆ ಅನಿಸಿತು.

ಮೇ 7 ರಂದು ಬೆಳಗ್ಗೆ ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ‘ವಾಯುದಾಳಿ’ ನಡೆಸಿದೆ ಎಂದು ತಿಳಿದಾಗ, ನನಗೆ ಈ ಮೇಲಿನ ಅನುಭವದ ಅರ್ಥ ತಿಳಿಯಿತು. ಭಾರತೀಯ ಸೇನೆಯು ನಡೆಸಿದ ಈ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಡಲಾಗಿತ್ತು. ‘ಸಿಂಧೂರ್’ ಎಂಬ ಪದವು ಕುಂಕುಮಕ್ಕೆ ಸಂಬಂಧಿಸಿದೆ ಮತ್ತು ಸಾತ್ವಿಕ ಕುಂಕುಮದ ಉತ್ಪತ್ತಿ ಸ್ಥಾನ ಕಾಂಚೀಪುರಂನಲ್ಲಿದೆ. ಇದರಿಂದ ಶ್ರೀ ಕಾಮಾಕ್ಷಿದೇವಿಯ ಸ್ಥಾನ ಮತ್ತು ಕಾರ್ಯಾಚರಣೆಯ ಹೆಸರಿನ ಅರ್ಥ ಸ್ಪಷ್ಟವಾಯಿತು.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ, ಕಾಂಚೀಪುರಂ, ತಮಿಳುನಾಡು. (7.5.2025)