ಸಾಧಕರೇ, ವ್ಯಾಯಾಮದ ವಿವಿಧ ಲಾಭಗಳನ್ನು ತಿಳಿದುಕೊಳ್ಳಿ ಮತ್ತು ದಣಿವು ಅಥವಾ ಇತರ ದೈಹಿಕ ಅಡಚಣೆಗಳಿದ್ದರೂ ಪ್ರತಿದಿನ ಸ್ವಲ್ಪವಾದರೂ ವ್ಯಾಯಾಮ ಮಾಡಿ !

‘ಕೆಲವೊಮ್ಮೆ ಸಾಧಕರಿಗೆ ಆಧ್ಯಾತ್ಮಿಕ ತೊಂದರೆಗಳಿಂದ ಶಾರೀರಿಕ ದಣಿವಾಗುತ್ತದೆ. ಆದ್ದರಿಂದ ಸಾಧಕರಿಗೆ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅವರು ವ್ಯಾಯಾಮವನ್ನು ಮಾಡದಿದ್ದರೆ, ಅವರ ಶಾರೀರಿಕ ತೊಂದರೆ ಹೆಚ್ಚಾಗಬಹುದು. ಸಾಧಕರು ಎಂದಿನಂತೆ ಯಾವುದಾದರೊಂದು ವ್ಯಾಯಾಮದ ಪ್ರಕಾರವನ್ನು ೧೦ ಬಾರಿ ಮಾಡುವುದು ಅಪೇಕ್ಷಿತವಿದ್ದರೆ, ದಣಿವಿದ್ದಾಗ ಆ ವ್ಯಾಯಾಮದ ಪ್ರಕಾರವನ್ನು ಕನಿಷ್ಠಪಕ್ಷ ಒಮ್ಮೆಯಾದರೂ ಮಾಡಬೇಕು.

ವ್ಯಾಯಾಮದಿಂದ ‘ಶಕ್ತಿ ಹೆಚ್ಚುವುದು, ದೈಹಿಕ ಕ್ಷಮತೆ ಹೆಚ್ಚುವುದು’, ಇತ್ಯಾದಿ ದೈಹಿಕ ಮತ್ತು ಮನೋಬಲ ಹಾಗೂ ಉತ್ಸಾಹ ಹೆಚ್ಚಾಗುವುದು’ ಇತ್ಯಾದಿ ಮಾನಸಿಕ ಲಾಭಗಳಂತೂ ಆಗುತ್ತವೆ, ಹಾಗೆಯೇ ‘ತಮ್ಮ ಸುತ್ತಲಿನ ಅನಿಷ್ಟ ಶಕ್ತಿಗಳ ಆವರಣ ಕಡಿಮೆಯಾಗುವುದು, ಹಗುರವೆನಿಸುವುದು, ಮನಸ್ಸಿನಲ್ಲಿ ವಿಚಾರಗಳು ಕಡಿಮೆಯಾಗಿ ಏಕಾಗ್ರತೆ ಹೆಚ್ಚಾಗುತ್ತದೆ. ಅದರಿಂದ ಸಾಧನೆ ಮತ್ತು ಸೇವೆಯ ಫಲಶೃತಿ ಹೆಚ್ಚಾಗುವುದು’, ಇತ್ಯಾದಿ ಆಧ್ಯಾತ್ಮಿಕ ಲಾಭಗಳಾಗುತ್ತವೆ. ಇದನ್ನು ಗಮನದಲ್ಲಿಟ್ಟು ಸಾಧಕರಿಗೆ ದೈಹಿಕ ಅಡಚಣೆಗಳಿದ್ದರೂ, ಅವರು ಪ್ರತಿದಿನ ಸ್ವಲ್ಪಮಟ್ಟಿಗಾದರೂ ವ್ಯಾಯಾಮವನ್ನು ಮಾಡುವುದು ಆವಶ್ಯಕವಾಗಿದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ